ಚೆಕ್ಪೋಸ್ಟ್ನಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿ ಲಾರಿಯ ಚಾಲಕ ಮತ್ತು ಕ್ಲೀನರ್ ಬಳಿ ಹಣ ಕೇಳಿದ್ದಾರೆ. ಈ ವೇಳೆ ಲಾರಿಯ ಚಾಲಕ, ‘ಈಗಾಗಲೇ ₹30 ನೀಡಿದ್ದೇವಲ್ಲ’ ಎಂದು ಹೇಳುತ್ತಾರೆ. ಇದರಿಂದ ಕೋಪಗೊಳ್ಳುವ ಮೋಹನ್, ಲಾರಿಯ ಕ್ಲೀನರ್ ಅವರನ್ನು ‘ನಿನ್ನ ಹೆಸರು ಏನು’ ಎಂದು ಕೇಳುತ್ತಾರೆ. ಹೆಸರು ಹೇಳಿದಾಗ ‘ನೀವು ಬಗ್ಗುವುದಿಲ್ಲವೇ? ಮುತ್ತಯ್ಯ ಅವರು ಇದ್ದರೆ ಬಗ್ಗುತ್ತೀರಾ’ ಎಂದು ಮರು ಪ್ರಶ್ನಿಸಿದ್ದಾರೆ. ‘ಏನು ಮಾಡಿಕೊಳ್ಳಲು ಆಗುವುದಿಲ್ಲ ಅಂತ ನೀವು ಹೇಳಿ. ನಾಳೆ ನಾನು ಮಾಡದಿದ್ದರೆ, ನಾನು ಅಪ್ಪನಿಗೆ ಹುಟ್ಟಿದವನೇ ಅಲ್ಲ. ಎತ್ತಿಕೊಂಡು ಬನ್ನಿ ಬಂದೂಕನ್ನು ಸುಟ್ಟು ಹಾಕಿಬಿಡುತ್ತೇನೆ’ ಎಂದು ಹೇಳುವ ದೃಶ್ಯ ವಿಡಿಯೊದಲ್ಲಿದೆ.