ಡಿ.7ರಂದು ಮದುವೆ ಮಾಡಿಸುವುದಾಗಿ ಗ್ರಾಮಸ್ಥರು ತೀರ್ಮಾನಿಸಿದ್ದರು. ಶುಕ್ರವಾರ ಸಿದ್ಧತೆಯೂ ಆರಂಭವಾಗಿತ್ತು. ಸಂಜೆ 6 ಗಂಟೆ ವೇಳೆಗೆ
ಮೆಡಿಕಲ್ ಸ್ಟೋರ್ ಬಳಿ ಬಂದಾಗ ಯುವತಿಯ ತಂದೆ ಶಿವಸ್ವಾಮಿ ಮತ್ತು ಸಹೋದರ ಮಹೇಂದ್ರ ‘ಈಗ ನಿಶ್ಚಯ ಮಾಡಿರುವ ಹುಡುಗ ಪೋಲಿಯಾಗಿದ್ದು,
ಆತನ ಜೊತೆ ವಿವಾಹವಾಗುವುದು ಬೇಡ. ನಾವು ನಿನಗೆ ಬೇರೆ ವರನನ್ನು ನೋಡಿ ವಿವಾಹ ಮಾಡುತ್ತೇವೆ’ ಎಂದು
ಧನಲಕ್ಷ್ಮಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ.