<p><strong>ಬಸವಕಲ್ಯಾಣ</strong>: ‘ಚಿಕ್ಕ ವಯಸ್ಸಿನಲ್ಲಿಯೇ ಮಠದ ಜವಾಬ್ದಾರಿ ವಹಿಸಿಕೊಂಡಿರುವ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಧಾರ್ಮಿಕ ಚಟುವಟಿಕೆಯೊಂದಿಗೆ ಸಮಾಜೋದ್ಧಾರ ಕಾರ್ಯವನ್ನೂ ಕೈಗೊಳ್ಳುತ್ತಿದ್ದಾರೆ’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಶ್ಲಾಘಿಸಿದರು.</p>.<p>ನಗರದ ತ್ರಿಪುರಾಂತ ಗವಿಮಠದಲ್ಲಿ ಬುಧವಾರ ನಡೆದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ ಮಾತನಾಡಿ,‘ಸಮಾಜದಲ್ಲಿ ಸುಖ, ಶಾಂತಿ ನೆಲೆಸುವಲ್ಲಿ ಮಠಾಧೀಶರ ಪಾತ್ರ ಬಹಳಷ್ಟಿದೆ. ಅಭಿನವಶ್ರೀಗಳು ದುಶ್ಚಟ ಬಿಡಿಸುವ ಅಭಿಯಾನವೂ ಹಮ್ಮಿಕೊಂಡಿದ್ದರು’ ಎಂದು ಅವರು ಹೇಳಿದರು.</p>.<p>ಚಿಂಚನಸೂರು ಸಿದ್ಧಮಲ್ಲ ಶಿವಾಚಾರ್ಯರು, ಮುಖಂಡರಾದ ಮಾಲಾ ನಾರಾಯಣರಾವ್, ಬಾಬು ಹೊನ್ನಾನಾಯಕ, ಲತಾ ಹಾರಕೂಡೆ, ಪ್ರದೀಪ ವಾತಡೆ, ಅರ್ಜುನ ಕನಕ, ಮನೋಹರ ಮೈಸೆ, ದೀಪಕ ಮಾಲಗಾರ, ಶಹಾಜಹಾನಾ ತತ್ವೀರ್, ಸುಧೀರ್ ಕಾಡಾದಿ ಹಾಗೂ ಭಕ್ತ ಕುಂಬಾರ ಮಾತನಾಡಿದರು.</p>.<p>ಪ್ರಮುಖರಾದ ಆನಂದ ದೇವಪ್ಪ, ರಾಜಕುಮಾರ ಶಿರಗಾಪುರ, ಶರಣಪ್ಪ ಬಿರಾದಾರ, ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ಆಲಗೂಡೆ, ರುದ್ರೇಶ್ವರ ಗೋರಟಾ, ಅಮೃತಸಿಂಗ್ ಧಾಮಿ, ಮಹಾಂತಯ್ಯ ಮಠಪತಿ, ಮೇಘರಾಜ ನಾಗರಾಳೆ ಇದ್ದರು.</p>.<p>ಭಕ್ತರು ಸ್ವಾಮೀಜಿ ಅವರನ್ನು ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ‘ಚಿಕ್ಕ ವಯಸ್ಸಿನಲ್ಲಿಯೇ ಮಠದ ಜವಾಬ್ದಾರಿ ವಹಿಸಿಕೊಂಡಿರುವ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಧಾರ್ಮಿಕ ಚಟುವಟಿಕೆಯೊಂದಿಗೆ ಸಮಾಜೋದ್ಧಾರ ಕಾರ್ಯವನ್ನೂ ಕೈಗೊಳ್ಳುತ್ತಿದ್ದಾರೆ’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಶ್ಲಾಘಿಸಿದರು.</p>.<p>ನಗರದ ತ್ರಿಪುರಾಂತ ಗವಿಮಠದಲ್ಲಿ ಬುಧವಾರ ನಡೆದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ ಮಾತನಾಡಿ,‘ಸಮಾಜದಲ್ಲಿ ಸುಖ, ಶಾಂತಿ ನೆಲೆಸುವಲ್ಲಿ ಮಠಾಧೀಶರ ಪಾತ್ರ ಬಹಳಷ್ಟಿದೆ. ಅಭಿನವಶ್ರೀಗಳು ದುಶ್ಚಟ ಬಿಡಿಸುವ ಅಭಿಯಾನವೂ ಹಮ್ಮಿಕೊಂಡಿದ್ದರು’ ಎಂದು ಅವರು ಹೇಳಿದರು.</p>.<p>ಚಿಂಚನಸೂರು ಸಿದ್ಧಮಲ್ಲ ಶಿವಾಚಾರ್ಯರು, ಮುಖಂಡರಾದ ಮಾಲಾ ನಾರಾಯಣರಾವ್, ಬಾಬು ಹೊನ್ನಾನಾಯಕ, ಲತಾ ಹಾರಕೂಡೆ, ಪ್ರದೀಪ ವಾತಡೆ, ಅರ್ಜುನ ಕನಕ, ಮನೋಹರ ಮೈಸೆ, ದೀಪಕ ಮಾಲಗಾರ, ಶಹಾಜಹಾನಾ ತತ್ವೀರ್, ಸುಧೀರ್ ಕಾಡಾದಿ ಹಾಗೂ ಭಕ್ತ ಕುಂಬಾರ ಮಾತನಾಡಿದರು.</p>.<p>ಪ್ರಮುಖರಾದ ಆನಂದ ದೇವಪ್ಪ, ರಾಜಕುಮಾರ ಶಿರಗಾಪುರ, ಶರಣಪ್ಪ ಬಿರಾದಾರ, ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ಆಲಗೂಡೆ, ರುದ್ರೇಶ್ವರ ಗೋರಟಾ, ಅಮೃತಸಿಂಗ್ ಧಾಮಿ, ಮಹಾಂತಯ್ಯ ಮಠಪತಿ, ಮೇಘರಾಜ ನಾಗರಾಳೆ ಇದ್ದರು.</p>.<p>ಭಕ್ತರು ಸ್ವಾಮೀಜಿ ಅವರನ್ನು ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>