ಆಕ್ಷೇಪದ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿರುವ ನಿರಂಜನಕುಮಾರ್, ‘ನಂಜನಗೂಡುವರೆಗೆ ವಿಭಜಕ ಇದೆ. ಅದನ್ನು ಅರಣ್ಯ ಪ್ರದೇಶದ ಗೇಟ್ವರೆಗೆ ವಿಸ್ತರಿಸಿ ಎಂದು ಮನವಿ ಮಾಡಿದ್ದೇನೆಯೇ ವಿನಾ, ಅರಣ್ಯ ಪ್ರದೇಶದಲ್ಲಿ ಮಾಡಿ ಎಂದು ಕೇಳಿಲ್ಲ. ಹಿಂದೆ ನಾನೇ ಅದನ್ನು ವಿರೋಧ ಮಾಡಿ, ಈಗ ಹೇಗೆ ಹೇಳಿಕೆ ಬದಲಾವಣೆ ಮಾಡಲಿ? ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತ ಆಗುತ್ತಿರುವುದರಿಂದ ರಸ್ತೆಯನ್ನು ಇನ್ನಷ್ಟು ಅಗಲ ಮಾಡಿ ಬಂಡೀಪುರದ ಅರಣ್ಯ ಗೇಟ್ವರೆಗೆ ವಿಸ್ತರಿಸಿ ಎಂದು ಮನವಿ ಮಾಡಿದ್ದೇನೆ’ ಎಂದರು.