<p><strong>ಔರಾದ್ (ಬೀದರ್ ಜಿಲ್ಲೆ):</strong> ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಸಂತಪೂರದಲ್ಲಿ ಆಧಾರ್ ಕೇಂದ್ರ ಸ್ಥಗಿತವಾಗಿದ್ದು, 40 ಗ್ರಾಮಗಳ ಜನ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.</p>.<p>ಜಿಲ್ಲೆಯ 30 ಹೋಬಳಿ ಪೈಕಿ 11 ಕಡೆ ಮಾತ್ರ ಆಧಾರ್ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಸಂತಪೂರ ಒಂದಾಗಿದೆ. ಸದ್ಯ, 40 ಗ್ರಾಮ ಹಾಗೂ 16 ತಂಡಾಗಳ ಜನ ಆಧಾರ್ ಸೌಲಭ್ಯಕ್ಕಾಗಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಕ್ಕೆ ಅಲೆಯಬೇಕಾದ ಪರಿಸ್ಥಿತಿ ಬಂದಿದೆ.</p>.<p>‘ಲಿಂಗದಳ್ಳಿ (ಕೆ) ಗ್ರಾಮದಿಂದ 30 ಕಿ.ಮೀ ದೂರದಿಂದ ಔರಾದ್ ತಾಲ್ಲೂಕು ಕೇಂದ್ರಕ್ಕೆ ಆಧಾರ್ ಅಪಡೇಟ್ಗೆ ಬಂದಿದ್ದೇನೆ. 4 ಗಂಟೆ ಸಾಲಿನಲ್ಲಿ ನಿಲ್ಲಬೇಕಾಯಿತು. ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಕಿರಣ ಬಿರಾದಾರ.</p>.<p>‘ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ನಾಲ್ಕು ಬಾರಿ ಔರಾದ್ಗೆ ಬಂದಿದ್ದೇನೆ. ಬೇಗ ಕೆಲಸ ಆಗುತ್ತಿಲ್ಲ’ ಎಂದು ಲಿಂಗದಳ್ಳಿಯ ರೈತ ರಮೇಶ ಕಾಶಿನಾಥ ಗೋಳು ತೋಡಿಕೊಂಡಿದ್ದಾರೆ.</p>.<p>‘ಇಷ್ಟು ದೊಡ್ಡ ಹೋಬಳಿ ಕೇಂದ್ರದಲ್ಲಿನ ಆಧಾರ್ ಕೇಂದ್ರ ಸ್ಥಗಿತ ಮಾಡಿರುವುದು ಜನರಿಗೆ ಸಮಸ್ಯೆಯಾಗಿದೆ. ಕೂಡಲೇ ಅದನ್ನು ಮತ್ತೆ ಆರಂಭಿಸಬೆಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಎಚ್ಚರಿಕೆ ನೀಡಿದರು.</p>.<div><blockquote>ಔರಾದ್ ತಾಲ್ಲೂಕಿನ 3 ಆಧಾರ್ ಕೇಂದ್ರಗಳ ಪೈಕಿ ಸಂತಪೂರ ಕೇಂದ್ರ ಸ್ಥಗಿತವಾಗಿದೆ. ಜನರಿಗೆ ಸಮಸ್ಯೆಯಾಗುತ್ತಿರುವ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ</blockquote><span class="attribution"> ಮಹೇಶ ಪಾಟೀಲ ತಹಶೀಲ್ದಾರ್ ಔರಾದ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್ (ಬೀದರ್ ಜಿಲ್ಲೆ):</strong> ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಸಂತಪೂರದಲ್ಲಿ ಆಧಾರ್ ಕೇಂದ್ರ ಸ್ಥಗಿತವಾಗಿದ್ದು, 40 ಗ್ರಾಮಗಳ ಜನ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.</p>.<p>ಜಿಲ್ಲೆಯ 30 ಹೋಬಳಿ ಪೈಕಿ 11 ಕಡೆ ಮಾತ್ರ ಆಧಾರ್ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಸಂತಪೂರ ಒಂದಾಗಿದೆ. ಸದ್ಯ, 40 ಗ್ರಾಮ ಹಾಗೂ 16 ತಂಡಾಗಳ ಜನ ಆಧಾರ್ ಸೌಲಭ್ಯಕ್ಕಾಗಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಕ್ಕೆ ಅಲೆಯಬೇಕಾದ ಪರಿಸ್ಥಿತಿ ಬಂದಿದೆ.</p>.<p>‘ಲಿಂಗದಳ್ಳಿ (ಕೆ) ಗ್ರಾಮದಿಂದ 30 ಕಿ.ಮೀ ದೂರದಿಂದ ಔರಾದ್ ತಾಲ್ಲೂಕು ಕೇಂದ್ರಕ್ಕೆ ಆಧಾರ್ ಅಪಡೇಟ್ಗೆ ಬಂದಿದ್ದೇನೆ. 4 ಗಂಟೆ ಸಾಲಿನಲ್ಲಿ ನಿಲ್ಲಬೇಕಾಯಿತು. ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಕಿರಣ ಬಿರಾದಾರ.</p>.<p>‘ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ನಾಲ್ಕು ಬಾರಿ ಔರಾದ್ಗೆ ಬಂದಿದ್ದೇನೆ. ಬೇಗ ಕೆಲಸ ಆಗುತ್ತಿಲ್ಲ’ ಎಂದು ಲಿಂಗದಳ್ಳಿಯ ರೈತ ರಮೇಶ ಕಾಶಿನಾಥ ಗೋಳು ತೋಡಿಕೊಂಡಿದ್ದಾರೆ.</p>.<p>‘ಇಷ್ಟು ದೊಡ್ಡ ಹೋಬಳಿ ಕೇಂದ್ರದಲ್ಲಿನ ಆಧಾರ್ ಕೇಂದ್ರ ಸ್ಥಗಿತ ಮಾಡಿರುವುದು ಜನರಿಗೆ ಸಮಸ್ಯೆಯಾಗಿದೆ. ಕೂಡಲೇ ಅದನ್ನು ಮತ್ತೆ ಆರಂಭಿಸಬೆಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಎಚ್ಚರಿಕೆ ನೀಡಿದರು.</p>.<div><blockquote>ಔರಾದ್ ತಾಲ್ಲೂಕಿನ 3 ಆಧಾರ್ ಕೇಂದ್ರಗಳ ಪೈಕಿ ಸಂತಪೂರ ಕೇಂದ್ರ ಸ್ಥಗಿತವಾಗಿದೆ. ಜನರಿಗೆ ಸಮಸ್ಯೆಯಾಗುತ್ತಿರುವ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ</blockquote><span class="attribution"> ಮಹೇಶ ಪಾಟೀಲ ತಹಶೀಲ್ದಾರ್ ಔರಾದ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>