<p><strong>ಬೀದರ್:</strong> ನಗರದ ಸಗಟು ತರಕಾರಿ ಮಾರುಕಟ್ಟೆಗೆ ಈ ಬಾರಿ ಮೂರು ರಾಜ್ಯಗಳ ಪ್ರಮುಖ ಪಟ್ಟಣಗಳಿಂದ ಕಾಯಿಪಲ್ಲೆ ಬಂದಿದೆ. ತರಕಾರಿಯಲ್ಲೇ ಹಿರೇಕಾಯಿ ಅಧಿಕ ಬೆಲೆ ಪಡೆದುಕೊಂಡು ಹಿರಿಹಿರಿ ಹಿಗ್ಗಿದರೆ, ಗಜ್ಜರಿ ತನ್ನ ಬೆಲೆಯ ಗಾಂಭೀರ್ಯ ಉಳಿಸಿಕೊಂಡಿತು. ಬೆಲೆ ಕುಸಿದು ಎಲೆಕೊಸು ತೊಳಲಾಡಿತು.<br /><br />ಮೂರು ತಿಂಗಳು ಸಂಗ್ರಹಿಸಿ ಇಟ್ಟರೂ ಗಟ್ಟಿಮುಟ್ಟಾಗಿರುವ ಸೋಲಾಪುರದ ಈರುಳ್ಳಿ ಹಾಗೂ ಬೆಳ್ಳೊಳ್ಳಿ ಮಾರುಕಟ್ಟೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆಯಿತು. ಹೈದರಾಬಾದ್ನ ಮೆಣಸಿನಕಾಯಿ, ಗಜ್ಜರಿ, ಬಿಟ್ರೂಟ್ ಹಾಗೂ ತೊಂಡೆಕಾಯಿ ಸ್ಥಿರವಾದ ಬೆಲೆ ಉಳಿಸಿಕೊಂಡವು.</p>.<p>ಒಂದು ತಿಂಗಳಿಂದ ಬೆಳಗಾವಿ ಜಿಲ್ಲೆಯಿಂದ ಯಾವುದೇ ತರಕಾರಿ ಬಂದಿರಲಿಲ್ಲ. ಇದೀಗ ಗುಣಮಟ್ಟದ ಬೀನ್ಸ್<br />ಬೀದರ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಫುಲಾವ್ ಮಾಡುವವರು ಆಸಕ್ತಿಯಿಂದ ಖರೀದಿ ಮಾಡಿದರು.</p>.<p>ಆಗ್ರಾದಿಂದ ಗುಣಮಟ್ಟದ ಆಲೂಗಡ್ಡೆ ಆವಕವಾಗಿದೆ. ಆಗ್ರಾದಲ್ಲಿ ಆಲೂಗಡ್ಡೆಯ ಬೆಲೆ ಹಠಾತ್ ಕುಸಿದಿರುವ ಕಾರಣ ಬೀದರ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಆಲೂಗಡ್ಡೆ ಲಭ್ಯವಾಗಿದೆ. ಹೋಟೆಲ್ ಹಾಗೂ ಖಾನಾವಳಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಲೂಗಡ್ಡೆ ಖರೀಸಿದರು. ಗೃಹ ಉದ್ಯೋಗದವರು ಚಿಪ್ಸ್ ಮಾಡಲು ಆಲೂಗಡ್ಡೆ ಚೌಕಾಶಿ ಮಾಡಿ ಕೊಂಡುಕೊಳ್ಳುತ್ತಿರುವುದು ಕಂಡು ಬಂದಿತು.</p>.<p>ಚಿಟಗುಪ್ಪ ತಾಲ್ಲೂಕಿನಲ್ಲಿ ಬೆಳೆಯಲಾದ ಎಲೆಕೋಸು, ಹೂಕೋಸು ಹಾಗೂ ಕರಿಬೇವು ಮಾರುಕಟ್ಟೆಯ ಮೇಲೆ ಹಿಡಿತ ಇಟ್ಟುಕೊಂಡಿದೆ. ಎಲೆಕೋಸಿನ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಅರ್ಧದಷ್ಟು ಕುಸಿದಿದೆ. ಹೂಕೋಸು ಹಾಗೂ ಕರಿಬೇವಿನ ಬೆಲೆ ಸ್ಥಿರವಾಗಿದೆ.</p>.<p>ಭಾಲ್ಕಿ ತಾಲ್ಲೂಕಿನ ಗ್ರಾಮಗಳಿಂದ ಬದನೆಕಾಯಿ ಹಾಗೂ ಬೀದರ್ ತಾಲ್ಲೂಕಿನ ಚಿಟ್ಟಾದಿಂದ ಟೊಮೆಟೊ ಮಾರುಕಟ್ಟೆ ಪ್ರವೇಶ ಮಾಡಿವೆ. ಇವುಗಳ ಬೆಲೆ ಕ್ವಿಂಟಲ್ಗೆ ₹ 200 ರಿಂದ 300ಕ್ಕೆ ಏರಿಕೆಯಾಗಿದೆ. ರೈತರಿಗೆ ನಿರೀಕ್ಷಿತ ಲಾಭ ದೊರೆತಿಲ್ಲ. ಬದನೆಕಾಯಿ ಹಾಗೂ ಟೊಮೆಟೊ ಸ್ಥಳೀಯವಾಗಿಯೇ ಲಭ್ಯವಿರುವ ಕಾರಣ ಸಾಗಾಣಿಕೆ ವೆಚ್ಚ ಕಡಿತಗೊಂಡು ಗ್ರಾಹಕರಿಗೆ ಅನುಕೂಲವಾಗಿದೆ.</p>.<p>‘ಕೊತಂಬರಿಯ ಬೆಲೆ ಕುಸಿದಿದೆ. ಮೆಂತೆ ಹಾಗೂ ಕಡಲೆ ಸೊಪ್ಪು ಮಾತ್ರ ಮಾರುಕಟ್ಟೆಗೆ ಬಂದಿದೆ. ಬೇರೆ ಸೊಪ್ಪು ಕೊಳ್ಳುವ ಗ್ರಾಹಕರ ಸಂಖ್ಯೆ ಬಹಳ ಕಡಿಮೆ ಇದೆ. ಸೊಪ್ಪಿನ ಬೆಲೆ ಈ ವಾರ ಸ್ಥಿರವಾಗಿದೆ’ ಎಂದು ಎನ್ನುತ್ತಾರೆ ಭಾರತ ತರಕಾರಿ ಅಂಗಡಿ ಮಾಲೀಕ ಅಬ್ದುಲ್ ನಬಿ.</p>.<p>‘ಕೆಲ ಪ್ರದೇಶದಲ್ಲಿ ಮಂಜು ಕವಿದ ವಾತಾವರಣ ಇರುವ ಕಾರಣ ಸೊಪ್ಪಿಗೆ ಕೀಟಬಾಧೆ ಕಾಣಿಸಿಕೊಂಡಿದೆ. ಕೀಟ ಕಾಣಿಸಿಕೊಂಡರೆ ಗ್ರಾಹಕರು ಕೊಂಡುಕೊಳ್ಳುವುದಿಲ್ಲ. ಹೀಗಾಗಿ ನೆರೆಯ ಜಿಲ್ಲೆಯ ಗುಣಮಟ್ಟದ ಸೊಪ್ಪನ್ನು ಮಾತ್ರ ತಂದು ಮಾರಾಟಕ್ಕೆ ಇಡಲಾಗಿದೆ’ ಎಂದು ಹೇಳುತ್ತಾರೆ.<br /><br /><strong>ಬೀದರ್ ತರಕಾರಿ ಸಗಟು ಮಾರುಕಟ್ಟೆ</strong><br /><br />ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ<br />ಈರುಳ್ಳಿ, 1,000-2,000, 1,000-1,200<br />ಮೆಣಸಿನಕಾಯಿ, 2,500-3,000, 1,500-2,000<br />ಆಲೂಗಡ್ಡೆ, 2,000-2,500, 1,500-2,000<br />ಎಲೆಕೋಸು, 1,500-2,000, 800-1,000<br />ಹೂಕೋಸು, 1,800-2,000, 1,500-2,000<br />ಬೆಳ್ಳೂಳ್ಳಿ, 2,500-3,000, 2,000-2,500<br />ಗಜ್ಜರಿ, 3,500-4,000, 3,500-4,000<br />ಬೀನ್ಸ್, 3,000-3,500, 3,000-3,500<br />ಬದನೆಕಾಯಿ, 1,800-2,200, 2,000-2,500<br />ಮೆಂತೆ ಸೊಪ್ಪು, 2,000-2,500, 2,000-2,500<br />ಸಬ್ಬಸಗಿ, 2,500-3,000, 3,000-3,500<br />ಬಿಟ್ರೂಟ್, 2,500-3,000, 3,500-4,000<br />ಕರಿಬೇವು, 3,000-3,500, 3,000-3,500<br />ಕೊತಂಬರಿ, 3,500-4,000, 3,000-3,500<br />ಕಡಲೆ ಸೊಪ್ಪು, 8,000-9,000, 6,000-7,000<br />ಟೊಮೆಟೊ, 1,000–1,200, 1,000-1,500<br />ತೊಂಡೆಕಾಯಿ, 2,500-3,000, 2,500-3,000<br />ಬೆಂಡೆಕಾಯಿ, 2,500-3,000, 3,000-3,500<br />ಹಿರೇಕಾಯಿ, 3,000-3,500, 3,000-4,000<br />ಸೋರೆಕಾಯಿ, 1200–1500, 1500–2000</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ನಗರದ ಸಗಟು ತರಕಾರಿ ಮಾರುಕಟ್ಟೆಗೆ ಈ ಬಾರಿ ಮೂರು ರಾಜ್ಯಗಳ ಪ್ರಮುಖ ಪಟ್ಟಣಗಳಿಂದ ಕಾಯಿಪಲ್ಲೆ ಬಂದಿದೆ. ತರಕಾರಿಯಲ್ಲೇ ಹಿರೇಕಾಯಿ ಅಧಿಕ ಬೆಲೆ ಪಡೆದುಕೊಂಡು ಹಿರಿಹಿರಿ ಹಿಗ್ಗಿದರೆ, ಗಜ್ಜರಿ ತನ್ನ ಬೆಲೆಯ ಗಾಂಭೀರ್ಯ ಉಳಿಸಿಕೊಂಡಿತು. ಬೆಲೆ ಕುಸಿದು ಎಲೆಕೊಸು ತೊಳಲಾಡಿತು.<br /><br />ಮೂರು ತಿಂಗಳು ಸಂಗ್ರಹಿಸಿ ಇಟ್ಟರೂ ಗಟ್ಟಿಮುಟ್ಟಾಗಿರುವ ಸೋಲಾಪುರದ ಈರುಳ್ಳಿ ಹಾಗೂ ಬೆಳ್ಳೊಳ್ಳಿ ಮಾರುಕಟ್ಟೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆಯಿತು. ಹೈದರಾಬಾದ್ನ ಮೆಣಸಿನಕಾಯಿ, ಗಜ್ಜರಿ, ಬಿಟ್ರೂಟ್ ಹಾಗೂ ತೊಂಡೆಕಾಯಿ ಸ್ಥಿರವಾದ ಬೆಲೆ ಉಳಿಸಿಕೊಂಡವು.</p>.<p>ಒಂದು ತಿಂಗಳಿಂದ ಬೆಳಗಾವಿ ಜಿಲ್ಲೆಯಿಂದ ಯಾವುದೇ ತರಕಾರಿ ಬಂದಿರಲಿಲ್ಲ. ಇದೀಗ ಗುಣಮಟ್ಟದ ಬೀನ್ಸ್<br />ಬೀದರ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಫುಲಾವ್ ಮಾಡುವವರು ಆಸಕ್ತಿಯಿಂದ ಖರೀದಿ ಮಾಡಿದರು.</p>.<p>ಆಗ್ರಾದಿಂದ ಗುಣಮಟ್ಟದ ಆಲೂಗಡ್ಡೆ ಆವಕವಾಗಿದೆ. ಆಗ್ರಾದಲ್ಲಿ ಆಲೂಗಡ್ಡೆಯ ಬೆಲೆ ಹಠಾತ್ ಕುಸಿದಿರುವ ಕಾರಣ ಬೀದರ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಆಲೂಗಡ್ಡೆ ಲಭ್ಯವಾಗಿದೆ. ಹೋಟೆಲ್ ಹಾಗೂ ಖಾನಾವಳಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಲೂಗಡ್ಡೆ ಖರೀಸಿದರು. ಗೃಹ ಉದ್ಯೋಗದವರು ಚಿಪ್ಸ್ ಮಾಡಲು ಆಲೂಗಡ್ಡೆ ಚೌಕಾಶಿ ಮಾಡಿ ಕೊಂಡುಕೊಳ್ಳುತ್ತಿರುವುದು ಕಂಡು ಬಂದಿತು.</p>.<p>ಚಿಟಗುಪ್ಪ ತಾಲ್ಲೂಕಿನಲ್ಲಿ ಬೆಳೆಯಲಾದ ಎಲೆಕೋಸು, ಹೂಕೋಸು ಹಾಗೂ ಕರಿಬೇವು ಮಾರುಕಟ್ಟೆಯ ಮೇಲೆ ಹಿಡಿತ ಇಟ್ಟುಕೊಂಡಿದೆ. ಎಲೆಕೋಸಿನ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಅರ್ಧದಷ್ಟು ಕುಸಿದಿದೆ. ಹೂಕೋಸು ಹಾಗೂ ಕರಿಬೇವಿನ ಬೆಲೆ ಸ್ಥಿರವಾಗಿದೆ.</p>.<p>ಭಾಲ್ಕಿ ತಾಲ್ಲೂಕಿನ ಗ್ರಾಮಗಳಿಂದ ಬದನೆಕಾಯಿ ಹಾಗೂ ಬೀದರ್ ತಾಲ್ಲೂಕಿನ ಚಿಟ್ಟಾದಿಂದ ಟೊಮೆಟೊ ಮಾರುಕಟ್ಟೆ ಪ್ರವೇಶ ಮಾಡಿವೆ. ಇವುಗಳ ಬೆಲೆ ಕ್ವಿಂಟಲ್ಗೆ ₹ 200 ರಿಂದ 300ಕ್ಕೆ ಏರಿಕೆಯಾಗಿದೆ. ರೈತರಿಗೆ ನಿರೀಕ್ಷಿತ ಲಾಭ ದೊರೆತಿಲ್ಲ. ಬದನೆಕಾಯಿ ಹಾಗೂ ಟೊಮೆಟೊ ಸ್ಥಳೀಯವಾಗಿಯೇ ಲಭ್ಯವಿರುವ ಕಾರಣ ಸಾಗಾಣಿಕೆ ವೆಚ್ಚ ಕಡಿತಗೊಂಡು ಗ್ರಾಹಕರಿಗೆ ಅನುಕೂಲವಾಗಿದೆ.</p>.<p>‘ಕೊತಂಬರಿಯ ಬೆಲೆ ಕುಸಿದಿದೆ. ಮೆಂತೆ ಹಾಗೂ ಕಡಲೆ ಸೊಪ್ಪು ಮಾತ್ರ ಮಾರುಕಟ್ಟೆಗೆ ಬಂದಿದೆ. ಬೇರೆ ಸೊಪ್ಪು ಕೊಳ್ಳುವ ಗ್ರಾಹಕರ ಸಂಖ್ಯೆ ಬಹಳ ಕಡಿಮೆ ಇದೆ. ಸೊಪ್ಪಿನ ಬೆಲೆ ಈ ವಾರ ಸ್ಥಿರವಾಗಿದೆ’ ಎಂದು ಎನ್ನುತ್ತಾರೆ ಭಾರತ ತರಕಾರಿ ಅಂಗಡಿ ಮಾಲೀಕ ಅಬ್ದುಲ್ ನಬಿ.</p>.<p>‘ಕೆಲ ಪ್ರದೇಶದಲ್ಲಿ ಮಂಜು ಕವಿದ ವಾತಾವರಣ ಇರುವ ಕಾರಣ ಸೊಪ್ಪಿಗೆ ಕೀಟಬಾಧೆ ಕಾಣಿಸಿಕೊಂಡಿದೆ. ಕೀಟ ಕಾಣಿಸಿಕೊಂಡರೆ ಗ್ರಾಹಕರು ಕೊಂಡುಕೊಳ್ಳುವುದಿಲ್ಲ. ಹೀಗಾಗಿ ನೆರೆಯ ಜಿಲ್ಲೆಯ ಗುಣಮಟ್ಟದ ಸೊಪ್ಪನ್ನು ಮಾತ್ರ ತಂದು ಮಾರಾಟಕ್ಕೆ ಇಡಲಾಗಿದೆ’ ಎಂದು ಹೇಳುತ್ತಾರೆ.<br /><br /><strong>ಬೀದರ್ ತರಕಾರಿ ಸಗಟು ಮಾರುಕಟ್ಟೆ</strong><br /><br />ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ<br />ಈರುಳ್ಳಿ, 1,000-2,000, 1,000-1,200<br />ಮೆಣಸಿನಕಾಯಿ, 2,500-3,000, 1,500-2,000<br />ಆಲೂಗಡ್ಡೆ, 2,000-2,500, 1,500-2,000<br />ಎಲೆಕೋಸು, 1,500-2,000, 800-1,000<br />ಹೂಕೋಸು, 1,800-2,000, 1,500-2,000<br />ಬೆಳ್ಳೂಳ್ಳಿ, 2,500-3,000, 2,000-2,500<br />ಗಜ್ಜರಿ, 3,500-4,000, 3,500-4,000<br />ಬೀನ್ಸ್, 3,000-3,500, 3,000-3,500<br />ಬದನೆಕಾಯಿ, 1,800-2,200, 2,000-2,500<br />ಮೆಂತೆ ಸೊಪ್ಪು, 2,000-2,500, 2,000-2,500<br />ಸಬ್ಬಸಗಿ, 2,500-3,000, 3,000-3,500<br />ಬಿಟ್ರೂಟ್, 2,500-3,000, 3,500-4,000<br />ಕರಿಬೇವು, 3,000-3,500, 3,000-3,500<br />ಕೊತಂಬರಿ, 3,500-4,000, 3,000-3,500<br />ಕಡಲೆ ಸೊಪ್ಪು, 8,000-9,000, 6,000-7,000<br />ಟೊಮೆಟೊ, 1,000–1,200, 1,000-1,500<br />ತೊಂಡೆಕಾಯಿ, 2,500-3,000, 2,500-3,000<br />ಬೆಂಡೆಕಾಯಿ, 2,500-3,000, 3,000-3,500<br />ಹಿರೇಕಾಯಿ, 3,000-3,500, 3,000-4,000<br />ಸೋರೆಕಾಯಿ, 1200–1500, 1500–2000</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>