ಜಿಲ್ಲೆಯಲ್ಲಿರುವ ಕೈಮಗ್ಗ ಸಹಕಾರ ಸಂಘಗಳನ್ನು ಬಳಸಿಕೊಂಡು,‘ಕೊಳ್ಳೇಗಾಲ ರೇಷ್ಮೆ ಸೀರೆ’ ಎಂಬ ಬ್ರ್ಯಾಂಡ್ ರೂಪಿಸಿ ಅವುಗಳ ಮಾರಾಟಕ್ಕಾಗಿ ಸ್ಮಾರ್ಟ್ ಕೈಮಗ್ಗ ಮಳಿಗೆಯೊಂದನ್ನು (ಸ್ಮಾರ್ಟ್ ಹ್ಯಾಂಡ್ಲೂಮ್ ಔಟ್ಲೆಟ್) ಸ್ಥಾಪಿಸಲು ಯೋಜನಾ ವರದಿಯೊಂದನ್ನು ಸಿದ್ಧಪಡಿಸಿದೆ.ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಪರಿಕಲ್ಪನೆಯಲ್ಲಿ ಈ ಯೋಜನೆ ರೂಪುಗೊಂಡಿದ್ದು, ಶೀಘ್ರದಲ್ಲಿ ಅನುಷ್ಠಾನಕ್ಕೆ ಬರಲಿದೆ.