<p><strong>ಬಸವಕಲ್ಯಾಣ</strong>: ಗುರುವಾರ ಇಡೀ ದಿನ ಮೋಡಕವಿದ ವಾತಾವರಣವಿತ್ತು. ಅಂಥದರಲ್ಲಿ ಆಗ ಸೂರ್ಯಗ್ರಹಣ ಗೋಚರಿಸಿತು. ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಈ ಸಮಯದಲ್ಲಿ ಬುಟ್ಟಿ, ತಟ್ಟೆ ಹಾಗೂ ಇತರೆ ಪಾತ್ರೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಒನಕೆ ನಿಲ್ಲಿಸಿದರು.</p>.<p>ಬೆಳಿಗ್ಗೆ 8.05 ಗಂಟೆಯಿಂದ 11.04 ಗಂಟೆಯವರೆಗೆ ಗ್ರಹಣವಿತ್ತು. ಮೋಡಗಳಲ್ಲಿ ಹೆಚ್ಚು ಬೆಳಕು ಇಲ್ಲದ್ದರಿಂದ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ.ಪಟ್ಟಣದಲ್ಲಿ ಎಲ್ಲಿಯೂ ಗ್ರಹಣ ನೋಡಲು ವಿಶೇಷ ಕನ್ನಡಕದ ವ್ಯವಸ್ಥೆ ಮಾಡಿರಲಿಲ್ಲ. ಆದ್ದರಿಂದ ಅನೇಕರು ಮೊಬೈಲ್ ಗಳ ಮೂಲಕ ಭಾವಚಿತ್ರ ತೆಗೆದು ನೋಡಿದರು.</p>.<p>ಗ್ರಹಣದ ಕಾಲದಲ್ಲಿ ಕೆಲವೆಡೆ ನೀರಿನಲ್ಲಿ ಒನಕೆ ನಿಲ್ಲಿಸಿರುವುದು ಕಂಡು ಬಂದಿತು. ಹಾರಕೂಡದ ಮಲ್ಲಿನಾಥ ಹಿರೇಮಠ ಅವರ ನಿವಾಸದಲ್ಲಿ ಒನಕೆ ನಿಲ್ಲಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬೆರಗಾದರು. ‘ಒನಕೆ ಗ್ರಹಣವಿದ್ದಾಗ ನಿಂತುಕೊಂಡಿತ್ತು ಅಂತ್ಯವಾದಾಗ ನೆಲಕ್ಕೆ ಬಿದ್ದುಬಿಟ್ಟಿತ್ತು’ ಎಂದು ಪ್ರತ್ಯಕ್ಷದರ್ಶಿ ಮಲ್ಲಿನಾಥ ಅವರು ತಿಳಿಸಿದರು.</p>.<p>`ಅತ್ಲಾಪುರದಲ್ಲಿ ಕಂಚಿನ ತಟ್ಟೆಯಲ್ಲಿ ಒನಕೆ ನಿಲ್ಲಿಸಿ ನೋಡಿದ್ದೇನೆ. ಪ್ರಯೋಗ ಯಶಸ್ವಿಯಾಯಿತು’ ಎಂದು ಜ್ಞಾನೇಶ್ವರ ರಾಚಪ್ಪನೋರ್ ಹೇಳಿದ್ದಾರೆ. ಮುಡಬಿಯ ಓಣಿಯೊಂದರಲ್ಲಿಯೂ ಹೀಗೆಯೇ ಒನಕೆ ನಿಲ್ಲಿಸಲಾಗಿತ್ತು.</p>.<p>ಗ್ರಹಣದ ಕಾರಣ ಅಂಗಡಿಗಳು ಮುಚ್ಚಿದ್ದವು. ವಾಹನಗಳು ರಸ್ತೆಗಳಿಲಿಲ್ಲ. ಎಲ್ಲವೂ ಬಂದ್ ಪರಿಸ್ಥಿತಿ ಇತ್ತು.</p>.<p>ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೆಲ ಉಪನ್ಯಾಸಕರು ಗ್ರಹಣವಿದ್ದಾಗ ಬಸವೇಶ್ವರ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ಮೂಢನಂಬಿಕೆಗೆ ವಿರೋಧ ವ್ಯಕ್ತಪಡಿಸಿದರು.</p>.<p>ಪ್ರಾಚಾರ್ಯೆ ಮಾಯಾ ಮುರಾಳೆ ಸಸಿ ನೆಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರುದ್ರಮಣಿ ಮಠಪತಿ, ಡಾ.ಭೀಮಾಶಂಕರ ಬಿರಾದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ಗುರುವಾರ ಇಡೀ ದಿನ ಮೋಡಕವಿದ ವಾತಾವರಣವಿತ್ತು. ಅಂಥದರಲ್ಲಿ ಆಗ ಸೂರ್ಯಗ್ರಹಣ ಗೋಚರಿಸಿತು. ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಈ ಸಮಯದಲ್ಲಿ ಬುಟ್ಟಿ, ತಟ್ಟೆ ಹಾಗೂ ಇತರೆ ಪಾತ್ರೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಒನಕೆ ನಿಲ್ಲಿಸಿದರು.</p>.<p>ಬೆಳಿಗ್ಗೆ 8.05 ಗಂಟೆಯಿಂದ 11.04 ಗಂಟೆಯವರೆಗೆ ಗ್ರಹಣವಿತ್ತು. ಮೋಡಗಳಲ್ಲಿ ಹೆಚ್ಚು ಬೆಳಕು ಇಲ್ಲದ್ದರಿಂದ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ.ಪಟ್ಟಣದಲ್ಲಿ ಎಲ್ಲಿಯೂ ಗ್ರಹಣ ನೋಡಲು ವಿಶೇಷ ಕನ್ನಡಕದ ವ್ಯವಸ್ಥೆ ಮಾಡಿರಲಿಲ್ಲ. ಆದ್ದರಿಂದ ಅನೇಕರು ಮೊಬೈಲ್ ಗಳ ಮೂಲಕ ಭಾವಚಿತ್ರ ತೆಗೆದು ನೋಡಿದರು.</p>.<p>ಗ್ರಹಣದ ಕಾಲದಲ್ಲಿ ಕೆಲವೆಡೆ ನೀರಿನಲ್ಲಿ ಒನಕೆ ನಿಲ್ಲಿಸಿರುವುದು ಕಂಡು ಬಂದಿತು. ಹಾರಕೂಡದ ಮಲ್ಲಿನಾಥ ಹಿರೇಮಠ ಅವರ ನಿವಾಸದಲ್ಲಿ ಒನಕೆ ನಿಲ್ಲಿಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬೆರಗಾದರು. ‘ಒನಕೆ ಗ್ರಹಣವಿದ್ದಾಗ ನಿಂತುಕೊಂಡಿತ್ತು ಅಂತ್ಯವಾದಾಗ ನೆಲಕ್ಕೆ ಬಿದ್ದುಬಿಟ್ಟಿತ್ತು’ ಎಂದು ಪ್ರತ್ಯಕ್ಷದರ್ಶಿ ಮಲ್ಲಿನಾಥ ಅವರು ತಿಳಿಸಿದರು.</p>.<p>`ಅತ್ಲಾಪುರದಲ್ಲಿ ಕಂಚಿನ ತಟ್ಟೆಯಲ್ಲಿ ಒನಕೆ ನಿಲ್ಲಿಸಿ ನೋಡಿದ್ದೇನೆ. ಪ್ರಯೋಗ ಯಶಸ್ವಿಯಾಯಿತು’ ಎಂದು ಜ್ಞಾನೇಶ್ವರ ರಾಚಪ್ಪನೋರ್ ಹೇಳಿದ್ದಾರೆ. ಮುಡಬಿಯ ಓಣಿಯೊಂದರಲ್ಲಿಯೂ ಹೀಗೆಯೇ ಒನಕೆ ನಿಲ್ಲಿಸಲಾಗಿತ್ತು.</p>.<p>ಗ್ರಹಣದ ಕಾರಣ ಅಂಗಡಿಗಳು ಮುಚ್ಚಿದ್ದವು. ವಾಹನಗಳು ರಸ್ತೆಗಳಿಲಿಲ್ಲ. ಎಲ್ಲವೂ ಬಂದ್ ಪರಿಸ್ಥಿತಿ ಇತ್ತು.</p>.<p>ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೆಲ ಉಪನ್ಯಾಸಕರು ಗ್ರಹಣವಿದ್ದಾಗ ಬಸವೇಶ್ವರ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ಮೂಢನಂಬಿಕೆಗೆ ವಿರೋಧ ವ್ಯಕ್ತಪಡಿಸಿದರು.</p>.<p>ಪ್ರಾಚಾರ್ಯೆ ಮಾಯಾ ಮುರಾಳೆ ಸಸಿ ನೆಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರುದ್ರಮಣಿ ಮಠಪತಿ, ಡಾ.ಭೀಮಾಶಂಕರ ಬಿರಾದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>