<p>ಕಮಲನಗರ: ತಾಲ್ಲೂಕಿನ ಮೈಲೂರ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಎರಡು ಕೋಣೆಗಳನ್ನು ಒಂದನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿ ಬೀಗ ಹಾಕಿಕೊಂಡಿದ್ದಾರೆ. ಇದರಿಂದ ಒಂದೇ ಕೊಠಡಿಯಲ್ಲಿ ಮಕ್ಕಳ ಕುಳಿತು ಪಾಠ ಕೇಳುವಂತಾಗಿದೆ.</p>.<p>ಕುಳಿತುಕೊಳ್ಳಲು ಇಲ್ಲದ ಜಾಗ ಇಲ್ಲದಂತಾಗಿದ್ದು ಶಿಕ್ಷಕರು ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ತರಗತಿ ಕೋಣೆಯಲ್ಲಿ ಮುಖ್ಯಶಿಕ್ಷಕರ ಕಾರ್ಯಾಲಯದ ಜತೆಗೆ ಅಡುಗೆ ಸಾಮಗ್ರಿಗಳನ್ನೂ ಇರಿಸಲಾಗಿದೆ.</p>.<p>ತಾಲ್ಲೂಕು ಕೇಂದ್ರದಿಂದ ಕೇವಲ 15 ಕಿ.ಮೀ.ದೂರದ ಗಡಿ ಭಾಗದ ಮುಖ್ಯರಸ್ತೆಯಲ್ಲಿ ಇರುವ ಮೈಲೂರ್ ತಾಂಡಾ (ದಾಸಾನಾಯಕ ತಾಂಡಾ)ದಲ್ಲಿ 2000ಕ್ಕೂ ಅಧಿಕ ಜನಸಂಖ್ಯೆ ಇದೆ. ಕಂದಾಯ ಗ್ರಾಮವಾಗಿರುವ ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1–4ನೇ ತರಗತಿಯಲ್ಲಿ 20 ಮಕ್ಕಳು ಅಭ್ಯಾಸ ಮಾಡುತ್ತಾರೆ.</p>.<p>ಮುಖ್ಯಶಿಕ್ಷಕರ ಇಬ್ಬರ ಕಾಯಂ ಶಿಕ್ಷರು, ಒಬ್ಬ ಅತಿಥಿ ಶಿಕ್ಷಕರಿದ್ದಾರೆ.</p>.<p>‘ಶಾಲೆಗೆ ನೀಡಿದ ನಿವೇಶನ ನಮಗೆ ಸೇರಿದ್ದು’ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿ ಕೋಣೆಗೆ ಬೀಗ ಹಾಕಿದ್ದಾರೆ. </p>.<p>ಬಯಲಲ್ಲೇ ಬಿಸಿಯೂಟ ತಯಾರು: ನ್ಯಾಯಾಲಯದಲ್ಲಿ ಪ್ರಕರಣ ದಾಕಲಿಸಿದ ವ್ಯಕ್ತಿ ಬೀಗ ಹಾಕಿಕೊಂಡು ಹೋದ ಕೊಠಡಿ ಒಳಗೆ ಅಡುಗೆ ತಯಾರಿಗೆ ಬೇಕಾದ ಆಹಾರ ಧಾನ್ಯಗಳು, ಸಿಲೆಂಡರ್, ತಟ್ಟೆ ಮತ್ತು ಇನ್ನಿತರ ಇವೆ.</p>.<p>ಮುಖ್ಯ ಅಡುಗೆ ಸಿಬ್ಬಂದಿ ಬಯಲಲ್ಲೇ ಕಲ್ಲಿನ ಒಲೆ ಸಿದ್ದಪಡಿಸಿ ಕಟ್ಟಿಗೆ ಇಟ್ಟು ಅಡುಗೆ ತಯಾರಿಸುವ ಪರಿಸ್ಥಿತಿ ಎದುರಾಗಿದೆ.</p>.<p>ನೀರು ಶುದ್ಧೀಕರಣ ಯಂತ್ರವನ್ನೂ ಕಾಟಾಚಾರಕ್ಕೆ ಅಳವಡಿಸಲಾಗಿದೆ. ಕುಡಿಯುವ ನೀರಿಗಾಗಿ ಚಾವಣಿ ಮೇಲೆ ಎರಡು ಟ್ಯಾಂಕ್ಗಳನ್ನು ಅಳವಡಿಸಲಾಗಿದೆ. ಆದರೆ ನಳದ ಸಂಪರ್ಕ ಕಲ್ಪಿಸದೆ ಇರುವುದರಿಂದ ಮಕ್ಕಳು ಮನೆಯಿಂದ ಬಾಟಲಿಯಲ್ಲಿ ನೀರು ತರುತ್ತಾರೆ.</p>.<p>ಕಾಂಪೌಂಡ್ ಇಲ್ಲದಿರುವುದರಿಂದ ಗ್ರಾಮದ ಮಕ್ಕಳು ಮತ್ತು ಹೆಣ್ಣು ಮಕ್ಕಳು ಮಲಮೂತ್ರ ವಿಸರ್ಜಿಸುತ್ತಿದ್ದು ವಾತಾವರಣ ಸದಾ ದುರ್ವಾಸನೆಯಿಂದ ಕೂಡಿರುತ್ತದೆ.</p>.<div><blockquote>ಶಾಲೆಗೆ ಕುಡಿಯುವ ನೀರು ಸಮರ್ಪಕ ತರಗತಿ ಕೋಣೆ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು </blockquote><span class="attribution">–ಶಿವಾನಂದ ಸ್ವಾಮಿ, ರೈತ ಮುಖಂಡ</span></div>.<div><blockquote>ಶಾಲೆಯಲ್ಲಿ ಸೌಲಭ್ಯ ಇಲ್ಲದರಿವ ಬಗ್ಗೆ ಮತ್ತು ನಿವೇಶನದ ತಕರಾರು ಇರುವ ಕುರಿತು ಮಾಹಿತಿ ಪಡೆದು ತಕ್ಷಣ ಕ್ರಮ ಕೈಗೊಳ್ಳುತ್ತೇನೆ.</blockquote><span class="attribution">–ವಿಜಯಲಕ್ಷ್ಮಿ ಭೀಮಾಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ಔರಾದ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಮಲನಗರ: ತಾಲ್ಲೂಕಿನ ಮೈಲೂರ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಎರಡು ಕೋಣೆಗಳನ್ನು ಒಂದನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿ ಬೀಗ ಹಾಕಿಕೊಂಡಿದ್ದಾರೆ. ಇದರಿಂದ ಒಂದೇ ಕೊಠಡಿಯಲ್ಲಿ ಮಕ್ಕಳ ಕುಳಿತು ಪಾಠ ಕೇಳುವಂತಾಗಿದೆ.</p>.<p>ಕುಳಿತುಕೊಳ್ಳಲು ಇಲ್ಲದ ಜಾಗ ಇಲ್ಲದಂತಾಗಿದ್ದು ಶಿಕ್ಷಕರು ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ತರಗತಿ ಕೋಣೆಯಲ್ಲಿ ಮುಖ್ಯಶಿಕ್ಷಕರ ಕಾರ್ಯಾಲಯದ ಜತೆಗೆ ಅಡುಗೆ ಸಾಮಗ್ರಿಗಳನ್ನೂ ಇರಿಸಲಾಗಿದೆ.</p>.<p>ತಾಲ್ಲೂಕು ಕೇಂದ್ರದಿಂದ ಕೇವಲ 15 ಕಿ.ಮೀ.ದೂರದ ಗಡಿ ಭಾಗದ ಮುಖ್ಯರಸ್ತೆಯಲ್ಲಿ ಇರುವ ಮೈಲೂರ್ ತಾಂಡಾ (ದಾಸಾನಾಯಕ ತಾಂಡಾ)ದಲ್ಲಿ 2000ಕ್ಕೂ ಅಧಿಕ ಜನಸಂಖ್ಯೆ ಇದೆ. ಕಂದಾಯ ಗ್ರಾಮವಾಗಿರುವ ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1–4ನೇ ತರಗತಿಯಲ್ಲಿ 20 ಮಕ್ಕಳು ಅಭ್ಯಾಸ ಮಾಡುತ್ತಾರೆ.</p>.<p>ಮುಖ್ಯಶಿಕ್ಷಕರ ಇಬ್ಬರ ಕಾಯಂ ಶಿಕ್ಷರು, ಒಬ್ಬ ಅತಿಥಿ ಶಿಕ್ಷಕರಿದ್ದಾರೆ.</p>.<p>‘ಶಾಲೆಗೆ ನೀಡಿದ ನಿವೇಶನ ನಮಗೆ ಸೇರಿದ್ದು’ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿ ಕೋಣೆಗೆ ಬೀಗ ಹಾಕಿದ್ದಾರೆ. </p>.<p>ಬಯಲಲ್ಲೇ ಬಿಸಿಯೂಟ ತಯಾರು: ನ್ಯಾಯಾಲಯದಲ್ಲಿ ಪ್ರಕರಣ ದಾಕಲಿಸಿದ ವ್ಯಕ್ತಿ ಬೀಗ ಹಾಕಿಕೊಂಡು ಹೋದ ಕೊಠಡಿ ಒಳಗೆ ಅಡುಗೆ ತಯಾರಿಗೆ ಬೇಕಾದ ಆಹಾರ ಧಾನ್ಯಗಳು, ಸಿಲೆಂಡರ್, ತಟ್ಟೆ ಮತ್ತು ಇನ್ನಿತರ ಇವೆ.</p>.<p>ಮುಖ್ಯ ಅಡುಗೆ ಸಿಬ್ಬಂದಿ ಬಯಲಲ್ಲೇ ಕಲ್ಲಿನ ಒಲೆ ಸಿದ್ದಪಡಿಸಿ ಕಟ್ಟಿಗೆ ಇಟ್ಟು ಅಡುಗೆ ತಯಾರಿಸುವ ಪರಿಸ್ಥಿತಿ ಎದುರಾಗಿದೆ.</p>.<p>ನೀರು ಶುದ್ಧೀಕರಣ ಯಂತ್ರವನ್ನೂ ಕಾಟಾಚಾರಕ್ಕೆ ಅಳವಡಿಸಲಾಗಿದೆ. ಕುಡಿಯುವ ನೀರಿಗಾಗಿ ಚಾವಣಿ ಮೇಲೆ ಎರಡು ಟ್ಯಾಂಕ್ಗಳನ್ನು ಅಳವಡಿಸಲಾಗಿದೆ. ಆದರೆ ನಳದ ಸಂಪರ್ಕ ಕಲ್ಪಿಸದೆ ಇರುವುದರಿಂದ ಮಕ್ಕಳು ಮನೆಯಿಂದ ಬಾಟಲಿಯಲ್ಲಿ ನೀರು ತರುತ್ತಾರೆ.</p>.<p>ಕಾಂಪೌಂಡ್ ಇಲ್ಲದಿರುವುದರಿಂದ ಗ್ರಾಮದ ಮಕ್ಕಳು ಮತ್ತು ಹೆಣ್ಣು ಮಕ್ಕಳು ಮಲಮೂತ್ರ ವಿಸರ್ಜಿಸುತ್ತಿದ್ದು ವಾತಾವರಣ ಸದಾ ದುರ್ವಾಸನೆಯಿಂದ ಕೂಡಿರುತ್ತದೆ.</p>.<div><blockquote>ಶಾಲೆಗೆ ಕುಡಿಯುವ ನೀರು ಸಮರ್ಪಕ ತರಗತಿ ಕೋಣೆ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು </blockquote><span class="attribution">–ಶಿವಾನಂದ ಸ್ವಾಮಿ, ರೈತ ಮುಖಂಡ</span></div>.<div><blockquote>ಶಾಲೆಯಲ್ಲಿ ಸೌಲಭ್ಯ ಇಲ್ಲದರಿವ ಬಗ್ಗೆ ಮತ್ತು ನಿವೇಶನದ ತಕರಾರು ಇರುವ ಕುರಿತು ಮಾಹಿತಿ ಪಡೆದು ತಕ್ಷಣ ಕ್ರಮ ಕೈಗೊಳ್ಳುತ್ತೇನೆ.</blockquote><span class="attribution">–ವಿಜಯಲಕ್ಷ್ಮಿ ಭೀಮಾಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ಔರಾದ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>