<p><strong>ಕೊಳ್ಳೇಗಾಲ:</strong> ಪ್ರಸನ್ನ ವಿಶಾಲಾಕ್ಷಿ ಸಮೇತ ವಿಶ್ವನಾಥಸ್ವಾಮಿ ಬ್ರಹ್ಮರಥೋತ್ಸವವು ಶನಿವಾರ ವಿಜೃಂಭಣೆಯಿಂದ ಜರುಗಿತು.<br><br> ನಗರದ ಬಂಗಾರ ಶೆಟ್ಟರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಶಿವಯಾಗ ಪೂಜಾರಾಧನೆ, ಬಲಿಪ್ರದಾನ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದರು.<br> ಬಳಿಕ ಉತ್ಸವಮೂರ್ತಿಯನ್ನು ಅಗ್ರಹಾರ ಬೀದಿಯಲ್ಲಿ ಮಂಟಪೋತ್ಸವ ನಡೆಸಿ ನಂತರ ಅಲಂಕಾರಗೊಂಡಿದ್ದ ರಥದ ಸುತ್ತಲ್ಲೂ ಪ್ರದಕ್ಷಿಣೆ ಹಾಕಿ ರಥದ ಮೇಲೆ ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ರಥೋತ್ಸವ ನಡೆಸಿದರು. ಬ್ರಹ್ಮರಥೋತ್ಸವದ ಹಿನ್ನೆಲೆ ದೇವಸ್ಥಾನವನ್ನು ಹಸಿರು ತೋರಣ ಹಾಗೂ ವಿದ್ಯುತ್ ದೀಪಾಲಂಕರದೊಂದಿಗೆ ಅಲಂಕಾರ ಮಾಡಲಾಗಿತ್ತು. <br><br>ಪೂಜಾ ಕೈಂಕರ್ಯವನ್ನು ಪ್ರಧಾನ ಅರ್ಚಕ ಜ್ಯೋತಿಷಿ ಕೃಷ್ಣಕುಮಾರಶರ್ಮ ನಡೆಸಿಕೊಟ್ಟರು. ರಥೋತ್ಸವದಲ್ಲಿ ಬಂಗಾರಶೆಟ್ಟರ ದೇವಸ್ಥಾನ ಟ್ರಸ್ಟಿ ಡಾ.ಸಿ.ಪರಮೇಶ್ವರಯ್ಯ, ಕೆ.ವೇಣುಗೋಪಾಲ, ಎ.ಸಿ.ಚಂದ್ರಶೇಖರ್, ವಕೀಲ ಎಲ್.ಮಹದೇವಯ್ಯ, ಬಿ.ಎಸ್.ಗಣೇಶ್ ಕುಮಾರ್, ಆರ್.ನಾಗಪ್ರಕಾಶ್, ಸತೀಶ್ ಕುಮಾರ್, ಎ.ಪಿ.ಚೆನ್ನವೀರಶೆಟ್ಟಿ ಹಾಗೂ ಭಕ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ:</strong> ಪ್ರಸನ್ನ ವಿಶಾಲಾಕ್ಷಿ ಸಮೇತ ವಿಶ್ವನಾಥಸ್ವಾಮಿ ಬ್ರಹ್ಮರಥೋತ್ಸವವು ಶನಿವಾರ ವಿಜೃಂಭಣೆಯಿಂದ ಜರುಗಿತು.<br><br> ನಗರದ ಬಂಗಾರ ಶೆಟ್ಟರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಶಿವಯಾಗ ಪೂಜಾರಾಧನೆ, ಬಲಿಪ್ರದಾನ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದರು.<br> ಬಳಿಕ ಉತ್ಸವಮೂರ್ತಿಯನ್ನು ಅಗ್ರಹಾರ ಬೀದಿಯಲ್ಲಿ ಮಂಟಪೋತ್ಸವ ನಡೆಸಿ ನಂತರ ಅಲಂಕಾರಗೊಂಡಿದ್ದ ರಥದ ಸುತ್ತಲ್ಲೂ ಪ್ರದಕ್ಷಿಣೆ ಹಾಕಿ ರಥದ ಮೇಲೆ ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ರಥೋತ್ಸವ ನಡೆಸಿದರು. ಬ್ರಹ್ಮರಥೋತ್ಸವದ ಹಿನ್ನೆಲೆ ದೇವಸ್ಥಾನವನ್ನು ಹಸಿರು ತೋರಣ ಹಾಗೂ ವಿದ್ಯುತ್ ದೀಪಾಲಂಕರದೊಂದಿಗೆ ಅಲಂಕಾರ ಮಾಡಲಾಗಿತ್ತು. <br><br>ಪೂಜಾ ಕೈಂಕರ್ಯವನ್ನು ಪ್ರಧಾನ ಅರ್ಚಕ ಜ್ಯೋತಿಷಿ ಕೃಷ್ಣಕುಮಾರಶರ್ಮ ನಡೆಸಿಕೊಟ್ಟರು. ರಥೋತ್ಸವದಲ್ಲಿ ಬಂಗಾರಶೆಟ್ಟರ ದೇವಸ್ಥಾನ ಟ್ರಸ್ಟಿ ಡಾ.ಸಿ.ಪರಮೇಶ್ವರಯ್ಯ, ಕೆ.ವೇಣುಗೋಪಾಲ, ಎ.ಸಿ.ಚಂದ್ರಶೇಖರ್, ವಕೀಲ ಎಲ್.ಮಹದೇವಯ್ಯ, ಬಿ.ಎಸ್.ಗಣೇಶ್ ಕುಮಾರ್, ಆರ್.ನಾಗಪ್ರಕಾಶ್, ಸತೀಶ್ ಕುಮಾರ್, ಎ.ಪಿ.ಚೆನ್ನವೀರಶೆಟ್ಟಿ ಹಾಗೂ ಭಕ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>