‘ಖಂಡ್ರೆ ಅರಣ್ಯ ಸಚಿವರಾದ ನಂತರ ಪ್ರಾಣಿಗಳು ನಾಡೊಳಗೆ’
‘ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಸಚಿವರಾದ ನಂತರ ಎಲ್ಲ ಪ್ರಾಣಿಗಳು ಕಾಡು ಬಿಟ್ಟು ನಾಡೊಳಗೆ ಬರುತ್ತಿವೆ. ರೈತರ ಮೇಲೆ ಅವುಗಳು ದಾಳಿ ನಡೆಸುತ್ತಿವೆ. ಹೊನ್ನಿಕೇರಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಅದನ್ನು ಹಿಡಿಯುತ್ತಿಲ್ಲ’ ಎಂದು ಮಾಜಿಶಾಸಕ ಪ್ರಕಾಶ ಖಂಡ್ರೆ ಕುಟುಕಿದರು. ಈಶ್ವರ ಖಂಡ್ರೆ ನಾಲ್ಕು ಸಲ ಭಾಲ್ಕಿ ಶಾಸಕರಾಗಿ ಎರಡು ಸಲ ಮಂತ್ರಿಯಾಗಿದ್ದಾರೆ. ಭಾಲ್ಕಿಯಲ್ಲಿ ನ್ಯಾಯವಾದಿಗಳ ಕಾಲೊನಿಗೆ ರಸ್ತೆ ಮಾಡಲು ಸಾಧ್ಯವಾಗಿಲ್ಲ. ಇವರು ಸಚಿವರು ಮಗ ಸಂಸದ ಇವರದ್ದೇ ಸರ್ಕಾರವಿದ್ದರೂ ಏನೂ ಮಾಡುತ್ತಿಲ್ಲ ಎಂದು ಟೀಕಿಸಿದರು.