ಪರೀಕ್ಷೆ ಆರಂಭಕ್ಕೂ ಮುನ್ನ ಗೌರಿಯ ತಂದೆ, ‘ಕೋವಿಡ್–19 ಭೀತಿಯ ನಡುವೆ ಪರೀಕ್ಷೆ ನಡೆಸಬಾರದು. ಪರೀಕ್ಷೆಯನ್ನು ಮುಂದೂಡಬೇಕು’ ಎಂದು ಫೇಸ್ಬುಕ್ನಲ್ಲಿ ಬರೆದಿದ್ದರು. ಇದನ್ನು ಗಮನಿಸಿದ್ದ ಸುರೇಶ್ ಕುಮಾರ್ ಅವರು ಅಂದೇ ಅವರಿಗೆ ಕರೆ ಮಾಡಿ, ಮಗಳೊಂದಿಗೆ ಮಾತನಾಡುವ ಇರಾದೆ ವ್ಯಕ್ತಪಡಿಸಿದ್ದರು. ಆ ನಂತರ ಗೌರಿಯೊಂದಿಗೂ ಮಾತನಾಡಿದ್ದ ಸಚಿವರು, ಧೈರ್ಯ ತುಂಬಿದ್ದರಲ್ಲದೇ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದ್ದರು.