<p><strong>ಚಾಮರಾಜನಗ</strong>ರ: ಹೊಸ ಸಂವತ್ಸರವನ್ನು ಸ್ವಾಗತಿಸುವ ಯುಗಾದಿ ಹಬ್ಬವನ್ನು ಬುಧವಾರ (ಮಾರ್ಚ್ 22) ಆಚರಿಸಲು ಜಿಲ್ಲೆಯಾದ್ಯಂತ ಹಿಂದೂಗಳು ಸಿದ್ಧತೆ ನಡೆಸಿದ್ದಾರೆ.</p>.<p>ಹಬ್ಬದ ಆಚರಣೆಗಾಗಿ ಮಂಗಳವಾರ ಜನರು ಹೂವು–ಹಣ್ಣು, ಪೂಜಾ ಸಾಮಗ್ರಿಗಳು, ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. </p>.<p>ಮಂಗಳವಾರ ಅಮಾವಾಸ್ಯೆ ದಿನವಾಗಿದ್ದರಿಂದ ಬೆಳಿಗ್ಗೆಯಿಂದ ಸಂಜೆ ವರೆಗೂ ಜನರು ಕಂಡು ಬರಲಿಲ್ಲ. ಹೂವಿನ ಅಂಗಡಿ, ಜವಳಿ ಮಳಿಗೆಗಳಲ್ಲಿ ಗೋಚರಿಸಿದರು. </p>.<p>ಹಬ್ಬದ ಕಾರಣಕ್ಕೆ ಹೂವಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಹೂವುಗಳ ಬೆಲೆ ಏರಿಕೆ ಕಂಡಿದೆ. ತರಕಾರಿ, ಹಣ್ಣುಗಳ ಧಾರಣೆ ಮೇಲೆ ಹಬ್ಬದ ಸಂಭ್ರಮ ಪ್ರಭಾವ ಬೀರಿಲ್ಲ. </p>.<p>ನಗರದ ಚೆನ್ನೀಪುರ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವು ಖರೀದಿದಾರರ ಸಂಖ್ಯೆ ಹೆಚ್ಚಿತ್ತು. ಚೆಂಡು ಹೂವು ಬಿಟ್ಟು ಉಳಿದ ಎಲ್ಲ ಹೂವುಗಳ ಬೆಲೆ ಹೆಚ್ಚಾಗಿತ್ತು. </p>.<p>ಕನಕಾಂಬರಕ್ಕೆ ಕೆ.ಜಿ ಗೆ ₹ 800, ಮಲ್ಲಿಗೆಗೆ ₹ 500, ಕಾಕಡಕ್ಕೆ ₹ 600, ಸೇವಂತಿಗೆಗೆ ₹ 240–₹ 280, ಸುಗಂಧರಾಜ ಹೂವಿಗೆ ₹ 160ರಿಂದ ₹ 200, ಬಟನ್ ಗುಲಾಬಿ ಕೆ.ಜಿ ಗೆ ₹ 200 ಇತ್ತು. ಚೆಂಡು ಹೂವಿಗೆ ಬೇಡಿಕೆ ಕಡಿಮೆ ಇದ್ದುದರಿಂದ ₹ 20ರಿಂದ ₹ 30ಕ್ಕೆ ಮಾರಾಟವಾಗುತ್ತಿತ್ತು. </p>.<p>‘ಸೋಮವಾರದವರೆಗೆ ಬೆಲೆ ಕಡಿಮೆ ಇತ್ತು. ಮಂಗಳವಾರ ಬೇಡಿಕೆ ಹೆಚ್ಚಾಗಿರುವುದರಿಂದ ಧಾರಣೆಯಲ್ಲೂ ಏರಿಕೆ ಕಂಡಿದೆ. ಬುಧವಾರವೂ ಇದೇ ಬೆಲೆ ಇರಲಿದೆ’ ಎಂದು ಹೂವಿನ ವ್ಯಾಪಾರಿ ರವಿ ಹೇಳಿದರು. </p>.<p class="Subhead">ಇಳಿದ ಬೀನ್ಸ್ ಬೆಲೆ: ತರಕಾರಿ ಮಾರುಕಟ್ಟೆಯಲ್ಲಿ ಕಳೆದ ವಾರ ಬೀನ್ಸ್ ಬೆಲೆ ಕೆ.ಜಿ ಗೆ ₹ 80 (ಹಾಪ್ಕಾಮ್ಸ್) ಇತ್ತು. ಈ ವಾರ ಬೆಲೆ ಇಳಿದಿದ್ದು, ₹ 60ಕ್ಕೆ ತಲುಪಿದೆ. ಟೊಮೆಟೊ ಬೆಲೆಯೂ ಇಳಿಕೆ ಕಂಡು ₹ 10 ಆಗಿದೆ. ಕ್ಯಾರೆಟ್ ಬೆಲೆ ಕೆ.ಜಿ ಗೆ ₹ 10 ಇಳಿದಿದೆ. ಸದ್ಯ ₹ 20 ಇದೆ. </p>.<p>ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಪೂಜಾ ಕಾರ್ಯಕ್ಕಾಗಿ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳುತ್ತಾರೆ ಹಣ್ಣಿನ ವ್ಯಾಪಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗ</strong>ರ: ಹೊಸ ಸಂವತ್ಸರವನ್ನು ಸ್ವಾಗತಿಸುವ ಯುಗಾದಿ ಹಬ್ಬವನ್ನು ಬುಧವಾರ (ಮಾರ್ಚ್ 22) ಆಚರಿಸಲು ಜಿಲ್ಲೆಯಾದ್ಯಂತ ಹಿಂದೂಗಳು ಸಿದ್ಧತೆ ನಡೆಸಿದ್ದಾರೆ.</p>.<p>ಹಬ್ಬದ ಆಚರಣೆಗಾಗಿ ಮಂಗಳವಾರ ಜನರು ಹೂವು–ಹಣ್ಣು, ಪೂಜಾ ಸಾಮಗ್ರಿಗಳು, ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. </p>.<p>ಮಂಗಳವಾರ ಅಮಾವಾಸ್ಯೆ ದಿನವಾಗಿದ್ದರಿಂದ ಬೆಳಿಗ್ಗೆಯಿಂದ ಸಂಜೆ ವರೆಗೂ ಜನರು ಕಂಡು ಬರಲಿಲ್ಲ. ಹೂವಿನ ಅಂಗಡಿ, ಜವಳಿ ಮಳಿಗೆಗಳಲ್ಲಿ ಗೋಚರಿಸಿದರು. </p>.<p>ಹಬ್ಬದ ಕಾರಣಕ್ಕೆ ಹೂವಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಹೂವುಗಳ ಬೆಲೆ ಏರಿಕೆ ಕಂಡಿದೆ. ತರಕಾರಿ, ಹಣ್ಣುಗಳ ಧಾರಣೆ ಮೇಲೆ ಹಬ್ಬದ ಸಂಭ್ರಮ ಪ್ರಭಾವ ಬೀರಿಲ್ಲ. </p>.<p>ನಗರದ ಚೆನ್ನೀಪುರ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವು ಖರೀದಿದಾರರ ಸಂಖ್ಯೆ ಹೆಚ್ಚಿತ್ತು. ಚೆಂಡು ಹೂವು ಬಿಟ್ಟು ಉಳಿದ ಎಲ್ಲ ಹೂವುಗಳ ಬೆಲೆ ಹೆಚ್ಚಾಗಿತ್ತು. </p>.<p>ಕನಕಾಂಬರಕ್ಕೆ ಕೆ.ಜಿ ಗೆ ₹ 800, ಮಲ್ಲಿಗೆಗೆ ₹ 500, ಕಾಕಡಕ್ಕೆ ₹ 600, ಸೇವಂತಿಗೆಗೆ ₹ 240–₹ 280, ಸುಗಂಧರಾಜ ಹೂವಿಗೆ ₹ 160ರಿಂದ ₹ 200, ಬಟನ್ ಗುಲಾಬಿ ಕೆ.ಜಿ ಗೆ ₹ 200 ಇತ್ತು. ಚೆಂಡು ಹೂವಿಗೆ ಬೇಡಿಕೆ ಕಡಿಮೆ ಇದ್ದುದರಿಂದ ₹ 20ರಿಂದ ₹ 30ಕ್ಕೆ ಮಾರಾಟವಾಗುತ್ತಿತ್ತು. </p>.<p>‘ಸೋಮವಾರದವರೆಗೆ ಬೆಲೆ ಕಡಿಮೆ ಇತ್ತು. ಮಂಗಳವಾರ ಬೇಡಿಕೆ ಹೆಚ್ಚಾಗಿರುವುದರಿಂದ ಧಾರಣೆಯಲ್ಲೂ ಏರಿಕೆ ಕಂಡಿದೆ. ಬುಧವಾರವೂ ಇದೇ ಬೆಲೆ ಇರಲಿದೆ’ ಎಂದು ಹೂವಿನ ವ್ಯಾಪಾರಿ ರವಿ ಹೇಳಿದರು. </p>.<p class="Subhead">ಇಳಿದ ಬೀನ್ಸ್ ಬೆಲೆ: ತರಕಾರಿ ಮಾರುಕಟ್ಟೆಯಲ್ಲಿ ಕಳೆದ ವಾರ ಬೀನ್ಸ್ ಬೆಲೆ ಕೆ.ಜಿ ಗೆ ₹ 80 (ಹಾಪ್ಕಾಮ್ಸ್) ಇತ್ತು. ಈ ವಾರ ಬೆಲೆ ಇಳಿದಿದ್ದು, ₹ 60ಕ್ಕೆ ತಲುಪಿದೆ. ಟೊಮೆಟೊ ಬೆಲೆಯೂ ಇಳಿಕೆ ಕಂಡು ₹ 10 ಆಗಿದೆ. ಕ್ಯಾರೆಟ್ ಬೆಲೆ ಕೆ.ಜಿ ಗೆ ₹ 10 ಇಳಿದಿದೆ. ಸದ್ಯ ₹ 20 ಇದೆ. </p>.<p>ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಪೂಜಾ ಕಾರ್ಯಕ್ಕಾಗಿ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳುತ್ತಾರೆ ಹಣ್ಣಿನ ವ್ಯಾಪಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>