<p><strong>ಕೊಳ್ಳೇಗಾಲ:</strong> ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ ವರ, ಆತನ ಹಾಗೂ ವಧುವಿನ ಪೋಷಕರಿಗೆ ತಲಾ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ನಗರದ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.ಜೈಲು ಶಿಕ್ಷೆಯೊಂದಿಗೆ ತಲಾ ₹5,000 ದಂಡ ವಿಧಿಸಿದೆ.</p>.<p>ಕೊಳ್ಳೇಗಾಲ ತಾಲ್ಲೂಕಿನ ಗುಂಡಿಮಾಳದ ಗ್ರಾಮದ ಮಹದೇವ, ಬಸಮ್ಮ ದಂಪತಿ, ವರ ಮಹದೇವಸ್ವಾಮಿ ಹಾಗೂ ಯಳಂದೂರು ತಾಲ್ಲೂಕಿನ ನಾಗಮ್ಮ ಶಿಕ್ಷೆಗೆ ಗುರಿಯಾದವರು.</p>.<p>ಈ ಪೋಷಕರು 18 ವರ್ಷ ತುಂಬದ ಹೆಣ್ಣು ಮಗುವಿಗೆ 2016ರ ಮೇ 2ರಂದು ನಗರದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಏರ್ಪಡಿಸಿದ್ದರು.</p>.<p>ಅಂದಿನ ಸಿಡಿಪಿಒ ಶೇಷಾದ್ರಿ ನೇತೃತ್ವದ ತಂಡ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ವಧು ಇನ್ನೂ ಬಾಲಕಿ ಎಂಬುದು ಗೊತ್ತಾಗಿತ್ತು.</p>.<p>ವರ ಹಾಗೂ ಮೂವರು ಪೋಷಕರು, ಕಲ್ಯಾಣ ಮಂಟಪದ ಮಾಲೀಕ ಸೋಮಣ್ಣ, ವಯಸ್ಸು ದೃಢೀಕರಣ ಮಾಡಿದ ನೋಟರಿ ವಕೀಲ ಕೃಷ್ಣ ವಿರುದ್ಧ ನಗರದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ ಅವರು ಕಲ್ಯಾಣ ಮಂಟಪ ಮಾಲೀಕರು ಹಾಗೂ ನೋಟರಿ ವಕೀಲರನ್ನು ಖುಲಾಸೆಗೊಳಿಸಿ, ಉಳಿದ ನಾಲ್ವರು ಅಪರಾಧಿಗಳು ಎಂದು ಘೋಷಿಸಿ, ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.</p>.<p>ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರೂಪಾಲಕ್ಷ್ಮಿ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ:</strong> ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ ವರ, ಆತನ ಹಾಗೂ ವಧುವಿನ ಪೋಷಕರಿಗೆ ತಲಾ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ನಗರದ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.ಜೈಲು ಶಿಕ್ಷೆಯೊಂದಿಗೆ ತಲಾ ₹5,000 ದಂಡ ವಿಧಿಸಿದೆ.</p>.<p>ಕೊಳ್ಳೇಗಾಲ ತಾಲ್ಲೂಕಿನ ಗುಂಡಿಮಾಳದ ಗ್ರಾಮದ ಮಹದೇವ, ಬಸಮ್ಮ ದಂಪತಿ, ವರ ಮಹದೇವಸ್ವಾಮಿ ಹಾಗೂ ಯಳಂದೂರು ತಾಲ್ಲೂಕಿನ ನಾಗಮ್ಮ ಶಿಕ್ಷೆಗೆ ಗುರಿಯಾದವರು.</p>.<p>ಈ ಪೋಷಕರು 18 ವರ್ಷ ತುಂಬದ ಹೆಣ್ಣು ಮಗುವಿಗೆ 2016ರ ಮೇ 2ರಂದು ನಗರದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಏರ್ಪಡಿಸಿದ್ದರು.</p>.<p>ಅಂದಿನ ಸಿಡಿಪಿಒ ಶೇಷಾದ್ರಿ ನೇತೃತ್ವದ ತಂಡ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ವಧು ಇನ್ನೂ ಬಾಲಕಿ ಎಂಬುದು ಗೊತ್ತಾಗಿತ್ತು.</p>.<p>ವರ ಹಾಗೂ ಮೂವರು ಪೋಷಕರು, ಕಲ್ಯಾಣ ಮಂಟಪದ ಮಾಲೀಕ ಸೋಮಣ್ಣ, ವಯಸ್ಸು ದೃಢೀಕರಣ ಮಾಡಿದ ನೋಟರಿ ವಕೀಲ ಕೃಷ್ಣ ವಿರುದ್ಧ ನಗರದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.</p>.<p>ಪ್ರಕರಣದ ವಿಚಾರಣೆ ನಡೆಸಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ ಅವರು ಕಲ್ಯಾಣ ಮಂಟಪ ಮಾಲೀಕರು ಹಾಗೂ ನೋಟರಿ ವಕೀಲರನ್ನು ಖುಲಾಸೆಗೊಳಿಸಿ, ಉಳಿದ ನಾಲ್ವರು ಅಪರಾಧಿಗಳು ಎಂದು ಘೋಷಿಸಿ, ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.</p>.<p>ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರೂಪಾಲಕ್ಷ್ಮಿ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>