<p><strong>ಚಾಮರಾಜನಗರ:</strong> ತಾಲ್ಲೂಕಿನ ಕಿಲಗೆರೆ ಗ್ರಾಮದ ಒಂಬತ್ತು ಯುವಕರು ಸಂಚರಿಸುತ್ತಿದ್ದ ವಾಹನದಲ್ಲಿ ಅಳವಡಿಸಿದ್ದ ಕನ್ನಡ ಧ್ವಜವನ್ನು ತೆರವುಗೊಳಿಸಬೇಕು ಎಂದು ಕೊಯಮತ್ತೂರಿನಲ್ಲಿ ಕೆಲವು ತಮಿಳರು ಒತ್ತಡ ಹಾಕಿದ್ದಾರೆ. ಇದಕ್ಕೊಪ್ಪದ ಕನ್ನಡಿಗರು, ಅವರೊಂದಿಗೆ ಮಾತಿನ ಚಕಮಕಿ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಕಿಲಗೆರೆ ಗ್ರಾಮದ ಯುವಕರ ತಂಡ ಹೊಸ ವರ್ಷಾಚರಣೆ ಪ್ರಯುಕ್ತ ಕೊಯಮತ್ತೂರು ಬಳಿಯ ಸದ್ಗುರು ಅವರ ಈಶಾ ಫೌಂಡೇಷನ್ಗೆ ಭೇಟಿ ನೀಡಲು ಸೋಮವಾರ ಬೆಳಿಗ್ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.</p>.<p>ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಶಿವಕುಮಾರ್, ‘ಅಲ್ಲಿನವರು ಬಾವುಟ ತೆಗೆಯುವಂತೆ ಹೇಳಿದರು. ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದೆವು. ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಬಾವುಟ ತೆಗೆಸಿದ್ದರಂತೆ. ಹಾಗಾಗಿ, ನಾವೂ ತೆಗೆಯಬೇಕು ಎಂಬುದು ವಾದ. ನಾವು ಆ ರೀತಿ ಮಾಡಿಲ್ಲ. ಅವರು ಮಾಡಿದ್ದಕ್ಕೆ ನಮಗೆ ಏಕೆ ಮಾಡುತ್ತೀರಿ ? ಎಂದು ನಾವು ಪಟ್ಟು ಸಡಿಸಲಿಲ್ಲ. ನಂತರ ಅಲ್ಲಿಂದ ಹೋದರು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ತಾಲ್ಲೂಕಿನ ಕಿಲಗೆರೆ ಗ್ರಾಮದ ಒಂಬತ್ತು ಯುವಕರು ಸಂಚರಿಸುತ್ತಿದ್ದ ವಾಹನದಲ್ಲಿ ಅಳವಡಿಸಿದ್ದ ಕನ್ನಡ ಧ್ವಜವನ್ನು ತೆರವುಗೊಳಿಸಬೇಕು ಎಂದು ಕೊಯಮತ್ತೂರಿನಲ್ಲಿ ಕೆಲವು ತಮಿಳರು ಒತ್ತಡ ಹಾಕಿದ್ದಾರೆ. ಇದಕ್ಕೊಪ್ಪದ ಕನ್ನಡಿಗರು, ಅವರೊಂದಿಗೆ ಮಾತಿನ ಚಕಮಕಿ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.</p>.<p>ಕಿಲಗೆರೆ ಗ್ರಾಮದ ಯುವಕರ ತಂಡ ಹೊಸ ವರ್ಷಾಚರಣೆ ಪ್ರಯುಕ್ತ ಕೊಯಮತ್ತೂರು ಬಳಿಯ ಸದ್ಗುರು ಅವರ ಈಶಾ ಫೌಂಡೇಷನ್ಗೆ ಭೇಟಿ ನೀಡಲು ಸೋಮವಾರ ಬೆಳಿಗ್ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.</p>.<p>ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಶಿವಕುಮಾರ್, ‘ಅಲ್ಲಿನವರು ಬಾವುಟ ತೆಗೆಯುವಂತೆ ಹೇಳಿದರು. ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದೆವು. ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಬಾವುಟ ತೆಗೆಸಿದ್ದರಂತೆ. ಹಾಗಾಗಿ, ನಾವೂ ತೆಗೆಯಬೇಕು ಎಂಬುದು ವಾದ. ನಾವು ಆ ರೀತಿ ಮಾಡಿಲ್ಲ. ಅವರು ಮಾಡಿದ್ದಕ್ಕೆ ನಮಗೆ ಏಕೆ ಮಾಡುತ್ತೀರಿ ? ಎಂದು ನಾವು ಪಟ್ಟು ಸಡಿಸಲಿಲ್ಲ. ನಂತರ ಅಲ್ಲಿಂದ ಹೋದರು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>