ಚಾಮರಾಜ ಒಡೆಯರು ಜನಿಸಿದ ಜನನ ಮಂಟಪ ಚಾಮರಾಜೇಶ್ವರ ದೇವಸ್ಥಾನದ ಪಕ್ಕದಲ್ಲಿ ಕಾಣಬಹುದು. ಮೈಸೂರು ದಸರಾದಲ್ಲಿ ಮಹಾರಾಜರು ಖಾಸಗಿ ದರ್ಬಾರ್ ನಡೆಸಿದರೆ ಚಾಮರಾಜನಗರ ದಸರಾದಲ್ಲಿ ಚಾಮರಾಜೇಶ್ವರ ಸ್ವಾಮಿಯ ದರ್ಬಾರ್ ಉತ್ಸವ ನಡೆಯುವುದು ವಿಶೇಷ.– ರಾಮಕೃಷ್ಣ ಉಪಾಧ್ಯಾಯ ಚಾಮರಾಜೇಶ್ವರ ದೇವಸ್ಥಾನ ಅರ್ಚಕ
ಹಿಂದೆ ಚಾಮರಾಜನಗರದ ಮಂಗಲ ಗ್ರಾಮದ ಹೆಣ್ಣನ್ನು ಮೈಸೂರು ಅರಸರು ವಿವಾಹವಾಗಿದ್ದಾರೆ. ಅರಸಸು ಜಿಲ್ಲೆಯಲ್ಲಿ ಹಲವು ದೇಗುಲಗಳನ್ನು ನಿರ್ಮಾಣ ಮಾಡಿದ್ದಾರೆ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ. ಇಷ್ಟಾದರೂ ಅರಸರ ಜೊತೆಗೆ ಜಿಲ್ಲೆ ನಂಟುಹೊಂದಿಲ್ಲ ಎಂಬ ಹೇಳಿಕೆ ಸರಿಯಲ್ಲ.– ಸಿಎಂ ಕೃಷ್ಣಮೂರ್ತಿ ದಲಿತ ಮುಖಂಡ
ಚಾಮರಾಜನಗರ ಸ್ವತಂತ್ರ ಜಿಲ್ಲೆಯಾಗಿ ಬೇರ್ಪಟ್ಟಿದ್ದರೂ ಇಂದಿಗೂ ನಾವೆಲ್ಲರೂ ಮೈಸೂರು ಸಂಸ್ಥಾನದ ಮಕ್ಕಳಿದಂತೆ. ನೂರಾರು ವರ್ಷಗಳಿಂದಲೂ ಮೈಸೂರು ಅರಸರೊಂದಿಗೆ ಬಾಂಧವ್ಯ ಹೊಂದಿದ್ದು ಅರಸರ ಋಣ ಜಿಲ್ಲೆಯ ಮೇಲಿದೆ. ಚಾಮರಾಜನಗರ ದಸರಾ ಸಂಸ್ಕೃತಿ ಪರಂಪರೆಯೊಂದಿಗೆ ಬೆಸೆದುಕೊಂಡಿದ್ದು ಸರ್ಕಾರ ಜನರ ಆತ್ಮಸಂತೋಷ ಪಡಿಸುವ ಕೆಲಸ ಮಾಡಿದರೆ ಗೌರವ ಹೆಚ್ಚಾಗುತ್ತದೆ.– ಸುರೇಶ್ ಪಿ.ಋಗ್ವೇದಿ ಸಂಸ್ಕೃತಿ ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.