ಶನಿವಾರ ರಾತ್ರಿ 10 ಗಂಟೆ ವೇಳೆಗೆ ಜಮೀನಿಗೆ ದಾಳಿ ಮಾಡಿ ಕಟಾವು ಹಂತದಲ್ಲಿದ್ದ ಮುಸುಕಿನ ಜೋಳವನ್ನು ತಿಂದು ದೊಡ್ಡದಾಗಿ ಸದ್ದು ಮಾಡುತ್ತಿದ್ದ ಸಮಯದಲ್ಲಿ ತೋಟದ ಮನೆಯಲ್ಲಿದ್ದ ಸಾಕು ನಾಯಿಗಳು ಬೊಗಳಲು ಪ್ರಾರಂಭಿಸಿವೆ. ಈ ವೇಳೆ ಎದ್ದು ಬಂದು ಜಮೀನಿನ ಸುತ್ತಾ ಕಣ್ಣು ಹಾಯಿಸಿದಾಗ 2 ಮರಿ ಆನೆಗಳ ಜೊತೆಗೆ 5 ದೊಡ್ಡ ಆನೆಗಳು ಬೆಳೆಯನ್ನು ನಾಶಗೊಳಿಸುತ್ತಿರುವುದನ್ನು ಕಂಡು ಅರಣ್ಯ ಇಲಾಖೆಯವರಿಗೆ ದೂರವಾಣಿ ಮುಖಾಂತರ ಹೇಳಿದೆ. ಅದಕ್ಕೆ ಅವರು ರಾತ್ರಿ ಸಮಯದಲ್ಲಿ ಬರುವುದು ತಡವಾಗುತ್ತದೆ ಪಟಾಕಿಗಳನ್ನು ಸಿಡಿಸಿ ಓಡಿಸಿ ಎಂದರು. ಅವರು ಹೇಳಿದಂತೆ ಪಟಾಕಿ ಸಿಡಿಸಿದಾಗ ಮರಿ ಆನೆ ಇದ್ದರಿಂದ ಎಲ್ಲೆಂದರಲ್ಲಿ ಅಡ್ಡಾಡಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ಕಾಡಾನೆಗಳ ಕಾಲ್ತುಳಿತಕ್ಕೆ ನಷ್ಟ ಉಂಟಾಗಿವೆ’ ಎಂದು ಅವರು ಆರೋಪಿಸಿದರು.