<p><strong>ಯಳಂದೂರು</strong>: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ನೇರಿಗೆಡೆ ಕಾಡಿನಲ್ಲಿ ಜೇನು ಸಂಗ್ರಹಣೆ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ ಕರಡಿ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದಾರೆ.</p>.<p>ಬಿಳಿಗಿರಿಬೆಟ್ಟದ ಸೀಗೆಬೆಟ್ಟ ಪೋಡಿನ ನಿವಾಸಿ ರಂಗೇಗೌಡ ಎಂಬುವರ ಮಗ ಸಿದ್ದ (30) ಮೃತಪಟ್ಟವರು. ಇವರು ಜೇನು ಸಂಗ್ರಹಣೆ ಮಾಡಲು ಕಾಡಿಗೆ ತೆರಳಿದ್ದರು. ಈ ಸಮಯದಲ್ಲಿ ಕರಡಿ ದಾಳಿ ಮಾಡಿ ಮುಖ ಮತ್ತು ಕಾಲನ್ನು ಬಗೆದು ಗಾಯಗೊಳಿಸಿದೆ. ದೂರದಲ್ಲಿ ಇದ್ದ ಶ್ರಮಿಕರು ಹತ್ತಿರ ಬರುವ ವೇಳೆಗಾಗಲೇ ಸಿದ್ದ ರಕ್ತ ಸ್ರಾವದಿಂದ ಸ್ಥಳದಲ್ಲಿ ಅಸುನೀಗಿದ್ದಾರೆ ಎನ್ನಲಾಗಿದೆ.</p>.<p>ಪತ್ನಿ ಮೂರು ವರ್ಷಗಳ ಹಿಂದೆ ಸಾವಿಗೀಡಾಗಿದ್ದರು. 3 ವರ್ಷದ ಮಗಳನ್ನು ಸಾಕುತ್ತಿದ್ದ ಸಿದ್ದ ಶ್ರಮ ಜೀವಿಯಾಗಿದ್ದ. ಈಗ ಮಗು ತಬ್ಬುಲಿಯಾಗಿದ್ದು, ದಿಕ್ಕು ತೋಚದಂತೆ ಆಗಿದೆ ಎಂದು ಸಂಬಂಧಿಕರು ರೋದಿಸಿದರು. ಅರಣ್ಯ ಅಧಿಕಾರಿಗಳು ಹಾಗೂ ಸೋಲಿಗ ಮುಖಂಡರು ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ನೇರಿಗೆಡೆ ಕಾಡಿನಲ್ಲಿ ಜೇನು ಸಂಗ್ರಹಣೆ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ ಕರಡಿ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದಾರೆ.</p>.<p>ಬಿಳಿಗಿರಿಬೆಟ್ಟದ ಸೀಗೆಬೆಟ್ಟ ಪೋಡಿನ ನಿವಾಸಿ ರಂಗೇಗೌಡ ಎಂಬುವರ ಮಗ ಸಿದ್ದ (30) ಮೃತಪಟ್ಟವರು. ಇವರು ಜೇನು ಸಂಗ್ರಹಣೆ ಮಾಡಲು ಕಾಡಿಗೆ ತೆರಳಿದ್ದರು. ಈ ಸಮಯದಲ್ಲಿ ಕರಡಿ ದಾಳಿ ಮಾಡಿ ಮುಖ ಮತ್ತು ಕಾಲನ್ನು ಬಗೆದು ಗಾಯಗೊಳಿಸಿದೆ. ದೂರದಲ್ಲಿ ಇದ್ದ ಶ್ರಮಿಕರು ಹತ್ತಿರ ಬರುವ ವೇಳೆಗಾಗಲೇ ಸಿದ್ದ ರಕ್ತ ಸ್ರಾವದಿಂದ ಸ್ಥಳದಲ್ಲಿ ಅಸುನೀಗಿದ್ದಾರೆ ಎನ್ನಲಾಗಿದೆ.</p>.<p>ಪತ್ನಿ ಮೂರು ವರ್ಷಗಳ ಹಿಂದೆ ಸಾವಿಗೀಡಾಗಿದ್ದರು. 3 ವರ್ಷದ ಮಗಳನ್ನು ಸಾಕುತ್ತಿದ್ದ ಸಿದ್ದ ಶ್ರಮ ಜೀವಿಯಾಗಿದ್ದ. ಈಗ ಮಗು ತಬ್ಬುಲಿಯಾಗಿದ್ದು, ದಿಕ್ಕು ತೋಚದಂತೆ ಆಗಿದೆ ಎಂದು ಸಂಬಂಧಿಕರು ರೋದಿಸಿದರು. ಅರಣ್ಯ ಅಧಿಕಾರಿಗಳು ಹಾಗೂ ಸೋಲಿಗ ಮುಖಂಡರು ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>