ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಶಿವಕುಮಾರ್, ‘ಅಲ್ಲಿನವರು ಬಾವುಟ ತೆಗೆಯುವಂತೆ ಹೇಳಿದರು. ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದೆವು. ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಬಾವುಟ ತೆಗೆಸಿದ್ದರಂತೆ. ಹಾಗಾಗಿ, ನಾವೂ ತೆಗೆಯಬೇಕು ಎಂಬುದು ವಾದ. ನಾವು ಆ ರೀತಿ ಮಾಡಿಲ್ಲ. ಅವರು ಮಾಡಿದ್ದಕ್ಕೆ ನಮಗೆ ಏಕೆ ಮಾಡುತ್ತೀರಿ ? ಎಂದು ನಾವು ಪಟ್ಟು ಸಡಿಸಲಿಲ್ಲ. ನಂತರ ಅಲ್ಲಿಂದ ಹೋದರು’ ಎಂದು ತಿಳಿಸಿದರು.