<p><strong>ಹನೂರು: </strong>ಪ್ರೀತಿಸಿ ವಿವಾಹವಾಗಲು ಸಿದ್ಧತೆ ನಡೆಸಿಕೊಂಡಿದ್ದ ಪ್ರೇಮಿಗಳಿಬ್ಬರ ಮೇಲೆ ಯುವತಿಯ ತಂದೆ ಮತ್ತು ಸಹೋದರ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.</p>.<p>ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಧನಲಕ್ಷ್ಮಿ (24) ಮತ್ತು ಸತ್ಯ(28) ಹಲ್ಲೇಗೀಡಾದವರು. ಇಬ್ಬರೂ ಒಂದೇ ಗ್ರಾಮದವರಾಗಿದ್ದು, 2 ವರ್ಷಗಳಿಂದ ಪ್ರೀತಿಸುತ್ತಿದ್ದರು.</p>.<p>ಹಲ್ಲೆಗೊಳಗಾದ ಸತ್ಯ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ. ಅ.30ರಂದು ದೇವಸ್ಥಾನಕ್ಕೆ ಹೋಗಿಬರುವುದಾಗಿ ಮನೆಯಲ್ಲಿ ತಿಳಿಸಿದ್ದ ಧನಲಕ್ಷ್ಮಿ ಸತ್ಯನ ಜೊತೆ ತೆರಳಿದ್ದಳು. ನ.10ರಂದು ಗ್ರಾಮಕ್ಕೆ ಹಿಂದಿರುಗಿ ಮತ್ತೆ ಸತ್ಯನ ಮನೆಯಲ್ಲೇ ವಾಸವಾಗಿದ್ದಳು.</p>.<p>ಡಿ.7ರಂದು ಮದುವೆ ಮಾಡಿಸುವುದಾಗಿ ಗ್ರಾಮಸ್ಥರು ತೀರ್ಮಾನಿಸಿದ್ದರು. ಶುಕ್ರವಾರ ಸಿದ್ಧತೆಯೂ ಆರಂಭವಾಗಿತ್ತು. ಸಂಜೆ 6 ಗಂಟೆ ವೇಳೆಗೆ<br />ಮೆಡಿಕಲ್ ಸ್ಟೋರ್ ಬಳಿ ಬಂದಾಗ ಯುವತಿಯ ತಂದೆ ಶಿವಸ್ವಾಮಿ ಮತ್ತು ಸಹೋದರ ಮಹೇಂದ್ರ ‘ಈಗ ನಿಶ್ಚಯ ಮಾಡಿರುವ ಹುಡುಗ ಪೋಲಿಯಾಗಿದ್ದು,<br />ಆತನ ಜೊತೆ ವಿವಾಹವಾಗುವುದು ಬೇಡ. ನಾವು ನಿನಗೆ ಬೇರೆ ವರನನ್ನು ನೋಡಿ ವಿವಾಹ ಮಾಡುತ್ತೇವೆ’ ಎಂದು<br />ಧನಲಕ್ಷ್ಮಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ.</p>.<p>ಈ ವೇಳೆ ಕುಪಿತಗೊಂಡ ಶಿವಸ್ವಾಮಿ ಮತ್ತು ಮಹೇಂದ್ರ ಮಚ್ಚಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಬಲವಾದ ಪೆಟ್ಟುಬಿದ್ದಿದೆ. ಸ್ಥಳದಲ್ಲಿದ್ದ ಸತ್ಯನನ್ನೂ ತಳ್ಳಾಡಿದ್ದು ಆತನಿಗೂ ಗಾಯಗಳಾಗಿವೆ.</p>.<p>ಇಬ್ಬರೂ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಹನೂರು ಪೊಲೀಸರಿಗೆ ಹೇಳಿಕೆ ನೀಡಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು: </strong>ಪ್ರೀತಿಸಿ ವಿವಾಹವಾಗಲು ಸಿದ್ಧತೆ ನಡೆಸಿಕೊಂಡಿದ್ದ ಪ್ರೇಮಿಗಳಿಬ್ಬರ ಮೇಲೆ ಯುವತಿಯ ತಂದೆ ಮತ್ತು ಸಹೋದರ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.</p>.<p>ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಧನಲಕ್ಷ್ಮಿ (24) ಮತ್ತು ಸತ್ಯ(28) ಹಲ್ಲೇಗೀಡಾದವರು. ಇಬ್ಬರೂ ಒಂದೇ ಗ್ರಾಮದವರಾಗಿದ್ದು, 2 ವರ್ಷಗಳಿಂದ ಪ್ರೀತಿಸುತ್ತಿದ್ದರು.</p>.<p>ಹಲ್ಲೆಗೊಳಗಾದ ಸತ್ಯ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ. ಅ.30ರಂದು ದೇವಸ್ಥಾನಕ್ಕೆ ಹೋಗಿಬರುವುದಾಗಿ ಮನೆಯಲ್ಲಿ ತಿಳಿಸಿದ್ದ ಧನಲಕ್ಷ್ಮಿ ಸತ್ಯನ ಜೊತೆ ತೆರಳಿದ್ದಳು. ನ.10ರಂದು ಗ್ರಾಮಕ್ಕೆ ಹಿಂದಿರುಗಿ ಮತ್ತೆ ಸತ್ಯನ ಮನೆಯಲ್ಲೇ ವಾಸವಾಗಿದ್ದಳು.</p>.<p>ಡಿ.7ರಂದು ಮದುವೆ ಮಾಡಿಸುವುದಾಗಿ ಗ್ರಾಮಸ್ಥರು ತೀರ್ಮಾನಿಸಿದ್ದರು. ಶುಕ್ರವಾರ ಸಿದ್ಧತೆಯೂ ಆರಂಭವಾಗಿತ್ತು. ಸಂಜೆ 6 ಗಂಟೆ ವೇಳೆಗೆ<br />ಮೆಡಿಕಲ್ ಸ್ಟೋರ್ ಬಳಿ ಬಂದಾಗ ಯುವತಿಯ ತಂದೆ ಶಿವಸ್ವಾಮಿ ಮತ್ತು ಸಹೋದರ ಮಹೇಂದ್ರ ‘ಈಗ ನಿಶ್ಚಯ ಮಾಡಿರುವ ಹುಡುಗ ಪೋಲಿಯಾಗಿದ್ದು,<br />ಆತನ ಜೊತೆ ವಿವಾಹವಾಗುವುದು ಬೇಡ. ನಾವು ನಿನಗೆ ಬೇರೆ ವರನನ್ನು ನೋಡಿ ವಿವಾಹ ಮಾಡುತ್ತೇವೆ’ ಎಂದು<br />ಧನಲಕ್ಷ್ಮಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ.</p>.<p>ಈ ವೇಳೆ ಕುಪಿತಗೊಂಡ ಶಿವಸ್ವಾಮಿ ಮತ್ತು ಮಹೇಂದ್ರ ಮಚ್ಚಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಬಲವಾದ ಪೆಟ್ಟುಬಿದ್ದಿದೆ. ಸ್ಥಳದಲ್ಲಿದ್ದ ಸತ್ಯನನ್ನೂ ತಳ್ಳಾಡಿದ್ದು ಆತನಿಗೂ ಗಾಯಗಳಾಗಿವೆ.</p>.<p>ಇಬ್ಬರೂ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಹನೂರು ಪೊಲೀಸರಿಗೆ ಹೇಳಿಕೆ ನೀಡಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>