<p>ಔ<strong>ರಾದ್: </strong>ಶಾಲಾ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ ಬೋರ್ಗಿ (ಜೆ) ಸರ್ಕಾರಿ ಶಾಲೆ ಶಿಕ್ಷಕ ಮುತ್ತಣ್ಣ ಬಡ ಪಾಲಕರಿಗೆ ನೆರವಿನ ಹಸ್ತ ಚಾಚಿದ್ದಾರೆ.</p>.<p>ಪಟ್ಟಣ ಪ್ರದೇಶಗಳಿಗೆ ಕೂಲಿ ಕೆಲಸ ಅರಸಿ ಹೋಗಿ ವಾಪಸ್ ಬಂದ ಬೋರ್ಗಿ ಗ್ರಾಮದ 11 ಕಾರ್ಮಿಕ ಕುಟುಂಬಗಳಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.</p>.<p>‘10 ಕೆ.ಜಿ ಅಕ್ಕಿ, 5 ಕೆ.ಜಿ ಗೋದಿ ಹಿಟ್ಟು, ಎರಡು ಪ್ಯಾಕೇಟ್ ಸಿಹಿ ಎಣ್ಣೆ, 2 ಕೆ.ಜಿ ರವಾ, 2 ಕೆ.ಜಿ ಅವಲಕ್ಕಿ, 2 ಕೆ.ಜಿ ಸಕ್ಕರೆ, 2 ಕೆ.ಜಿ ಬೇಳೆ ಸೇರಿದಂತೆ ಒಟ್ಟು 25 ಕೆ.ಜಿ.ಯ ಸಾಮಗ್ರಿಗಳ ಕಿಟ್ ಆ ಎಲ್ಲ 11 ಕುಟುಂಬಗಳಿಗೆ ಹೋಗಿ ವಿತರಿಸಲಾಗಿದೆ’ ಬೋರ್ಗಿ ಗ್ರಾಮದ ಯುವಕ ಉಮಾಕಾಂತ ವಿಳಾಸಪುರೆ ತಿಳಿಸಿದ್ದಾರೆ.</p>.<p>‘ಶಿಕ್ಷಕ ಮುತ್ತಣ್ಣ ಶಾಲೆ ಮಕ್ಕಳ ಬಗ್ಗೆ ಪ್ರೀತಿ ಮತ್ತು ಅಷ್ಟೇ ಕಳಕಳಿ ಹೊಂದಿದ್ದಾರೆ. ಅವರ ಪಾಲಕರು ಸಂಕಷ್ಟದಲ್ಲಿರುವುದನ್ನು ಅರಿತು ಅವರ ನೆರವಿಗೆ ಬಂದಿದ್ದು ತುಂಬಾ ಸಂತಸದ ಸಂಗತಿ’ ಎಂದು ಗ್ರಾಮದ ಗುರುನಾಥ ಕೌಟಗೆ, ಜೈಪ್ರಕಾಶ ಅಷ್ಟುರೆ ಸಂತಸ ವ್ಯಕ್ತಪಡಿಸಿದ್ದಾರೆ.</p>.<p>‘ನಾನು ಪ್ರಚಾರಕ್ಕಾಗಿ ಆಗಲಿ ಅಥವಾ ಯಾರೋ ಹೇಳಿದ್ದಾರೆಂದು ಈ ಕೆಲಸ ಮಾಡಿಲ್ಲ. ಮನಸಾರೆಯಾಗಿ ಬಡವರಿಗೆ ಒಂದಿಷ್ಟು ಅನುಕೂಲವಾಗಲಿ ಎಂಬ ಕಾರಣದಿಂದ ಅಲ್ಪ ಆಹಾರ ಸಾಮಗ್ರಿ ಕೊಟ್ಟಿದ್ದೇನೆ. ಅದೇನು ಮಹಾ ಸಹಾಯವೂ ಅಲ್ಲ’ ಎಂದು ಶಿಕ್ಷಕ ಮುತ್ತಣ್ಣ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಔ<strong>ರಾದ್: </strong>ಶಾಲಾ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ ಬೋರ್ಗಿ (ಜೆ) ಸರ್ಕಾರಿ ಶಾಲೆ ಶಿಕ್ಷಕ ಮುತ್ತಣ್ಣ ಬಡ ಪಾಲಕರಿಗೆ ನೆರವಿನ ಹಸ್ತ ಚಾಚಿದ್ದಾರೆ.</p>.<p>ಪಟ್ಟಣ ಪ್ರದೇಶಗಳಿಗೆ ಕೂಲಿ ಕೆಲಸ ಅರಸಿ ಹೋಗಿ ವಾಪಸ್ ಬಂದ ಬೋರ್ಗಿ ಗ್ರಾಮದ 11 ಕಾರ್ಮಿಕ ಕುಟುಂಬಗಳಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.</p>.<p>‘10 ಕೆ.ಜಿ ಅಕ್ಕಿ, 5 ಕೆ.ಜಿ ಗೋದಿ ಹಿಟ್ಟು, ಎರಡು ಪ್ಯಾಕೇಟ್ ಸಿಹಿ ಎಣ್ಣೆ, 2 ಕೆ.ಜಿ ರವಾ, 2 ಕೆ.ಜಿ ಅವಲಕ್ಕಿ, 2 ಕೆ.ಜಿ ಸಕ್ಕರೆ, 2 ಕೆ.ಜಿ ಬೇಳೆ ಸೇರಿದಂತೆ ಒಟ್ಟು 25 ಕೆ.ಜಿ.ಯ ಸಾಮಗ್ರಿಗಳ ಕಿಟ್ ಆ ಎಲ್ಲ 11 ಕುಟುಂಬಗಳಿಗೆ ಹೋಗಿ ವಿತರಿಸಲಾಗಿದೆ’ ಬೋರ್ಗಿ ಗ್ರಾಮದ ಯುವಕ ಉಮಾಕಾಂತ ವಿಳಾಸಪುರೆ ತಿಳಿಸಿದ್ದಾರೆ.</p>.<p>‘ಶಿಕ್ಷಕ ಮುತ್ತಣ್ಣ ಶಾಲೆ ಮಕ್ಕಳ ಬಗ್ಗೆ ಪ್ರೀತಿ ಮತ್ತು ಅಷ್ಟೇ ಕಳಕಳಿ ಹೊಂದಿದ್ದಾರೆ. ಅವರ ಪಾಲಕರು ಸಂಕಷ್ಟದಲ್ಲಿರುವುದನ್ನು ಅರಿತು ಅವರ ನೆರವಿಗೆ ಬಂದಿದ್ದು ತುಂಬಾ ಸಂತಸದ ಸಂಗತಿ’ ಎಂದು ಗ್ರಾಮದ ಗುರುನಾಥ ಕೌಟಗೆ, ಜೈಪ್ರಕಾಶ ಅಷ್ಟುರೆ ಸಂತಸ ವ್ಯಕ್ತಪಡಿಸಿದ್ದಾರೆ.</p>.<p>‘ನಾನು ಪ್ರಚಾರಕ್ಕಾಗಿ ಆಗಲಿ ಅಥವಾ ಯಾರೋ ಹೇಳಿದ್ದಾರೆಂದು ಈ ಕೆಲಸ ಮಾಡಿಲ್ಲ. ಮನಸಾರೆಯಾಗಿ ಬಡವರಿಗೆ ಒಂದಿಷ್ಟು ಅನುಕೂಲವಾಗಲಿ ಎಂಬ ಕಾರಣದಿಂದ ಅಲ್ಪ ಆಹಾರ ಸಾಮಗ್ರಿ ಕೊಟ್ಟಿದ್ದೇನೆ. ಅದೇನು ಮಹಾ ಸಹಾಯವೂ ಅಲ್ಲ’ ಎಂದು ಶಿಕ್ಷಕ ಮುತ್ತಣ್ಣ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>