<p><strong>ಸಂತೇಮರಹಳ್ಳಿ: </strong>ಜಮೀನಿನಲ್ಲೊಂದು ಪುಟ್ಟ ಗುಡಿಸಲು. ಅಲ್ಲಿಂದ ಶಾಲಾ ಕಾಲೇಜಿಗೆ ತೆರಳಲು ಒಂದೂವರೆ ಕಿಲೊ ಮೀಟರ್ ನಡಿಗೆ. ಈ ಪುಟ್ಟ ಗುಡಿಸಲಿನಲ್ಲಿ ಅರಳಿದ ಶೈಕ್ಷಣಿಕ ಪ್ರತಿಭೆ ಎಂ.ಕೆ.ಸುಷ್ಮಾ.</p>.<p>ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕಳೆದ 2020-21 ಸಾಲಿನ ಘಟಿಕೋತ್ಸವದಲ್ಲಿ 15 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿನಿ ಸುಷ್ಮಾ.</p>.<p>ಸಂತೇಮರಹಳ್ಳಿಯ ಕುಮಾರ್ ಮತ್ತು ಚಂದ್ರಮತಿ ದಂಪತಿಯ ಮಗಳಾಗಿರುವ ಸುಷ್ಮಾ, ಬಡತನದ ಬಗ್ಗೆ ಯೋಚಿಸದೆ, ಅಪ್ಪ ಅಮ್ಮನ ಸಹಕಾರದಿಂದ ಕಷ್ಟ ಪಟ್ಟು ಓದಿ ಸಾಧನೆ ಮಾಡಿರುವ ಹೆಣ್ಣು ಮಗಳು.</p>.<p>ಬಾಲ್ಯದಿಂದಲೇ ಓದಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದ ಸುಷ್ಮಾಗೆ ಬಡತನವೇ ಶಾಪವಾಗಿತ್ತು.ಜಮೀನಿನ ಮನೆಯಿಂದ ಒಂದೂವರೆ ಕಿಲೋ ಮೀಟರ್ ನಡೆದು ಶಾಲಾ ಕಾಲೇಜಿಗೆ ಹೋಗಬೇಕಿತ್ತು. ಮಗಳ ಆಸಕ್ತಿಗೆ ತಂದೆ ತಾಯಿ ಕಷ್ಟದ ನಡುವೆಯೇ ನೀರೆರೆದರು.</p>.<p>ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸಂತೇಮರಹಳ್ಳಿಯ ಜೆಎಸ್ಎಸ್ ಶಾಲೆಯಲ್ಲಿ ಪಡೆದು, ಕಾಲೇಜು ವಿದ್ಯಾಬ್ಯಾಸಕ್ಕೆ ಚಾಮರಾಜನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ದಾಖಲಾಗಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಪಿನಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದರು. ತಂದೆ-ತಾಯಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಇವರಿಗೆ ತೋಟಗಾರಿಕೆಯಲ್ಲಿ ಆಸಕ್ತಿ ಬೆಳೆದು ಮೈಸೂರಿನ ತೋಟಗಾರಿಕೆ ವಿದ್ಯಾಲಯದಲ್ಲಿ ಬಿಎಸ್ಸಿಗೆ ಸೇರಿದ್ದರು.</p>.<p>ತಂದೆ ಕುಮಾರ್ ಅವರು ಮಗಳ ಶಿಕ್ಷಣಕ್ಕಾಗಿ ಸಾಲ ಮಾಡಿದ್ದರು. ಇದರ ಅರಿವು ಇದ್ದ ಸುಷ್ಮಾ ಪದವಿಯಲ್ಲಿ ಉತ್ತಮವಾಗಿ ಓದಿ 15 ಚಿನ್ನದ ಪದಕಗಳನ್ನು ಗಳಿಸಿ ರಾಜ್ಯಕ್ಕೆ ಮೊದಲಿಗರಾದರು.</p>.<p>ಬಿಎಸ್ಸಿ ಪದವಿ ಮುಗಿಸಿದ ನಂತರ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಬೀಜ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದು ಇದೀಗ ಇದೇ ವಿಷಯದಲ್ಲಿ ಪಿಎಚ್ಡಿ ಮಾಡಲು ಮುಂದಾಗಿದ್ದಾರೆ.</p>.<p class="Briefhead">ತೋಟಗಾರಿಕೆಯೇ ಸಾಧನೆ ಕ್ಷೇತ್ರ</p>.<p>’ಅಪ್ಪ ನನ್ನ ಓದಿಗಾಗಿ ಸಾಲ ಮಾಡುತ್ತಿದ್ದರು. ಅವರು ಮತ್ತೆ ಸಾಲ ಮಾಡಬಾರದು ಎಂಬುದು ನನ್ನ ಆಶಯವಾಗಿತ್ತು. ಈಗ ನನಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ₹15 ವಿದ್ಯಾರ್ಥಿವೇತನ ಬರುತ್ತಿದೆ. ಹೀಗಾಗಿ ತಂದೆಯ ಮೇಲಿನ ಸಾಲದ ಒತ್ತಡವನ್ನು ಕಡಿಮೆ ಮಾಡಿದ್ದೇನೆ. ತೋಟಗಾರಿಕೆ ವಿಷಯದಲ್ಲಿ ಪಿಎಚ್ಡಿ ಮುಗಿಸಿ ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು ಎಂದುಕೊಂಡಿದ್ದೇನೆ‘ ಎಂದು ಸುಷ್ಮಾ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಮರಹಳ್ಳಿ: </strong>ಜಮೀನಿನಲ್ಲೊಂದು ಪುಟ್ಟ ಗುಡಿಸಲು. ಅಲ್ಲಿಂದ ಶಾಲಾ ಕಾಲೇಜಿಗೆ ತೆರಳಲು ಒಂದೂವರೆ ಕಿಲೊ ಮೀಟರ್ ನಡಿಗೆ. ಈ ಪುಟ್ಟ ಗುಡಿಸಲಿನಲ್ಲಿ ಅರಳಿದ ಶೈಕ್ಷಣಿಕ ಪ್ರತಿಭೆ ಎಂ.ಕೆ.ಸುಷ್ಮಾ.</p>.<p>ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕಳೆದ 2020-21 ಸಾಲಿನ ಘಟಿಕೋತ್ಸವದಲ್ಲಿ 15 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿನಿ ಸುಷ್ಮಾ.</p>.<p>ಸಂತೇಮರಹಳ್ಳಿಯ ಕುಮಾರ್ ಮತ್ತು ಚಂದ್ರಮತಿ ದಂಪತಿಯ ಮಗಳಾಗಿರುವ ಸುಷ್ಮಾ, ಬಡತನದ ಬಗ್ಗೆ ಯೋಚಿಸದೆ, ಅಪ್ಪ ಅಮ್ಮನ ಸಹಕಾರದಿಂದ ಕಷ್ಟ ಪಟ್ಟು ಓದಿ ಸಾಧನೆ ಮಾಡಿರುವ ಹೆಣ್ಣು ಮಗಳು.</p>.<p>ಬಾಲ್ಯದಿಂದಲೇ ಓದಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದ ಸುಷ್ಮಾಗೆ ಬಡತನವೇ ಶಾಪವಾಗಿತ್ತು.ಜಮೀನಿನ ಮನೆಯಿಂದ ಒಂದೂವರೆ ಕಿಲೋ ಮೀಟರ್ ನಡೆದು ಶಾಲಾ ಕಾಲೇಜಿಗೆ ಹೋಗಬೇಕಿತ್ತು. ಮಗಳ ಆಸಕ್ತಿಗೆ ತಂದೆ ತಾಯಿ ಕಷ್ಟದ ನಡುವೆಯೇ ನೀರೆರೆದರು.</p>.<p>ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸಂತೇಮರಹಳ್ಳಿಯ ಜೆಎಸ್ಎಸ್ ಶಾಲೆಯಲ್ಲಿ ಪಡೆದು, ಕಾಲೇಜು ವಿದ್ಯಾಬ್ಯಾಸಕ್ಕೆ ಚಾಮರಾಜನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ದಾಖಲಾಗಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಪಿನಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದರು. ತಂದೆ-ತಾಯಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಇವರಿಗೆ ತೋಟಗಾರಿಕೆಯಲ್ಲಿ ಆಸಕ್ತಿ ಬೆಳೆದು ಮೈಸೂರಿನ ತೋಟಗಾರಿಕೆ ವಿದ್ಯಾಲಯದಲ್ಲಿ ಬಿಎಸ್ಸಿಗೆ ಸೇರಿದ್ದರು.</p>.<p>ತಂದೆ ಕುಮಾರ್ ಅವರು ಮಗಳ ಶಿಕ್ಷಣಕ್ಕಾಗಿ ಸಾಲ ಮಾಡಿದ್ದರು. ಇದರ ಅರಿವು ಇದ್ದ ಸುಷ್ಮಾ ಪದವಿಯಲ್ಲಿ ಉತ್ತಮವಾಗಿ ಓದಿ 15 ಚಿನ್ನದ ಪದಕಗಳನ್ನು ಗಳಿಸಿ ರಾಜ್ಯಕ್ಕೆ ಮೊದಲಿಗರಾದರು.</p>.<p>ಬಿಎಸ್ಸಿ ಪದವಿ ಮುಗಿಸಿದ ನಂತರ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಬೀಜ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದು ಇದೀಗ ಇದೇ ವಿಷಯದಲ್ಲಿ ಪಿಎಚ್ಡಿ ಮಾಡಲು ಮುಂದಾಗಿದ್ದಾರೆ.</p>.<p class="Briefhead">ತೋಟಗಾರಿಕೆಯೇ ಸಾಧನೆ ಕ್ಷೇತ್ರ</p>.<p>’ಅಪ್ಪ ನನ್ನ ಓದಿಗಾಗಿ ಸಾಲ ಮಾಡುತ್ತಿದ್ದರು. ಅವರು ಮತ್ತೆ ಸಾಲ ಮಾಡಬಾರದು ಎಂಬುದು ನನ್ನ ಆಶಯವಾಗಿತ್ತು. ಈಗ ನನಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ₹15 ವಿದ್ಯಾರ್ಥಿವೇತನ ಬರುತ್ತಿದೆ. ಹೀಗಾಗಿ ತಂದೆಯ ಮೇಲಿನ ಸಾಲದ ಒತ್ತಡವನ್ನು ಕಡಿಮೆ ಮಾಡಿದ್ದೇನೆ. ತೋಟಗಾರಿಕೆ ವಿಷಯದಲ್ಲಿ ಪಿಎಚ್ಡಿ ಮುಗಿಸಿ ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು ಎಂದುಕೊಂಡಿದ್ದೇನೆ‘ ಎಂದು ಸುಷ್ಮಾ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>