ಜೀವಾಮೃತ: ದೇಸಿಹಸುವಿನ ಗಂಜಲ, ಸಗಣಿ, ಎಲೆ ಹಾಗೂ ಇನ್ನಿತರ ಹಸಿರು ತ್ಯಾಜ್ಯ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು ಬಳಸಿಕೊಂಡು ಜೀವಾಮೃತ, ಘನ ಜೀವಾಮೃತ ತಯಾರಿಸುತ್ತಾರೆ. ಇವನ್ನೇ ಬೆಳೆಗಳಿಗೆ ಕೊಡುತ್ತಾರೆ. ಎರಡು ವರ್ಷಗಳಿಂದ ಅವರು ಈ ವಿಧಾನವನ್ನು ಅನುಸರಿಸಿಕೊಂಡು ಕೃಷಿ ಮಾಡುತ್ತಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.