‘ನಾನು ಜಿಲ್ಲಾಧಿಕಾರಿ ಎಂಬುದನ್ನು ಮರೆತುಬಿಡಿ. ಮೇಷ್ಟ್ರಾಗಿ ಬಂದಿದ್ದೇನೆ. 20 ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ಪಾಠ ಮಾಡಿದ್ದೇನೆ’ ಎಂದು ಮಾತು ಆರಂಭಿಸಿದ ರವಿ ಅವರು, ಒಂದೂಕಾಲು ಗಂಟೆ ಮೈಸೂರು ಒಡೆಯರ ಸಂಸ್ಥಾನದ ಬಗ್ಗೆ, ಸಂಸ್ಥಾನ ಹಾಗೂ ಚಾಮರಾಜನಗರದ ನಡುವಿನ ಬಾಂಧವ್ಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.