<p><strong>ಬೀದರ್</strong>: ಮುಂಗಾರಿನ ಆರಂಭದ ಹಬ್ಬ 'ಮಣ್ಣೆತ್ತಿನ ಅಮಾವಾಸ್ಯೆ’ ಪ್ರಯುಕ್ತ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರು ಶುಕ್ರವಾರ ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಪೂಜೆ ಮಾಡಿ್ರ ಸಮೃದ್ಧ ಬೆಳೆ ಬೆಳೆಯಲಿ ಎಂದು ಪ್ರಾರ್ಥಿಸಿದರು. ಊರ ದೇವರಿಗೆ ನೈವೇದ್ಯ ಸಮರ್ಪಿಸಿದರು.</p>.<p>ರೈತರು ಮನೆಯ ದನಕರುಗಳ ಮೈತೊಳೆದು ಕೋಡುಗಳಿಗೆ ರಿಬ್ಬನ್ ಹಾಗೂ ಬಲೂನ್ ಕಟ್ಟಿ ಸಿಂಗರಿಸಿದರು. ಕೆಲವರು ಮೈಮೇಲೆ ಗುಲಾಲು ಸವರಿ ಎತ್ತುಗಳಿಗೆ ಪ್ರೀತಿ ತೋರಿಸಿದರು.</p>.<p>ಹೊಲದಿಂದ ತಂದಿದ್ದ ಜಿಗಟು ಮಣ್ಣಿನಿಂದ ಜೋಡೆತ್ತುಗಳನ್ನು ತಯಾರಿಸಿ ಅವುಗಳಿಗೆ ಕುಂಕುಮ, ಅರಿಸಿಣದ ಬೊಟ್ಟು ಇಟ್ಟು ಕರ್ಪೂರ, ಊದುಬತ್ತಿ, ಲೋಬಾನ ಹಾಕಿ ಪೂಜೆ ಮಾಡಿದರು. ನಂತರ ಹೋಳಿಗೆ, ಅನ್ನ, ಪಲ್ಯದ ನೈವೇದ್ಯ ಸಮರ್ಪಿಸಿದರು.</p>.<p>ಕೆಲ ಗ್ರಾಮಗಳಲ್ಲಿ ರೈತರು ಸಿಂಗರಿಸಿದ ಎತ್ತುಗಳ ಮೆರವಣಿಗೆ ನಡೆಸಿದರು. ಮಹಿಳೆಯರು ಎತ್ತುಗಳಿಗೆ ದೂರದಿಂದ ಆರತಿ ಬೆಳಗಿ ಕೈಮುಗಿದರು. ನಂತರ ಕುಟುಂಬದ ಸದಸ್ಯರೆಲ್ಲ ಹೋಳಿಗೆ, ತುಪ್ಪ, ಅನ್ನ ಹಾಗೂ ಅಂಬರ ಸೇವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಮುಂಗಾರಿನ ಆರಂಭದ ಹಬ್ಬ 'ಮಣ್ಣೆತ್ತಿನ ಅಮಾವಾಸ್ಯೆ’ ಪ್ರಯುಕ್ತ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರು ಶುಕ್ರವಾರ ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಪೂಜೆ ಮಾಡಿ್ರ ಸಮೃದ್ಧ ಬೆಳೆ ಬೆಳೆಯಲಿ ಎಂದು ಪ್ರಾರ್ಥಿಸಿದರು. ಊರ ದೇವರಿಗೆ ನೈವೇದ್ಯ ಸಮರ್ಪಿಸಿದರು.</p>.<p>ರೈತರು ಮನೆಯ ದನಕರುಗಳ ಮೈತೊಳೆದು ಕೋಡುಗಳಿಗೆ ರಿಬ್ಬನ್ ಹಾಗೂ ಬಲೂನ್ ಕಟ್ಟಿ ಸಿಂಗರಿಸಿದರು. ಕೆಲವರು ಮೈಮೇಲೆ ಗುಲಾಲು ಸವರಿ ಎತ್ತುಗಳಿಗೆ ಪ್ರೀತಿ ತೋರಿಸಿದರು.</p>.<p>ಹೊಲದಿಂದ ತಂದಿದ್ದ ಜಿಗಟು ಮಣ್ಣಿನಿಂದ ಜೋಡೆತ್ತುಗಳನ್ನು ತಯಾರಿಸಿ ಅವುಗಳಿಗೆ ಕುಂಕುಮ, ಅರಿಸಿಣದ ಬೊಟ್ಟು ಇಟ್ಟು ಕರ್ಪೂರ, ಊದುಬತ್ತಿ, ಲೋಬಾನ ಹಾಕಿ ಪೂಜೆ ಮಾಡಿದರು. ನಂತರ ಹೋಳಿಗೆ, ಅನ್ನ, ಪಲ್ಯದ ನೈವೇದ್ಯ ಸಮರ್ಪಿಸಿದರು.</p>.<p>ಕೆಲ ಗ್ರಾಮಗಳಲ್ಲಿ ರೈತರು ಸಿಂಗರಿಸಿದ ಎತ್ತುಗಳ ಮೆರವಣಿಗೆ ನಡೆಸಿದರು. ಮಹಿಳೆಯರು ಎತ್ತುಗಳಿಗೆ ದೂರದಿಂದ ಆರತಿ ಬೆಳಗಿ ಕೈಮುಗಿದರು. ನಂತರ ಕುಟುಂಬದ ಸದಸ್ಯರೆಲ್ಲ ಹೋಳಿಗೆ, ತುಪ್ಪ, ಅನ್ನ ಹಾಗೂ ಅಂಬರ ಸೇವಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>