ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಫಕೀರಪ್ಪ ಎಚ್.ಛಲವಾದಿ, ಉಪ ಆಯುಕ್ತ ನಾಗಶಯನ, ಚಾಮರಾಜನಗರ ಜಿಲ್ಲೆ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಆರ್.ಮಂಜುನಾಯ್ಕ, ವಲಯ ನೌಕರರಾದ ಅಬಕಾರಿ ಮುಖ್ಯ ಪೇದೆ ಭಾಸ್ಕರ್, ಅಬಕಾರಿ ಪೇದೆಗಳಾದ ಷಣ್ಮುಖ, ಕುಮಾರಸ್ವಾಮಿ, ಸಿದ್ದೇಶ್ ಮತ್ತು ವಾಹನ ಚಾಲಕ ಸೋಮಣ್ಣ ಪಾಲ್ಗೊಂಡಿದ್ದರು.