<p><strong>ಚಾಮರಾಜನಗರ</strong>: ‘ಕೂಡಲಸಂಗಮ ಹಾಗು ಹರಿಹರ ಪಂಚಮಸಾಲಿ ಪೀಠಗಳಿಗೆ ಪರ್ಯಾಯವಾಗಿ ಮೂರನೇ ಶಕ್ತಿಯನ್ನು ನಿರ್ಮಾಣ ಮಾಡಲು ಹೊರಟವರು ಯಾರೆಂದು ನನಗೆ ಗೊತ್ತಿಲ್ಲ. ಈ ವಿಚಾರವೇ ನನಗೆ ತಿಳಿದಿಲ್ಲ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಮಂಗಳವಾರ ಹೇಳಿದರು.</p>.<p>ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಬನಗೂಳಿ ಮಠದಲ್ಲಿ ಸೋಮವಾರ ನಡೆದ 40ಕ್ಕೂ ಹೆಚ್ಚು ಮಠಾಧೀಶರು ಸಭೆಯ ಬಗ್ಗೆನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ತಾಲ್ಲೂಕಿಗೊಂದು ಮಠ ಕಟ್ಟಲು ಇವರು ಹೊರಟಿದ್ದಾರೆ. ನನಗೂ ಇದಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ತಲೆಯೂ ಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.</p>.<p>‘ಪಂಚಮಸಾಲಿಗಳಿಗೆ 2ಎ ಮೀಸಲಾತಿ ದೊರಕಿಸಿಕೊಡುವುದು ನನ್ನ ಗುರಿ.702 ಕಿ.ಮೀ ಪಾದಯಾತ್ರೆ ಮಾಡಿ ಪಂಚಮಶಾಲಿಗಳನ್ನು ಒಗ್ಗೂಡಿಸಿದ್ದೇನೆ.ಒಗ್ಗಟ್ಟಿನ ಮಹಾ ಅಡುಗೆ ಮಾಡಿದ್ದೇನೆ.ಇದರ ಲಾಭ ಪಂಚಮಶಾಲಿ ಕಟ್ಟಕಡೆಯ ಬಡ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಶೋಷಿತ ರೈತರಿಗೆ ದೊರಕಬೇಕು.ಒಗ್ಗಟ್ಟಿನ ಮಹಾಪ್ರಸಾದ ದುರುಪಯೋಗ ಪಡಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ’ ಎಂದರು.</p>.<p>‘ಸಮಾಜದ ಹಿತ ಕಾಪಾಡುವುದು ನನ್ನ ಕೆಲಸ.ಒಳ್ಳೆ ಕೆಲಸಗಳು ನಡೆದಾಗ ಈ ರೀತಿಯ ಬೆಳವಣಿಗೆ ಆಗುತ್ತವೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.</p>.<p class="Subhead"><strong>ರಾಜಕೀಯ ಪ್ರೇರಿತ: </strong>ಈ ಬೆಳವಣಿಗೆ ಸಂಬಂಧ ಪ್ರತಿಕ್ರಿಯಿಸಿರುವ ಬಸನಗೌಡ ಪಾಟೀಲ ಯತ್ನಾಳ ಅವರು, ‘ಇದು ರಾಜಕೀಯ ಪ್ರೇರಿತ. ಸಭೆ ಸೇರಿದ್ದವರು ವಿರಕ್ತ ಮಠದ ಸ್ವಾಮೀಜಿಗಳು ಪಂಚಮಸಾಲಿ ಪೀಠಾಧಿಪತಿಗಳಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ‘ಕೂಡಲಸಂಗಮ ಹಾಗು ಹರಿಹರ ಪಂಚಮಸಾಲಿ ಪೀಠಗಳಿಗೆ ಪರ್ಯಾಯವಾಗಿ ಮೂರನೇ ಶಕ್ತಿಯನ್ನು ನಿರ್ಮಾಣ ಮಾಡಲು ಹೊರಟವರು ಯಾರೆಂದು ನನಗೆ ಗೊತ್ತಿಲ್ಲ. ಈ ವಿಚಾರವೇ ನನಗೆ ತಿಳಿದಿಲ್ಲ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಮಂಗಳವಾರ ಹೇಳಿದರು.</p>.<p>ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಬನಗೂಳಿ ಮಠದಲ್ಲಿ ಸೋಮವಾರ ನಡೆದ 40ಕ್ಕೂ ಹೆಚ್ಚು ಮಠಾಧೀಶರು ಸಭೆಯ ಬಗ್ಗೆನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ತಾಲ್ಲೂಕಿಗೊಂದು ಮಠ ಕಟ್ಟಲು ಇವರು ಹೊರಟಿದ್ದಾರೆ. ನನಗೂ ಇದಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ತಲೆಯೂ ಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.</p>.<p>‘ಪಂಚಮಸಾಲಿಗಳಿಗೆ 2ಎ ಮೀಸಲಾತಿ ದೊರಕಿಸಿಕೊಡುವುದು ನನ್ನ ಗುರಿ.702 ಕಿ.ಮೀ ಪಾದಯಾತ್ರೆ ಮಾಡಿ ಪಂಚಮಶಾಲಿಗಳನ್ನು ಒಗ್ಗೂಡಿಸಿದ್ದೇನೆ.ಒಗ್ಗಟ್ಟಿನ ಮಹಾ ಅಡುಗೆ ಮಾಡಿದ್ದೇನೆ.ಇದರ ಲಾಭ ಪಂಚಮಶಾಲಿ ಕಟ್ಟಕಡೆಯ ಬಡ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಶೋಷಿತ ರೈತರಿಗೆ ದೊರಕಬೇಕು.ಒಗ್ಗಟ್ಟಿನ ಮಹಾಪ್ರಸಾದ ದುರುಪಯೋಗ ಪಡಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ’ ಎಂದರು.</p>.<p>‘ಸಮಾಜದ ಹಿತ ಕಾಪಾಡುವುದು ನನ್ನ ಕೆಲಸ.ಒಳ್ಳೆ ಕೆಲಸಗಳು ನಡೆದಾಗ ಈ ರೀತಿಯ ಬೆಳವಣಿಗೆ ಆಗುತ್ತವೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.</p>.<p class="Subhead"><strong>ರಾಜಕೀಯ ಪ್ರೇರಿತ: </strong>ಈ ಬೆಳವಣಿಗೆ ಸಂಬಂಧ ಪ್ರತಿಕ್ರಿಯಿಸಿರುವ ಬಸನಗೌಡ ಪಾಟೀಲ ಯತ್ನಾಳ ಅವರು, ‘ಇದು ರಾಜಕೀಯ ಪ್ರೇರಿತ. ಸಭೆ ಸೇರಿದ್ದವರು ವಿರಕ್ತ ಮಠದ ಸ್ವಾಮೀಜಿಗಳು ಪಂಚಮಸಾಲಿ ಪೀಠಾಧಿಪತಿಗಳಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>