ಜಲ್ಲಿಪಾಳ್ಯ, ಯರಂಬಾಡಿ, ಹೂಗ್ಯಂ, ಕೂಡ್ಲೂರು, ಪೆದ್ದನಪಾಳ್ಯ, ಹಂಚಿಪಾಳ್ಯ ಹಾಗೂ ನೆಲ್ಲೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನಾಲ್ರೋಡ್ ಸೇತುವೆ ಕಾಮಗಾರಿಯನ್ನು 2017ರಲ್ಲಿ ಆರಂಭಿಸಲಾಗಿತ್ತು. ಆದರೆ, ಇರುವ ಸ್ಥಳವಲ್ಲದೇ ಎರಡು ಬದಿಗಳಲ್ಲೂ ಸೇತುವೆಯನ್ನು ವಿಸ್ತರಿಸಲಾಗಿದೆ ಎಂದು ಮಲೆಮಹದೇಶ್ವರ ವನ್ಯಧಾಮದ ಅಂದಿನ ಡಿಸಿಎಫ್ ಡಾ.ಎಂ.ಮಾಲತಿಪ್ರಿಯ ಅವರಿಗೆ ಪರಿಸರ ಪ್ರೇಮಿಗಳು ದೂರು ನೀಡಿದ್ದರು. ಹೀಗಾಗಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.