ಬಸ್ ಬೆಂಗಳೂರಿನಿಂದ ಊಟಿಗೆ ತೆರಳುತ್ತಿತ್ತು. ಚೆಕ್ಪೋಸ್ಟ್ನ ಗೇಟನ್ನು ಹಾಕಿ ತೆಗೆಯಲು ಅಳವಡಿಸಿರುವ ಕಬ್ಬಿಣದ ಪಟ್ಟಿ ಎರಡು ದಿನಗಳ ಹಿಂದೆ, ಭಾರಿ ತೂಕದ ಲಾರಿ ಸಂಚಾರದಿಂದ ತುಂಡಾಗಿತ್ತು. ಶುಕ್ರವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಐರಾವತ ಬಸ್ ಸಾಗುವಾಗ, ಪಟ್ಟಿ ಬಸ್ ತಳಕ್ಕೆ ತಗುಲಿ ಮುಂದೆ ಚಲಿಸಲು ಆಗದೇ ರಸ್ತೆಯ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಿತು.