<p>ಯಳಂದೂರು:ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಇದೇ 7 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭೇಟಿ ನೀಡುತ್ತಿರುವುದರಿಂದ ಅವರ ವಾಹನ ಸಾಗುವ ರಸ್ತೆ, ಕೆರೆ-ಕಟ್ಟೆ ಬದಿಗಳ ದುರಸ್ತಿ ನಡೆಯುತ್ತಿದೆ.</p>.<p>ಬಿಳಿಗಿರಿರಂಗನಬೆಟ್ಟದ ಬಳಿಯ ಕೆರೆ ಕಟ್ಟೆಗಳು ಮತ್ತು ಇಳಿಜಾರು ಪ್ರದೇಶಗಳಲ್ಲಿ ರಸ್ತೆಯ ಬದಿಗಳಲ್ಲಿ ಸಿಮೆಂಟ್ ಕಂಬ ಅಳವಡಿಸಲಾಗುತ್ತಿದ್ದು, ಇದಕ್ಕೆ ವನ್ಯಪ್ರೇಮಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.</p>.<p>ರಕ್ಷಿತಾರಣ್ಯದಲ್ಲಿ ಆನೆಗಳು ಹಾಗೂ ಇತರ ಪ್ರಾಣಿಗಳು ಮುಕ್ತವಾಗಿ ಓಡಾಟಬೇಕು. ಈ ರೀತಿ ಕಂಬಗಳನ್ನು ಅಳವಡಿಸಿದರೆ ಅವುಗಳ ಓಡಾಟಕ್ಕೆ ಅಡಚಣೆಯಾಗುತ್ತದೆ. ಇದು ಕಾನೂನಿನ ಉಲ್ಲಂಘನೆ ಎಂದು ಅವರು ದೂರಿದ್ದಾರೆ.</p>.<p>ಕಾಡಿನಲ್ಲಿರುವ ರಸ್ತೆಯು ಕಿರಿದಾಗಿದ್ದು, ರಾಷ್ಟ್ರಪತಿ ಅವರ ವಾಹನ ಹಾಗೂ ಬೆಂಗಾವಲು ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಯು ಕಾಂಕ್ರೀಟ್ ಹಾಕಿ ಸಿಮೆಂಟ್ ಕಂಬಗಳನ್ನು ಅಳವಡಿಸುತ್ತಿದೆ.</p>.<p>ಬಿಆರ್ಟಿಯ ನವಿಲುಕೆರೆಯಿಂದ ಸೋಮರಸನ ಕೆರೆ ತನಕ ಐದಾರು ಜಲ ಮೂಲಗಳು ಇವೆ. ಈ ಭಾಗಗಳ ಸುತ್ತಮುತ್ತ ಆನೆ, ಚಿರತೆ, ಕರಡಿ ಮತ್ತು ಹುಲಿಗಳಹಾದಿಯೂ ಇದೆ. ಬಹುತೇಕ ಜೀವಿಗಳು ಇಲ್ಲಿ ಅಡ್ಡಾಡಲು ಮತ್ತು ವಿಶ್ರಮಿಸಲು ಇದೇರಸ್ತೆಯನ್ನು ಅವಲಂಬಿಸಿವೆ. ಸಿಮೆಂಟ್ ಕಂಬಗಳಅಳವಡಿಕೆಯಿಂದ ಜೀವಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬುದು ಪರಿಸರ ಪ್ರೇಮಿಗಳ ಕಾಳಜಿ.</p>.<p>‘ವನ್ಯಜೀವಿ ಸಂರಕ್ಷಣಾ ಕಾಯ್ದೆ-1972, ಪರಿಸರ ಸಂರಕ್ಷಣಾ ನಿಯಮ-1986 ಮತ್ತು ಜೀವ ವೈವಿಧ್ಯ ಕಾಯ್ದೆ- 2002ರ ಪ್ರಕಾರ ಹುಲಿ ಅಭಯಾರಣ್ಯದಲ್ಲಿ ಹೊಸ ಕಾಮಗಾರಿ ಕೈಗೊಳ್ಳುವುದಕ್ಕೆ ಅವಕಾಶ ಇಲ್ಲ.<br />ಕೆರೆ ಪರಿಸರದ ಸುತ್ತ ಹೊಸ ಕಾಮಗಾರಿ ಇಲ್ಲವೇ ನವೀಕರಣ ಮಾಡುವಂತಿಲ್ಲ.ಹಾಗಾಗಿ, ಅರಣ್ಯಗಳಲ್ಲಿ ವನ್ಯಜೀವಿಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಪರಿಸರ ಪ್ರೇಮಿ ಪ್ರದೀಪ್ ಅವರು ಹೇಳಿದರು.</p>.<p class="Briefhead">ತಾತ್ಕಾಲಿಕ ಅಳವಡಿಕೆ: ಡಿಸಿಎಫ್</p>.<p>ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಡಾ.ಜಿ.ಸಂತೋಷ್ ಕುಮಾರ್ ಅವರು, 'ಬಿಳಿಗಿರಿರಗನಬೆಟ್ಟದಕೆರೆ-ಕಟ್ಟೆಗಳ ಬಳಿ ಸಿಮೆಂಟ್ ಕಂಬಗಳನ್ನು ಲೋಕೋಪಯೋಗಿ ಇಲಾಖೆ ಅಳವಡಿಸುತ್ತಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈ ಕಾಮಗಾರಿ ತಾತ್ಕಾಲಿಕವಾಗಿದ್ದು, ರಾಷ್ಟ್ರಪತಿ ಭೇಟಿಯ ನಂತರ ತೆರವುಗೊಳಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಳಂದೂರು:ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಇದೇ 7 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭೇಟಿ ನೀಡುತ್ತಿರುವುದರಿಂದ ಅವರ ವಾಹನ ಸಾಗುವ ರಸ್ತೆ, ಕೆರೆ-ಕಟ್ಟೆ ಬದಿಗಳ ದುರಸ್ತಿ ನಡೆಯುತ್ತಿದೆ.</p>.<p>ಬಿಳಿಗಿರಿರಂಗನಬೆಟ್ಟದ ಬಳಿಯ ಕೆರೆ ಕಟ್ಟೆಗಳು ಮತ್ತು ಇಳಿಜಾರು ಪ್ರದೇಶಗಳಲ್ಲಿ ರಸ್ತೆಯ ಬದಿಗಳಲ್ಲಿ ಸಿಮೆಂಟ್ ಕಂಬ ಅಳವಡಿಸಲಾಗುತ್ತಿದ್ದು, ಇದಕ್ಕೆ ವನ್ಯಪ್ರೇಮಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.</p>.<p>ರಕ್ಷಿತಾರಣ್ಯದಲ್ಲಿ ಆನೆಗಳು ಹಾಗೂ ಇತರ ಪ್ರಾಣಿಗಳು ಮುಕ್ತವಾಗಿ ಓಡಾಟಬೇಕು. ಈ ರೀತಿ ಕಂಬಗಳನ್ನು ಅಳವಡಿಸಿದರೆ ಅವುಗಳ ಓಡಾಟಕ್ಕೆ ಅಡಚಣೆಯಾಗುತ್ತದೆ. ಇದು ಕಾನೂನಿನ ಉಲ್ಲಂಘನೆ ಎಂದು ಅವರು ದೂರಿದ್ದಾರೆ.</p>.<p>ಕಾಡಿನಲ್ಲಿರುವ ರಸ್ತೆಯು ಕಿರಿದಾಗಿದ್ದು, ರಾಷ್ಟ್ರಪತಿ ಅವರ ವಾಹನ ಹಾಗೂ ಬೆಂಗಾವಲು ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಯು ಕಾಂಕ್ರೀಟ್ ಹಾಕಿ ಸಿಮೆಂಟ್ ಕಂಬಗಳನ್ನು ಅಳವಡಿಸುತ್ತಿದೆ.</p>.<p>ಬಿಆರ್ಟಿಯ ನವಿಲುಕೆರೆಯಿಂದ ಸೋಮರಸನ ಕೆರೆ ತನಕ ಐದಾರು ಜಲ ಮೂಲಗಳು ಇವೆ. ಈ ಭಾಗಗಳ ಸುತ್ತಮುತ್ತ ಆನೆ, ಚಿರತೆ, ಕರಡಿ ಮತ್ತು ಹುಲಿಗಳಹಾದಿಯೂ ಇದೆ. ಬಹುತೇಕ ಜೀವಿಗಳು ಇಲ್ಲಿ ಅಡ್ಡಾಡಲು ಮತ್ತು ವಿಶ್ರಮಿಸಲು ಇದೇರಸ್ತೆಯನ್ನು ಅವಲಂಬಿಸಿವೆ. ಸಿಮೆಂಟ್ ಕಂಬಗಳಅಳವಡಿಕೆಯಿಂದ ಜೀವಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬುದು ಪರಿಸರ ಪ್ರೇಮಿಗಳ ಕಾಳಜಿ.</p>.<p>‘ವನ್ಯಜೀವಿ ಸಂರಕ್ಷಣಾ ಕಾಯ್ದೆ-1972, ಪರಿಸರ ಸಂರಕ್ಷಣಾ ನಿಯಮ-1986 ಮತ್ತು ಜೀವ ವೈವಿಧ್ಯ ಕಾಯ್ದೆ- 2002ರ ಪ್ರಕಾರ ಹುಲಿ ಅಭಯಾರಣ್ಯದಲ್ಲಿ ಹೊಸ ಕಾಮಗಾರಿ ಕೈಗೊಳ್ಳುವುದಕ್ಕೆ ಅವಕಾಶ ಇಲ್ಲ.<br />ಕೆರೆ ಪರಿಸರದ ಸುತ್ತ ಹೊಸ ಕಾಮಗಾರಿ ಇಲ್ಲವೇ ನವೀಕರಣ ಮಾಡುವಂತಿಲ್ಲ.ಹಾಗಾಗಿ, ಅರಣ್ಯಗಳಲ್ಲಿ ವನ್ಯಜೀವಿಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಪರಿಸರ ಪ್ರೇಮಿ ಪ್ರದೀಪ್ ಅವರು ಹೇಳಿದರು.</p>.<p class="Briefhead">ತಾತ್ಕಾಲಿಕ ಅಳವಡಿಕೆ: ಡಿಸಿಎಫ್</p>.<p>ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಡಾ.ಜಿ.ಸಂತೋಷ್ ಕುಮಾರ್ ಅವರು, 'ಬಿಳಿಗಿರಿರಗನಬೆಟ್ಟದಕೆರೆ-ಕಟ್ಟೆಗಳ ಬಳಿ ಸಿಮೆಂಟ್ ಕಂಬಗಳನ್ನು ಲೋಕೋಪಯೋಗಿ ಇಲಾಖೆ ಅಳವಡಿಸುತ್ತಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಈ ಕಾಮಗಾರಿ ತಾತ್ಕಾಲಿಕವಾಗಿದ್ದು, ರಾಷ್ಟ್ರಪತಿ ಭೇಟಿಯ ನಂತರ ತೆರವುಗೊಳಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>