ಯಳಂದೂರು (ಚಾಮರಾಜನಗರ): ತಾಲ್ಲೂಕಿನ ಪ್ರಸಿದ್ಧ ಕೃಷ್ಣಯ್ಯನ ಕಟ್ಟೆ ಜಲಪಾತ ಸೋಮವಾರಮುಂಜಾನೆ ಕೋಡಿಬಿದ್ದು ಹಾಲ್ನೊರೆ ಚೆಲ್ಲಿತು.
ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಭಾನುವಾರ ರಾತ್ರಿಯಿಂದ ಮಳೆಯಾಗುತ್ತಿದ್ದು, ಸೋಮವಾರವೂ ಮಳೆ ಮುಂದುವರೆದಿದೆ. ಕಾಡಂಚಿನ ಜಲಾಶಯಕ್ಕೆ ನೂರಾರು ತೊರೆ, ನೀರಿನ ಬಗ್ಗೆಗಳು ಚಿಮ್ಮಿ ಹರಿಯುತ್ತಿದೆ. ಇದರಿಂದ ಕೃಷ್ಣಯ್ಯನ ಕಟ್ಟೆ ಮುಂಜಾನೆ ತುಂಬಿ ಕೋಡಿ ಬಿದ್ದಿದೆ.