<p><strong>ಬೀದರ್</strong>: ‘ನೈಸರ್ಗಿಕ ಮತ್ತು ಸುಸ್ಥಿರ ಸಾವಯವ ಕೃಷಿಯಿಂದ ರೈತರು ಮತ್ತು ಭಾರತ ಸ್ವಾವಲಂಬಿ ದೇಶವಾಗಲು ಸಾಧ್ಯ’ ಎಂದು ಮಹಾರಾಷ್ಟ್ರ ನಾಂದೇಡ್ನ ಪ್ರಗತಿಪರ ಕೃಷಿಕ ಭೂಷಣ್ ಬಿ.ಕೆ. ಭಗವಾನ್ ತಿಳಿಸಿದರು.</p>.<p>ಜಿಲ್ಲಾ ಕೃಷಿ ಇಲಾಖೆ ಮತ್ತು ಬ್ರಹ್ಮಾಕುಮಾರೀಸ್ ಕೇಂದ್ರದ ಸಹಯೋಗದಲ್ಲಿ ನಗರದ ರಾಂಪುರೆ ಕಾಲೊನಿಯಲ್ಲಿರುವ ಶಿವಶಕ್ತಿ ಭವನದಲ್ಲಿ ಏರ್ಪಡಿಸಿದ್ದ ನೈಸರ್ಗಿಕ ಕೃಷಿ ತರಬೇತಿ ಮತ್ತು ರೈತರ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.</p>.<p>ಕೃಷಿ ಭಾರತ ದೇಶದ ಬೆನ್ನೆಲುಬು. ಆದರೆ, ನೈಸರ್ಗಿಕ ಮತ್ತು ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ ದೀರ್ಘಕಾಲ ಇರುತ್ತದೆ. ಇಳುವರಿಯೂ ಹೆಚ್ಚಿಗೆ ಬರುತ್ತದೆ ಎಂದರು.</p>.<p>ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ತಾಯಿ ಆರೋಗ್ಯವಾಗಿದ್ದರೆ ಮಗು ಆರೋಗ್ಯವಾಗಿರುತ್ತದೆ. ಅದೇ ರೀತಿ ಭೂಮಿ ತಾಯಿ ಆರೋಗ್ಯವಾಗಿದ್ದರೆ ಉತ್ತಮ ಫಲವತ್ತಾದ ಬೆಳೆಯು ದೊರೆಯುತ್ತದೆ ಎಂದು ಹೇಳಿದರು</p>.<p>ಕೃಷಿ ಇಲಾಖೆಯ ಉಪ ನಿರ್ದೇಶಕ ಅನ್ಸಾರಿ ಮಾತನಾಡಿ, ರಾಸಾಯನಿಕ ರಹಿತ ಕೃಷಿಯು ಭೂಮಿಯ ಆರೋಗ್ಯವನ್ನು ಕಾಪಾಡುತ್ತದೆ. ರೈತನ ಜೀವನಮಟ್ಟವನ್ನು ಸುಧಾರಿಸುತ್ತದೆ ಎಂದರು.</p>.<p>ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ಪ್ರತಿ ತಾಲ್ಲೂಕಿನಿಂದ ಆಯ್ದ ರೈತರನ್ನು ಸಾವಯವ ಕೃಷಿ ತರಬೇತಿಗಾಗಿ ಮೌಂಟ್ ಅಬುಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.</p>.<p>ಬ್ರಹ್ಮಾಕುಮಾರೀಸ್ ಕೇಂದ್ರ ಶಿವಶಕ್ತಿ ಭವನದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸುನಂದಾ ಬಹೆನ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಆರತಿ ಪಾಟೀಲ, ಬಿ.ಕೆ. ಮಹೇಶ್, ಬಿ.ಕೆ. ಪಾರ್ವತಿ ಬಹೆನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ‘ನೈಸರ್ಗಿಕ ಮತ್ತು ಸುಸ್ಥಿರ ಸಾವಯವ ಕೃಷಿಯಿಂದ ರೈತರು ಮತ್ತು ಭಾರತ ಸ್ವಾವಲಂಬಿ ದೇಶವಾಗಲು ಸಾಧ್ಯ’ ಎಂದು ಮಹಾರಾಷ್ಟ್ರ ನಾಂದೇಡ್ನ ಪ್ರಗತಿಪರ ಕೃಷಿಕ ಭೂಷಣ್ ಬಿ.ಕೆ. ಭಗವಾನ್ ತಿಳಿಸಿದರು.</p>.<p>ಜಿಲ್ಲಾ ಕೃಷಿ ಇಲಾಖೆ ಮತ್ತು ಬ್ರಹ್ಮಾಕುಮಾರೀಸ್ ಕೇಂದ್ರದ ಸಹಯೋಗದಲ್ಲಿ ನಗರದ ರಾಂಪುರೆ ಕಾಲೊನಿಯಲ್ಲಿರುವ ಶಿವಶಕ್ತಿ ಭವನದಲ್ಲಿ ಏರ್ಪಡಿಸಿದ್ದ ನೈಸರ್ಗಿಕ ಕೃಷಿ ತರಬೇತಿ ಮತ್ತು ರೈತರ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.</p>.<p>ಕೃಷಿ ಭಾರತ ದೇಶದ ಬೆನ್ನೆಲುಬು. ಆದರೆ, ನೈಸರ್ಗಿಕ ಮತ್ತು ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ ದೀರ್ಘಕಾಲ ಇರುತ್ತದೆ. ಇಳುವರಿಯೂ ಹೆಚ್ಚಿಗೆ ಬರುತ್ತದೆ ಎಂದರು.</p>.<p>ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ತಾಯಿ ಆರೋಗ್ಯವಾಗಿದ್ದರೆ ಮಗು ಆರೋಗ್ಯವಾಗಿರುತ್ತದೆ. ಅದೇ ರೀತಿ ಭೂಮಿ ತಾಯಿ ಆರೋಗ್ಯವಾಗಿದ್ದರೆ ಉತ್ತಮ ಫಲವತ್ತಾದ ಬೆಳೆಯು ದೊರೆಯುತ್ತದೆ ಎಂದು ಹೇಳಿದರು</p>.<p>ಕೃಷಿ ಇಲಾಖೆಯ ಉಪ ನಿರ್ದೇಶಕ ಅನ್ಸಾರಿ ಮಾತನಾಡಿ, ರಾಸಾಯನಿಕ ರಹಿತ ಕೃಷಿಯು ಭೂಮಿಯ ಆರೋಗ್ಯವನ್ನು ಕಾಪಾಡುತ್ತದೆ. ರೈತನ ಜೀವನಮಟ್ಟವನ್ನು ಸುಧಾರಿಸುತ್ತದೆ ಎಂದರು.</p>.<p>ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ಪ್ರತಿ ತಾಲ್ಲೂಕಿನಿಂದ ಆಯ್ದ ರೈತರನ್ನು ಸಾವಯವ ಕೃಷಿ ತರಬೇತಿಗಾಗಿ ಮೌಂಟ್ ಅಬುಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.</p>.<p>ಬ್ರಹ್ಮಾಕುಮಾರೀಸ್ ಕೇಂದ್ರ ಶಿವಶಕ್ತಿ ಭವನದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸುನಂದಾ ಬಹೆನ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಆರತಿ ಪಾಟೀಲ, ಬಿ.ಕೆ. ಮಹೇಶ್, ಬಿ.ಕೆ. ಪಾರ್ವತಿ ಬಹೆನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>