ಸಾಮಾನ್ಯವಾಗಿ ಈ ರೋಗವು ಬಿತ್ತನೆಯಾದ 35ರಿಂದ 40 ದಿನದ ಅನುಪಾಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಈಗ ತಾನೇ ರೈತರು ಲಾಕ್ಡೌನ್ನಿಂದಾಗಿ ಬಿತ್ತನೆ ಈರುಳ್ಳಿಗೆ ಕ್ವಿಂಟಲ್ಗೆ ₹6,500ರಿಂದ 7,000 ಖರೀದಿಸಿ ಕೃಷಿ ಚಟುವಟಿಕೆ ಮಾಡಿದ್ದಾರೆ. ಒಂದು ಎಕರೆಗೆ ನಾಲ್ಕರಿಂದ ಐದು ಕ್ವಿಂಟಲ್ ಬಿತ್ತನೆ ಈರುಳ್ಳಿ ಬೇಕಾಗುತ್ತದೆ. ಬಿತ್ತನೆ ಮಾಡುವಾಗ ಕೂಲಿ, ಗೊಬ್ಬರ, ಔಷಧ ಸೇರಿದಂತೆ ಒಂದು ಎಕರೆಗೆ ಸುಮಾರು ₹70 ಸಾವಿರ ಖರ್ಚು ಮಾಡಿದ್ದಾರೆ’ ಎಂದು ರೈತ ಮಹದೇವಪ್ಪ ತಿಳಿಸಿದರು.