<p><strong>ಭಾಲ್ಕಿ:</strong> ತಾಲ್ಲೂಕಿನ ನಾವದಗಿ ಗ್ರಾಮದ ರೇವಪ್ಪಯ್ಯ ಮಂದಿರದಲ್ಲಿ ಜೂನ್ 17ರಂದು (ಮಂಗಳವಾರ) ಸದ್ಗುರು ರೇವಪ್ಪಯ್ಯ ಶಿವಶರಣರು ತಮ್ಮ ಜೀವಿತ ಕಾಲದಿಂದಲೂ ನಡೆಸಿಕೊಂಡು ಬರುತ್ತಿದ್ದ ಷಣ್ಮುಖಸ್ವಾಮಿ ಬಿನ್ನಹ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಸದಸ್ಯರು ತಿಳಿಸಿದ್ದಾರೆ.</p>.<p>ಪ್ರಾರಂಭದಲ್ಲಿ ಗದ್ದುಗೆ ಪೂಜೆ ನೆರವೇರಿಸಿ, ಮುತೈದೆಯರಿಗೆ ಪ್ರಸಾದ ನೀಡಿದ ನಂತರ ಬಿನ್ನಹ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಜಾತ್ರೆ ಎಂದ ತಕ್ಷಣ ತೇರು ಎಳೆಯುವುದು, ಅಗ್ನಿ ಪೂಜೆ ಇತ್ಯಾದಿ ಸಾಮಾನ್ಯ. ಆದರೆ, ಈ ಜಾತ್ರೆಯಲ್ಲಿ ಸಹಸ್ರಾರು ಜನರು ಹೂರಣ ಕಡುಬು– ತುಪ್ಪದ ಪ್ರಸಾದ ಸವಿಯುತ್ತಾರೆ. ಇಲ್ಲಿ ಹೋಳಿಗೆಯ ಹೂರಣ ಕಡುಬಿಗೆ ತುಪ್ಪ ಬಿಟ್ಟು ಬೇರೆ ಯಾವುದೇ ಪದಾರ್ಥ ನೀಡುವುದಿಲ್ಲ. ಈ ಬಿನ್ನಹ ಜಾತ್ರೆಯಲ್ಲಿ ಪ್ರಸಾದ ಸ್ವೀಕರಿಸಿದರೆ ಯಾವುದೇ ರೋಗ ಬರುವುದಿಲ್ಲ ಎನ್ನುವ ವಿಶ್ವಾಸದಿಂದ ರಾಜ್ಯದ ಅನೇಕ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ನೂರಾರು ಭಕ್ತಾರು ಬಂದು ಹೋಳಿಗೆ ತುಪ್ಪದ ಬಿನ್ನಹ ಸವಿಯುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ:</strong> ತಾಲ್ಲೂಕಿನ ನಾವದಗಿ ಗ್ರಾಮದ ರೇವಪ್ಪಯ್ಯ ಮಂದಿರದಲ್ಲಿ ಜೂನ್ 17ರಂದು (ಮಂಗಳವಾರ) ಸದ್ಗುರು ರೇವಪ್ಪಯ್ಯ ಶಿವಶರಣರು ತಮ್ಮ ಜೀವಿತ ಕಾಲದಿಂದಲೂ ನಡೆಸಿಕೊಂಡು ಬರುತ್ತಿದ್ದ ಷಣ್ಮುಖಸ್ವಾಮಿ ಬಿನ್ನಹ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಸದಸ್ಯರು ತಿಳಿಸಿದ್ದಾರೆ.</p>.<p>ಪ್ರಾರಂಭದಲ್ಲಿ ಗದ್ದುಗೆ ಪೂಜೆ ನೆರವೇರಿಸಿ, ಮುತೈದೆಯರಿಗೆ ಪ್ರಸಾದ ನೀಡಿದ ನಂತರ ಬಿನ್ನಹ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಜಾತ್ರೆ ಎಂದ ತಕ್ಷಣ ತೇರು ಎಳೆಯುವುದು, ಅಗ್ನಿ ಪೂಜೆ ಇತ್ಯಾದಿ ಸಾಮಾನ್ಯ. ಆದರೆ, ಈ ಜಾತ್ರೆಯಲ್ಲಿ ಸಹಸ್ರಾರು ಜನರು ಹೂರಣ ಕಡುಬು– ತುಪ್ಪದ ಪ್ರಸಾದ ಸವಿಯುತ್ತಾರೆ. ಇಲ್ಲಿ ಹೋಳಿಗೆಯ ಹೂರಣ ಕಡುಬಿಗೆ ತುಪ್ಪ ಬಿಟ್ಟು ಬೇರೆ ಯಾವುದೇ ಪದಾರ್ಥ ನೀಡುವುದಿಲ್ಲ. ಈ ಬಿನ್ನಹ ಜಾತ್ರೆಯಲ್ಲಿ ಪ್ರಸಾದ ಸ್ವೀಕರಿಸಿದರೆ ಯಾವುದೇ ರೋಗ ಬರುವುದಿಲ್ಲ ಎನ್ನುವ ವಿಶ್ವಾಸದಿಂದ ರಾಜ್ಯದ ಅನೇಕ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ನೂರಾರು ಭಕ್ತಾರು ಬಂದು ಹೋಳಿಗೆ ತುಪ್ಪದ ಬಿನ್ನಹ ಸವಿಯುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>