<p><strong>ಚಾಮರಾಜನಗರ:</strong> ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ)ಯೋಜನೆಯು ಗಡಿ ಜಿಲ್ಲೆಯ 162 ಸೋಲಿಗ ಕುಟುಂಬಗಳಿಗೆ ವರವಾಗಿ ಪರಿಣಮಿಸಿದೆ.</p>.<p>ಜಿಲ್ಲಾ ಪಂಚಾಯಿತಿಯು ರಾಜ್ಯದಲ್ಲೇ ಮೊದಲ ಬಾರಿಗೆ ನರೇಗಾ ಅಡಿಯಲ್ಲಿ ಕಾಫಿ ಬೆಳೆಯಲು ಅನುಕೂಲ ಕಲ್ಪಿಸಿದೆ. ಜಿಲ್ಲೆಯ ಪುಣಜನೂರು ಹಾಗೂ ಬಿಳಿಗಿರಿರಂಗನ ಬೆಟ್ಟ ಗ್ರಾಮ ಪಂಚಾಯಿತಿಗಳ 162 ಸೋಲಿಗ ಕುಟುಂಬಗಳು ನರೇಗಾ ಅನುದಾನವನ್ನು ಬಳಸಿಕೊಂಡು ತಮ್ಮ ಜಮೀನಿನಲ್ಲಿ ಕಾಫಿ ಗಿಡಗಳನ್ನು ಬೆಳೆಸಿವೆ.</p>.<p>ಒಂದು ವರ್ಷದಿಂದೀಚೆಗೆ ಈ ಕಾರ್ಯ ನಡೆಯುತ್ತಿದ್ದು, ಕಾಫಿ ಗಿಡಗಳು ಉತ್ತಮವಾಗಿ ಬಂದಿವೆ. ಜಿಲ್ಲಾ ಪಂಚಾಯಿತಿಯು ಈ ಯೋಜನೆಗೆ ₹ 29.83 ಲಕ್ಷ ವ್ಯಯಿಸಿದೆ. ಬಿಳಿಗಿರಿರಂಗನ ಬೆಟ್ಟದ ಎಂಟು ಪೋಡುಗಳ 56 ಸೋಲಿಗ ಕುಟುಂಬಗಳು ಹಾಗೂ ಪುಣಜನೂರು ವ್ಯಾಪ್ತಿಯ ಏಳು ಪೋಡುಗಳ 106 ಕುಟುಂಬಗಳು ಇದರ ಲಾಭ ಪಡೆದಿವೆ.</p>.<p>ಈ ಕುಟುಂಬಗಳ ಸದಸ್ಯರಿಗೆ ನರೇಗಾ ಅಡಿಯಲ್ಲಿ ಉದ್ಯೋಗ ಕಾರ್ಡ್ ನೀಡಿ, ₹30 ಸಾವಿರದಿಂದ ₹70 ಸಾವಿರದವರೆಗೂ ಅನುದಾನ ಮಂಜೂರು ಮಾಡಿ, ಕಾಫಿ ಗಿಡಗಳನ್ನು ಹಾಕುವಂತೆ ಜಿಲ್ಲಾ ಪಂಚಾಯಿತಿ ಪ್ರೇರೇಪಿಸಿದೆ. ಕೆಲವು ಕುಟುಂಬಗಳು ಎರಡು ಎಕರೆಯಷ್ಟು ಜಾಗದಲ್ಲೂ ಕಾಫಿ ಗಿಡಗಳನ್ನು ಹಾಕಿವೆ. ಗಿಡ ನೆಡುವುದಕ್ಕೆ ಮಾತ್ರವಲ್ಲದೇ, ಎರಡು ವರ್ಷಗಳ ನಿರ್ವಹಣೆಗೂ ಜಿಲ್ಲಾ ಪಂಚಾಯಿತಿ ಅನುದಾನ ನೀಡಲಿದೆ. </p>.<p class="Subhead">ಇದೇ ಮೊದಲು: ಕಾಫಿ ಬೆಳೆಗೆ ನರೇಗಾ ಅನುದಾನ ಕಲ್ಪಿಸಿರುವುದು ರಾಜ್ಯದಲ್ಲಿ ಇದೇ ಮೊದಲು. ಸೋಲಿಗರು ಪಡೆದಿರುವ ಹಕ್ಕು ಪತ್ರದ ಆಧಾರದಲ್ಲಿ ಅವರಿಗೆ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ.ಬಡ ಸೋಲಿಗ ಕುಟುಂಬಗಳಿಗೆ ನೆರವು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.</p>.<p>‘ಹಿಂದೆ ಹಕ್ಕು ಪತ್ರಗಳ ಸಮಸ್ಯೆ ಇದ್ದುದರಿಂದ ನರೇಗಾ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಈಗ ಬಹುತೇಕ ಸೋಲಿಗ ಕುಟುಂಬಗಳು ಹಕ್ಕು ಪತ್ರ ಹೊಂದಿವೆ. ಅದರ ಆಧಾರದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಫಲಿತಾಂಶ ಉತ್ತಮವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್ ಭೊಯರ್ ನಾರಾಯಣರಾವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Briefhead"><strong>ಕಾಳುಮೆಣಸು ಬೆಳೆಯುವವರಿಗೂ ನೆರವು</strong></p>.<p>ಕಾಫಿ ಬೆಳೆಗಾರರ ಮಾದರಿಯಲ್ಲಿ ಕಾಳು ಮೆಣಸು ಬೆಳೆಯುವ ಸೋಲಿಗ ಕುಟುಂಬಗಳಿಗೂ ನರೇಗಾ ಅಡಿಯಲ್ಲಿ ನೆರವು ನೀಡಲು ಜಿಲ್ಲಾ ಪಂಚಾಯಿತಿ ಮುಂದಾಗಿದ್ದು, ಬೆಳೆಗಾರರು ಕೂಡ ಆಸಕ್ತಿ ತೋರಿದ್ದಾರೆ. ಈ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ)ಯೋಜನೆಯು ಗಡಿ ಜಿಲ್ಲೆಯ 162 ಸೋಲಿಗ ಕುಟುಂಬಗಳಿಗೆ ವರವಾಗಿ ಪರಿಣಮಿಸಿದೆ.</p>.<p>ಜಿಲ್ಲಾ ಪಂಚಾಯಿತಿಯು ರಾಜ್ಯದಲ್ಲೇ ಮೊದಲ ಬಾರಿಗೆ ನರೇಗಾ ಅಡಿಯಲ್ಲಿ ಕಾಫಿ ಬೆಳೆಯಲು ಅನುಕೂಲ ಕಲ್ಪಿಸಿದೆ. ಜಿಲ್ಲೆಯ ಪುಣಜನೂರು ಹಾಗೂ ಬಿಳಿಗಿರಿರಂಗನ ಬೆಟ್ಟ ಗ್ರಾಮ ಪಂಚಾಯಿತಿಗಳ 162 ಸೋಲಿಗ ಕುಟುಂಬಗಳು ನರೇಗಾ ಅನುದಾನವನ್ನು ಬಳಸಿಕೊಂಡು ತಮ್ಮ ಜಮೀನಿನಲ್ಲಿ ಕಾಫಿ ಗಿಡಗಳನ್ನು ಬೆಳೆಸಿವೆ.</p>.<p>ಒಂದು ವರ್ಷದಿಂದೀಚೆಗೆ ಈ ಕಾರ್ಯ ನಡೆಯುತ್ತಿದ್ದು, ಕಾಫಿ ಗಿಡಗಳು ಉತ್ತಮವಾಗಿ ಬಂದಿವೆ. ಜಿಲ್ಲಾ ಪಂಚಾಯಿತಿಯು ಈ ಯೋಜನೆಗೆ ₹ 29.83 ಲಕ್ಷ ವ್ಯಯಿಸಿದೆ. ಬಿಳಿಗಿರಿರಂಗನ ಬೆಟ್ಟದ ಎಂಟು ಪೋಡುಗಳ 56 ಸೋಲಿಗ ಕುಟುಂಬಗಳು ಹಾಗೂ ಪುಣಜನೂರು ವ್ಯಾಪ್ತಿಯ ಏಳು ಪೋಡುಗಳ 106 ಕುಟುಂಬಗಳು ಇದರ ಲಾಭ ಪಡೆದಿವೆ.</p>.<p>ಈ ಕುಟುಂಬಗಳ ಸದಸ್ಯರಿಗೆ ನರೇಗಾ ಅಡಿಯಲ್ಲಿ ಉದ್ಯೋಗ ಕಾರ್ಡ್ ನೀಡಿ, ₹30 ಸಾವಿರದಿಂದ ₹70 ಸಾವಿರದವರೆಗೂ ಅನುದಾನ ಮಂಜೂರು ಮಾಡಿ, ಕಾಫಿ ಗಿಡಗಳನ್ನು ಹಾಕುವಂತೆ ಜಿಲ್ಲಾ ಪಂಚಾಯಿತಿ ಪ್ರೇರೇಪಿಸಿದೆ. ಕೆಲವು ಕುಟುಂಬಗಳು ಎರಡು ಎಕರೆಯಷ್ಟು ಜಾಗದಲ್ಲೂ ಕಾಫಿ ಗಿಡಗಳನ್ನು ಹಾಕಿವೆ. ಗಿಡ ನೆಡುವುದಕ್ಕೆ ಮಾತ್ರವಲ್ಲದೇ, ಎರಡು ವರ್ಷಗಳ ನಿರ್ವಹಣೆಗೂ ಜಿಲ್ಲಾ ಪಂಚಾಯಿತಿ ಅನುದಾನ ನೀಡಲಿದೆ. </p>.<p class="Subhead">ಇದೇ ಮೊದಲು: ಕಾಫಿ ಬೆಳೆಗೆ ನರೇಗಾ ಅನುದಾನ ಕಲ್ಪಿಸಿರುವುದು ರಾಜ್ಯದಲ್ಲಿ ಇದೇ ಮೊದಲು. ಸೋಲಿಗರು ಪಡೆದಿರುವ ಹಕ್ಕು ಪತ್ರದ ಆಧಾರದಲ್ಲಿ ಅವರಿಗೆ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ.ಬಡ ಸೋಲಿಗ ಕುಟುಂಬಗಳಿಗೆ ನೆರವು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.</p>.<p>‘ಹಿಂದೆ ಹಕ್ಕು ಪತ್ರಗಳ ಸಮಸ್ಯೆ ಇದ್ದುದರಿಂದ ನರೇಗಾ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಈಗ ಬಹುತೇಕ ಸೋಲಿಗ ಕುಟುಂಬಗಳು ಹಕ್ಕು ಪತ್ರ ಹೊಂದಿವೆ. ಅದರ ಆಧಾರದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಫಲಿತಾಂಶ ಉತ್ತಮವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್ ಭೊಯರ್ ನಾರಾಯಣರಾವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Briefhead"><strong>ಕಾಳುಮೆಣಸು ಬೆಳೆಯುವವರಿಗೂ ನೆರವು</strong></p>.<p>ಕಾಫಿ ಬೆಳೆಗಾರರ ಮಾದರಿಯಲ್ಲಿ ಕಾಳು ಮೆಣಸು ಬೆಳೆಯುವ ಸೋಲಿಗ ಕುಟುಂಬಗಳಿಗೂ ನರೇಗಾ ಅಡಿಯಲ್ಲಿ ನೆರವು ನೀಡಲು ಜಿಲ್ಲಾ ಪಂಚಾಯಿತಿ ಮುಂದಾಗಿದ್ದು, ಬೆಳೆಗಾರರು ಕೂಡ ಆಸಕ್ತಿ ತೋರಿದ್ದಾರೆ. ಈ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>