ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟಗಳ ಬಾಧೆ ಕಂಡು ಬಂದಿದೆ.
ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ತಂಡವು ಬೀದರ್ ತಾಲ್ಲೂಕಿನ ಖಾಜಾಪುರ, ಚಿಮಕೋಡ್, ಚಿಲ್ಲರ್ಗಿ, ಬಸಂತಪುರ, ನಾಗೋರಾ, ಮಾಳೆಗಾಂವ್, ಇಮಾಮಬಾದ್ ಮೊದಲಾದ ಕಡೆಗಳಲ್ಲಿ ನಡೆಸಿದ ಸಮೀಕ್ಷೆ ವೇಳೆ ಹತ್ತಿಯಲ್ಲಿ ರಸ ಹೀರುವ ಕೀಟಗಳು, ಥ್ರಿಪ್ಸ್ ನುಸಿ, ಹಸಿರು ಜಿಗಿ ಹುಳು ಹಾಗೂ ಬಿಳಿ ನೊಣದ ಬಾಧೆ ಪತ್ತೆಯಾಗಿದೆ.