ಮನೆಗೆ ಬಂದು ಚಾಮರಾಜನಗರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೊದಲು ಭಯ ಆಯಿತು. ಆಸ್ಪತ್ರೆ ಸೇರಿದ ಮೇಲೆ ವೈದ್ಯರು, ನರ್ಸ್ಗಳು ಧೈರ್ಯ ತುಂಬಿ ಭಯ ಹೋಗಲಾಡಿಸಿದರು. ಅಲ್ಲಿರುವಷ್ಟು ದಿವಸ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಮಾತ್ರೆ ನೀಡಿದರು. ಸ್ನಾನಕ್ಕೆ ಬಿಸಿನೀರು ಸಿಗುತ್ತಿತ್ತು. ಅಲ್ಲಿರುವಷ್ಟು ದಿವಸ ಯಾವುದೇ ಸಮಸ್ಯೆಯೂ ಬಾರದಂತೆ ದಿನಗಳನ್ನು ಕಳೆದೆ.