<p><strong>ಔರಾದ್</strong> <strong>(ಬೀದರ್ ಜಿಲ್ಲೆ):</strong> ತಾಲ್ಲೂಕಿನ ಬೋರಾಳ ಗ್ರಾಮದ ರೈತರೊಬ್ಬರು ಬರಡು ಭೂಮಿಯಲ್ಲಿ ಬಾವಿ ತೋಡಿ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. </p>.<p>ಉತ್ಸಾಹಿ ರೈತ ಶಾಮರಾವ್ ಬಿರಾದಾರ (55) ಬೇಸಿಗೆಯಲ್ಲಿ ಮೂರು ತಿಂಗಳು ಬೆವರು ಸುರಿಸಿ 24 ಅಡಿ ಆಳದ ಬಾವಿ ತೋಡಿದ್ದು, ಅದರಲ್ಲಿ ಭರಪೂರ ನೀರು ಬಂದಿದೆ.</p>.<p>ಶಾಮರಾವ್ ಅವರು ನಾಲ್ಕು ಎಕರೆ ಜಮೀನು ಹೊಂದಿದ್ದಾರೆ. ಅದು ಗುಡ್ಡ, ಕಲ್ಲು, ಮುಳ್ಳಿನ ಪೊದೆಗಳಿಂದ ಕೂಡಿತ್ತು. ಅದನ್ನೆಲ್ಲ ತೆಗೆದು ಭೂಮಿಯನ್ನು ಹದ ಮಾಡಿದ್ದಾರೆ. ನರೇಗಾದಡಿ ₹1.50 ಲಕ್ಷ ನೆರವು ಪಡೆದು 24 ಅಡಿ ಆಳ ಹಾಗೂ 36 ಅಡಿ ಸುತ್ತಳತೆಯ ಬಾವಿ ಕೊರೆದಿದ್ದಾರೆ. ಬಾವಿಯಲ್ಲಿ 12 ಅಡಿಯಷ್ಟು ನೀರಿದ್ದು, ರೈತನ ಸಾಧನೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>‘ನಾಲ್ಕು ಎಕರೆ ಒಣ ಭೂಮಿಯಲ್ಲಿ ಎಷ್ಟೇ ಕಷ್ಟಪಟ್ಟರೂ ವರ್ಷಕ್ಕೆ ಸಿಗುವುದು ₹50 ಸಾವಿರದಿಂದ ₹60 ಸಾವಿರ ಮಾತ್ರ. ಹೀಗಾಗಿ ಕೃಷಿಯ ಜೊತೆಗೆ ಜಾನುವಾರು ಖರೀದಿ–ಮಾರಾಟ ವ್ಯಾಪಾರ ಮಾಡಿಕೊಂಡಿದ್ದೇನೆ. ಕೃಷಿ ಕ್ಷೇತ್ರದಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ನರೇಗಾ ಯೋಜನೆಯಡಿ ಕಾರ್ಮಿಕರ ಸಹಾಯದಿಂದ ಬಾವಿ ತೋಡಿದ್ದೇನೆ. ಬಾವಿಯ ಮೇಲ್ಭಾಗದ ಸುತ್ತಲೂ ಎರಡು ಅಡಿಯಷ್ಟು ಗೋಡೆ ಕಟ್ಟಿದ್ದೇನೆ. ನನ್ನ ಕೈಯಿಂದಲೂ ₹2 ಲಕ್ಷ ಖರ್ಚು ಮಾಡಿದ್ದೇನೆ’ ಎಂದು ಶಾಮರಾವ್ ವಿವರಿಸುತ್ತಾರೆ.</p>.<p>‘ಬಾವಿಗೆ ವಿದ್ಯುತ್ ಸಂಪರ್ಕ ಹಾಗೂ ಮೋಟರ್ ವ್ಯವಸ್ಥೆಯಾದರೆ ಈರುಳ್ಳಿ, ತರಕಾರಿ ಬೆಳೆದು ವರ್ಷಕ್ಕೆ ₹4 ಲಕ್ಷದಿಂದ ₹5 ಲಕ್ಷದವರೆಗೂ ಲಾಭ ಪಡೆಯಬಹುದು. ಸದ್ಯ ವಿದ್ಯುತ್ ವ್ಯವಸ್ಥೆ ಇಲ್ಲ. ಇದಕ್ಕಾಗಿ ಜೆಸ್ಕಾಂಗೆ ₹40 ಸಾವಿರ ಠೇವಣಿ ಕಟ್ಟಬೇಕು. ಒಂದು ವಿದ್ಯುತ್ ಕಂಬಕ್ಕೆ ₹12 ಸಾವಿರ ಲೆಕ್ಕದಲ್ಲಿ ಒಟ್ಟು 12 ಕಂಬಕ್ಕೆ ₹1.44 ಲಕ್ಷ ಕಟ್ಟಿದರೆ ವಿದ್ಯುತ್ ವ್ಯವಸ್ಥೆ ಆಗುತ್ತದೆ. ಆದರೆ, ಅಷ್ಟು ಹಣ ನನ್ನ ಬಳಿ ಇಲ್ಲ. ಅಕ್ಕಪಕ್ಕದ ರೈತರು ಒಪ್ಪಿದರೆ ಎಲ್ಲರೂ ಸೇರಿ ಈ ಕೆಲಸ ಮಾಡುತ್ತೇವೆ. ಇಲ್ಲವಾದಲ್ಲಿ ಸದ್ಯ ಡೀಸೆಲ್ ಮೋಟರ್ ವ್ಯವಸ್ಥೆ ಮಾಡಿಕೊಳ್ಳಲು ಯೋಚಿಸಿದ್ದೇನೆ’ ಎಂದು ಅವರು ಹೇಳುತ್ತಾರೆ.</p>.<p>‘ನಾನು ಹಾಗೂ ಅಕ್ಕಪಕ್ಕದ ನಾಲ್ಕೈದು ರೈತರು ಕಷ್ಟಪಟ್ಟು ಬಾವಿ ತೋಡಿದ್ದೇವೆ. ಸರ್ಕಾರ 12 ಕಂಬ ಹಾಕಿ ವಿದ್ಯುತ್ ವ್ಯವಸ್ಥೆ ಮಾಡಿಕೊಟ್ಟರೆ ತುಂಬಾ ಉಪಕಾರ ಆಗಲಿದೆ’ ಎಂದು ರೈತ ಶಾಮರಾವ್ ಮನವಿ ಮಾಡಿದ್ದಾರೆ.</p>.<div><blockquote>ರೈತ ಶಾಮರಾವ್ ನರೇಗಾ ಯೋಜನೆಯಲ್ಲಿ ತೋಡಿದ ಬಾವಿ ಬಹಳ ಅದ್ಭುತವಾಗಿದೆ. ಬೇಸಿಗೆಯಲ್ಲೂ 12 ಅಡಿಯಷ್ಟು ನೀರು ಬಂದಿದೆ. ಇದು ಇತರ ರೈತರಿಗೂ ಪ್ರೇರಣೆಯಾಗಲಿದೆ. </blockquote><span class="attribution">ಶಿವಕುಮಾರ ಘಾಟೆ, ಸಹಾಯಕ ನಿರ್ದೇಶಕ, ತಾ.ಪಂ. ಔರಾದ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್</strong> <strong>(ಬೀದರ್ ಜಿಲ್ಲೆ):</strong> ತಾಲ್ಲೂಕಿನ ಬೋರಾಳ ಗ್ರಾಮದ ರೈತರೊಬ್ಬರು ಬರಡು ಭೂಮಿಯಲ್ಲಿ ಬಾವಿ ತೋಡಿ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. </p>.<p>ಉತ್ಸಾಹಿ ರೈತ ಶಾಮರಾವ್ ಬಿರಾದಾರ (55) ಬೇಸಿಗೆಯಲ್ಲಿ ಮೂರು ತಿಂಗಳು ಬೆವರು ಸುರಿಸಿ 24 ಅಡಿ ಆಳದ ಬಾವಿ ತೋಡಿದ್ದು, ಅದರಲ್ಲಿ ಭರಪೂರ ನೀರು ಬಂದಿದೆ.</p>.<p>ಶಾಮರಾವ್ ಅವರು ನಾಲ್ಕು ಎಕರೆ ಜಮೀನು ಹೊಂದಿದ್ದಾರೆ. ಅದು ಗುಡ್ಡ, ಕಲ್ಲು, ಮುಳ್ಳಿನ ಪೊದೆಗಳಿಂದ ಕೂಡಿತ್ತು. ಅದನ್ನೆಲ್ಲ ತೆಗೆದು ಭೂಮಿಯನ್ನು ಹದ ಮಾಡಿದ್ದಾರೆ. ನರೇಗಾದಡಿ ₹1.50 ಲಕ್ಷ ನೆರವು ಪಡೆದು 24 ಅಡಿ ಆಳ ಹಾಗೂ 36 ಅಡಿ ಸುತ್ತಳತೆಯ ಬಾವಿ ಕೊರೆದಿದ್ದಾರೆ. ಬಾವಿಯಲ್ಲಿ 12 ಅಡಿಯಷ್ಟು ನೀರಿದ್ದು, ರೈತನ ಸಾಧನೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<p>‘ನಾಲ್ಕು ಎಕರೆ ಒಣ ಭೂಮಿಯಲ್ಲಿ ಎಷ್ಟೇ ಕಷ್ಟಪಟ್ಟರೂ ವರ್ಷಕ್ಕೆ ಸಿಗುವುದು ₹50 ಸಾವಿರದಿಂದ ₹60 ಸಾವಿರ ಮಾತ್ರ. ಹೀಗಾಗಿ ಕೃಷಿಯ ಜೊತೆಗೆ ಜಾನುವಾರು ಖರೀದಿ–ಮಾರಾಟ ವ್ಯಾಪಾರ ಮಾಡಿಕೊಂಡಿದ್ದೇನೆ. ಕೃಷಿ ಕ್ಷೇತ್ರದಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ನರೇಗಾ ಯೋಜನೆಯಡಿ ಕಾರ್ಮಿಕರ ಸಹಾಯದಿಂದ ಬಾವಿ ತೋಡಿದ್ದೇನೆ. ಬಾವಿಯ ಮೇಲ್ಭಾಗದ ಸುತ್ತಲೂ ಎರಡು ಅಡಿಯಷ್ಟು ಗೋಡೆ ಕಟ್ಟಿದ್ದೇನೆ. ನನ್ನ ಕೈಯಿಂದಲೂ ₹2 ಲಕ್ಷ ಖರ್ಚು ಮಾಡಿದ್ದೇನೆ’ ಎಂದು ಶಾಮರಾವ್ ವಿವರಿಸುತ್ತಾರೆ.</p>.<p>‘ಬಾವಿಗೆ ವಿದ್ಯುತ್ ಸಂಪರ್ಕ ಹಾಗೂ ಮೋಟರ್ ವ್ಯವಸ್ಥೆಯಾದರೆ ಈರುಳ್ಳಿ, ತರಕಾರಿ ಬೆಳೆದು ವರ್ಷಕ್ಕೆ ₹4 ಲಕ್ಷದಿಂದ ₹5 ಲಕ್ಷದವರೆಗೂ ಲಾಭ ಪಡೆಯಬಹುದು. ಸದ್ಯ ವಿದ್ಯುತ್ ವ್ಯವಸ್ಥೆ ಇಲ್ಲ. ಇದಕ್ಕಾಗಿ ಜೆಸ್ಕಾಂಗೆ ₹40 ಸಾವಿರ ಠೇವಣಿ ಕಟ್ಟಬೇಕು. ಒಂದು ವಿದ್ಯುತ್ ಕಂಬಕ್ಕೆ ₹12 ಸಾವಿರ ಲೆಕ್ಕದಲ್ಲಿ ಒಟ್ಟು 12 ಕಂಬಕ್ಕೆ ₹1.44 ಲಕ್ಷ ಕಟ್ಟಿದರೆ ವಿದ್ಯುತ್ ವ್ಯವಸ್ಥೆ ಆಗುತ್ತದೆ. ಆದರೆ, ಅಷ್ಟು ಹಣ ನನ್ನ ಬಳಿ ಇಲ್ಲ. ಅಕ್ಕಪಕ್ಕದ ರೈತರು ಒಪ್ಪಿದರೆ ಎಲ್ಲರೂ ಸೇರಿ ಈ ಕೆಲಸ ಮಾಡುತ್ತೇವೆ. ಇಲ್ಲವಾದಲ್ಲಿ ಸದ್ಯ ಡೀಸೆಲ್ ಮೋಟರ್ ವ್ಯವಸ್ಥೆ ಮಾಡಿಕೊಳ್ಳಲು ಯೋಚಿಸಿದ್ದೇನೆ’ ಎಂದು ಅವರು ಹೇಳುತ್ತಾರೆ.</p>.<p>‘ನಾನು ಹಾಗೂ ಅಕ್ಕಪಕ್ಕದ ನಾಲ್ಕೈದು ರೈತರು ಕಷ್ಟಪಟ್ಟು ಬಾವಿ ತೋಡಿದ್ದೇವೆ. ಸರ್ಕಾರ 12 ಕಂಬ ಹಾಕಿ ವಿದ್ಯುತ್ ವ್ಯವಸ್ಥೆ ಮಾಡಿಕೊಟ್ಟರೆ ತುಂಬಾ ಉಪಕಾರ ಆಗಲಿದೆ’ ಎಂದು ರೈತ ಶಾಮರಾವ್ ಮನವಿ ಮಾಡಿದ್ದಾರೆ.</p>.<div><blockquote>ರೈತ ಶಾಮರಾವ್ ನರೇಗಾ ಯೋಜನೆಯಲ್ಲಿ ತೋಡಿದ ಬಾವಿ ಬಹಳ ಅದ್ಭುತವಾಗಿದೆ. ಬೇಸಿಗೆಯಲ್ಲೂ 12 ಅಡಿಯಷ್ಟು ನೀರು ಬಂದಿದೆ. ಇದು ಇತರ ರೈತರಿಗೂ ಪ್ರೇರಣೆಯಾಗಲಿದೆ. </blockquote><span class="attribution">ಶಿವಕುಮಾರ ಘಾಟೆ, ಸಹಾಯಕ ನಿರ್ದೇಶಕ, ತಾ.ಪಂ. ಔರಾದ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>