<p><strong>ಬೀದರ್: </strong>‘ವೈಶ್ವಿಕ ಮೌಲ್ಯಗಳನ್ನು ಜಗತ್ತಿನ ಪ್ರತಿಯೊಂದು ಜನಾಂಗದವರು ಎಲ್ಲ ಪರಿಸ್ಥಿತಿಗಳಲ್ಲಿ ಅವುಗಳನ್ನು ಸಾಮಾನ್ಯವಾಗಿ ಅಳವಡಿಸಿ ಕೊಂಡಿರುತ್ತಾರೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಕ್ಕ ಗಂಗಾಂಬಿಕೆ ಪಾಟೀಲ ನುಡಿದರು.</p>.<p>ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಆಯೋಜಿಸಿರುವ ವಚನ ವಿಜಯೋಜತ್ಸವದ ಎರಡನೇ ದಿನದ ಸಾಮೂಹಿಕ ಗ್ರಂಥ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರಾಮಾಣಿಕತೆ, ಆದರ, ಜವಾಬ್ದಾರಿ, ಒಳ್ಳೆಯತನ, ಕಾಳಜಿ, ಸಹಕಾರ, ಧೈರ್ಯ, ನ್ಯಾಯ, ದಯೆ, ಸ್ವಕೃತಿ, ಒಗ್ಗಟ್ಟು ನಾಗರಿಕತೆ, ಶಾಂತಿ, ಪ್ರೇಮ, ಸೌಂದರ್ಯ, ಆನಂದ ಇತ್ಯಾದಿ ಅಂಶಗಳನ್ನು ಈ ತತ್ವಕ್ಕೆ ಹೊಂದಿಸಲಾಗಿದೆ. ಬಸವಾದಿ ಶರಣರ ವಚನಗಳು ವೈಶ್ವಿಕ ಮೌಲ್ಯಗಳ ಆಗರವೇ ಆಗಿವೆ’ ಎಂದು ತಿಳಿಸಿದರು.</p>.<p>ಅಕ್ಕ ಗಂಗಾಂಬಿಕೆ ಪಾಟೀಲ ನೇತೃತ್ವದಲ್ಲಿ ಶರಣ, ಶರಣೆಯರು ಹಾಗೂ ಮಕ್ಕಳು ಸಾಮೂಹಿಕವಾಗಿ ವಚನ ಗ್ರಂಥ ಪಠಣ ಮಾಡಿದರು.</p>.<p>ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ ಇದ್ದರು. ಶಿವಕುಮಾರ ಪಾಂಚಾಳ ವಚನ ಗಾಯನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>‘ವೈಶ್ವಿಕ ಮೌಲ್ಯಗಳನ್ನು ಜಗತ್ತಿನ ಪ್ರತಿಯೊಂದು ಜನಾಂಗದವರು ಎಲ್ಲ ಪರಿಸ್ಥಿತಿಗಳಲ್ಲಿ ಅವುಗಳನ್ನು ಸಾಮಾನ್ಯವಾಗಿ ಅಳವಡಿಸಿ ಕೊಂಡಿರುತ್ತಾರೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಕ್ಕ ಗಂಗಾಂಬಿಕೆ ಪಾಟೀಲ ನುಡಿದರು.</p>.<p>ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಆಯೋಜಿಸಿರುವ ವಚನ ವಿಜಯೋಜತ್ಸವದ ಎರಡನೇ ದಿನದ ಸಾಮೂಹಿಕ ಗ್ರಂಥ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರಾಮಾಣಿಕತೆ, ಆದರ, ಜವಾಬ್ದಾರಿ, ಒಳ್ಳೆಯತನ, ಕಾಳಜಿ, ಸಹಕಾರ, ಧೈರ್ಯ, ನ್ಯಾಯ, ದಯೆ, ಸ್ವಕೃತಿ, ಒಗ್ಗಟ್ಟು ನಾಗರಿಕತೆ, ಶಾಂತಿ, ಪ್ರೇಮ, ಸೌಂದರ್ಯ, ಆನಂದ ಇತ್ಯಾದಿ ಅಂಶಗಳನ್ನು ಈ ತತ್ವಕ್ಕೆ ಹೊಂದಿಸಲಾಗಿದೆ. ಬಸವಾದಿ ಶರಣರ ವಚನಗಳು ವೈಶ್ವಿಕ ಮೌಲ್ಯಗಳ ಆಗರವೇ ಆಗಿವೆ’ ಎಂದು ತಿಳಿಸಿದರು.</p>.<p>ಅಕ್ಕ ಗಂಗಾಂಬಿಕೆ ಪಾಟೀಲ ನೇತೃತ್ವದಲ್ಲಿ ಶರಣ, ಶರಣೆಯರು ಹಾಗೂ ಮಕ್ಕಳು ಸಾಮೂಹಿಕವಾಗಿ ವಚನ ಗ್ರಂಥ ಪಠಣ ಮಾಡಿದರು.</p>.<p>ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ ಇದ್ದರು. ಶಿವಕುಮಾರ ಪಾಂಚಾಳ ವಚನ ಗಾಯನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>