<p><strong>ಯಳಂದೂರು:</strong> ಪಟ್ಟಣದ ಬಸ್ ನಿಲ್ದಾಣದಿಂದ ಶನಿವಾರ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಕೆಎಸ್ಆರ್ ಟಿಸಿ ಬಸ್ಗೆ ಪ್ರಯಾಣಿಕರು ಹತ್ತುವಾಗ ಬಾಗಿಲು ಕಿತ್ತು ಬಂತು.</p>.<p>ಶನಿವಾರ ಮೊಹರಂ ಕಡೇದಿನ ಹಾಗೂ ರಂಗನಾಥಸ್ವಾಮಿಗೆ ವಿಶೇಷ ದಿನ. ಅಪಾರ ಭಕ್ತರು ಹಾಗೂ ಪ್ರವಾಸಿಗರು ಬಸ್ ನಿಲ್ದಾಣದಲ್ಲಿ ನೆರೆದಿದ್ದರು. ಈ ವೇಳೆ ಬಸ್ ಬಾಗಿಲು ತೆರೆಯುವ ಸಂದರ್ಭ ಬಲ ಪ್ರಯೋಗ ಮಾಡಿದಾಗ ಬಾಗಿಲು ಕಿತ್ತು ಬಂದಿದೆ.</p>.<p>‘ಸರ್ಕಾರಿ ಬಸ್ ಬಾಗಿಲುಗಳು ನಾಮಕಾವಸ್ತೆಗೆ ಮಾತ್ರ ಇರುತ್ತವೆ. ಸರಿಯಾಗಿ ಲಾಕ್ ಆಗಲಾಗದು. ಒಮ್ಮೊಮ್ಮೆ ಬಾಗಿಲು ಹಾಕುವಾಗ ಮತ್ತು ತೆಗೆಯುವಾಗ ಸಮಸ್ಯೆಯಾಗುತ್ತದೆ. ನೂರಾರು ಜನರು ಪ್ರತಿ ಬಾರಿ ಇಳಿದು ಹತ್ತುವಾಗ ಕಿತ್ತು ಬರುವುದು ಸಾಮಾನ್ಯವಾಗಿದೆ’ ಎಂದು ಪ್ರವಾಸಿ ಮೈಸೂರು ನಂಜುಂಡ ಹೇಳಿದರು.</p>.<p><strong>ಮಹಿಳೆಯರಿಂದ ಬಾಗಿಲು ಮುರಿದಿಲ್ಲ:</strong> ‘ಮಹಿಳೆಯರು ಬಸ್ ಹತ್ತುವಾಗ ಬಾಗಿಲು ಕಿತ್ತು ಬಂದಿಲ್ಲ. ನೂಕು ನುಗ್ಗಲು ಹೆಚ್ಚಾದಾಗ ಬಹಳಷ್ಟು ಪ್ರಯಾಣಿಕರು ಬಾಗಿಲನ್ನು ಆಸರೆಯಾಗಿ ಇಡಿಯುತ್ತಾರೆ. ಮಿತಿ ಮೀರಿದ ಜನರು ಇದ್ದಾಗ ಬಾಗಿಲಿಗೆ ಬಲ ಬೀಳುತ್ತದೆ. ಇಂತಹ ಸಂದರ್ಭದಲ್ಲಿ ಬಾಗಿಲು ಕಿತ್ತು ಬರುತ್ತದೆ’ ಎಂದು ನಿರ್ವಾಹಕರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ಪಟ್ಟಣದ ಬಸ್ ನಿಲ್ದಾಣದಿಂದ ಶನಿವಾರ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಕೆಎಸ್ಆರ್ ಟಿಸಿ ಬಸ್ಗೆ ಪ್ರಯಾಣಿಕರು ಹತ್ತುವಾಗ ಬಾಗಿಲು ಕಿತ್ತು ಬಂತು.</p>.<p>ಶನಿವಾರ ಮೊಹರಂ ಕಡೇದಿನ ಹಾಗೂ ರಂಗನಾಥಸ್ವಾಮಿಗೆ ವಿಶೇಷ ದಿನ. ಅಪಾರ ಭಕ್ತರು ಹಾಗೂ ಪ್ರವಾಸಿಗರು ಬಸ್ ನಿಲ್ದಾಣದಲ್ಲಿ ನೆರೆದಿದ್ದರು. ಈ ವೇಳೆ ಬಸ್ ಬಾಗಿಲು ತೆರೆಯುವ ಸಂದರ್ಭ ಬಲ ಪ್ರಯೋಗ ಮಾಡಿದಾಗ ಬಾಗಿಲು ಕಿತ್ತು ಬಂದಿದೆ.</p>.<p>‘ಸರ್ಕಾರಿ ಬಸ್ ಬಾಗಿಲುಗಳು ನಾಮಕಾವಸ್ತೆಗೆ ಮಾತ್ರ ಇರುತ್ತವೆ. ಸರಿಯಾಗಿ ಲಾಕ್ ಆಗಲಾಗದು. ಒಮ್ಮೊಮ್ಮೆ ಬಾಗಿಲು ಹಾಕುವಾಗ ಮತ್ತು ತೆಗೆಯುವಾಗ ಸಮಸ್ಯೆಯಾಗುತ್ತದೆ. ನೂರಾರು ಜನರು ಪ್ರತಿ ಬಾರಿ ಇಳಿದು ಹತ್ತುವಾಗ ಕಿತ್ತು ಬರುವುದು ಸಾಮಾನ್ಯವಾಗಿದೆ’ ಎಂದು ಪ್ರವಾಸಿ ಮೈಸೂರು ನಂಜುಂಡ ಹೇಳಿದರು.</p>.<p><strong>ಮಹಿಳೆಯರಿಂದ ಬಾಗಿಲು ಮುರಿದಿಲ್ಲ:</strong> ‘ಮಹಿಳೆಯರು ಬಸ್ ಹತ್ತುವಾಗ ಬಾಗಿಲು ಕಿತ್ತು ಬಂದಿಲ್ಲ. ನೂಕು ನುಗ್ಗಲು ಹೆಚ್ಚಾದಾಗ ಬಹಳಷ್ಟು ಪ್ರಯಾಣಿಕರು ಬಾಗಿಲನ್ನು ಆಸರೆಯಾಗಿ ಇಡಿಯುತ್ತಾರೆ. ಮಿತಿ ಮೀರಿದ ಜನರು ಇದ್ದಾಗ ಬಾಗಿಲಿಗೆ ಬಲ ಬೀಳುತ್ತದೆ. ಇಂತಹ ಸಂದರ್ಭದಲ್ಲಿ ಬಾಗಿಲು ಕಿತ್ತು ಬರುತ್ತದೆ’ ಎಂದು ನಿರ್ವಾಹಕರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>