<p><strong>ಹನೂರು:</strong> ವಿಶಿಷ್ಟ ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಪತ್ತನ್ನು ಒಡಲೊಳಗೆ ಇರಿಸಿಕೊಂಡಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಅಪರೂಪದ ಕೆನ್ನಾಯಿಗಳ ಹಿಂಡು ಪ್ರವಾಸಿಗರಿಗೆ ದರ್ಶನ ನೀಡುತ್ತಿದ್ದು ಆಕರ್ಷಿಸುತ್ತಿವೆ.</p>.<p>ಸಫಾರಿಯಲ್ಲಿ ಆನೆ, ಹುಲಿ, ಚಿರತೆ, ಕರಿಡಿ, ಜಿಂಕೆಗಳ ಸಾಮಾನ್ಯವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಇದೀಗ ಕೆನ್ನಾಯಿಗಳು ಸಹ ಹೆಚ್ಚಾಗಿ ನೋಡಲು ಸಿಗುತ್ತಿದ್ದು ಪ್ರವಾಸಿಗರು ಖುಷಿಯಾಗಿದ್ದಾರೆ.</p>.<p>ಎರಡು ಹುಲಿ ಸಂರಕ್ಷಿತ ಪ್ರದೇಶ, ವನ್ಯಧಾಮ ಹಾಗೂ ಮೀಸಲು ಅರಣ್ಯ ಪ್ರದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಮಲೆಮಹದೇಶ್ವರ ವನ್ಯಧಾಮವು ವನ್ಯಪ್ರಾಣಿಗಳ ಪ್ರಮುಖ ಆವಾರಸ್ಥಾನವಾಗಿ ಗುರುತಿಸಿಕೊಂಡಿದೆ. ವನ್ಯಧಾಮದಲ್ಲಿರುವ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ಅರಣ್ಯ ಇಲಾಖೆಯು ಅಜ್ಜೀಪುರ ಹಾಗೂ ಲೊಕ್ಕನಹಳ್ಳಿಯಲ್ಲಿ ಸಫಾರಿ ಕೇಂದ್ರಗಳನ್ನು ತೆರೆದಿದೆ.</p>.<p>ಲೊಕ್ಕನಹಳ್ಳಿ ಸಫಾರಿ ಮಾರ್ಗದಲ್ಲಿ ಹುಲಿ, ಚಿರತೆ, ಆನೆ, ಕರಡಿ, ಜಿಂಕೆ, ಕಡವೆಗಳ ಜೊತೆಗೆ ಕೆನ್ನಾಯಿಗಳು ಹೆಚ್ಚಾಗಿ ಪ್ರವಾಸಿಗರಿಗೆ ಕಾಣಸಿಗುತ್ತಿದ್ದು ಗಮನ ಸೆಳೆಯುತ್ತಿವೆ.</p>.<p>ಆಗಾಗ ಮಳೆ ಬೀಳುತ್ತಿರುವುದರಿಂದ ಕಾಡಿನೊಳಗೆ ಹಸಿರು ಚಿಗುರೊಡೆಯಲು ಆರಂಭವಾಗಿದೆ. ಇತರೆ ವನ್ಯಪ್ರಾಣಿಗಳಂತೆ ಕೆನ್ನಾಯಿಗಳು ಸಹ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿರುವ ಕೆನ್ನಾಯಿಗಳ ಜೀವನ ಶೈಲಿ ನಿಗೂಢವಾದುದು.</p>.<p>ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಇವು ಮನುಷ್ಯರಿಂದ ದೂರವಿರಲು ಇಷ್ಟಪಡುತ್ತವೆ. ಕಾಡಿನೊಳಗೆ ಆಹಾರ ಸಿಗದಿದ್ದರೂ ಇತರೆ ಪ್ರಾಣಿಗಳಂತೆ ಗ್ರಾಮಗಳಿಗೆ ಲಗ್ಗೆ ಇಡುವುದಿಲ್ಲ. ಇಂಥ ವಿಶಿಷ್ಟ ಪ್ರಾಣಿಗಳ ಹಿಂಡು ಮರಿಗಳ ಜತೆ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.</p>.<h2>ಆವಾಸಸ್ಥಾನಕ್ಕಾಗಿ ಹುಡುಕಾಟ:</h2>.<p>ಪಶ್ಚಿಮಕ್ಕೆ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ದಕ್ಷಿಣಕ್ಕೆ ಸತ್ಯಮಂಗಲ ಹುಲಿ ಸಂರಕ್ಷತ ಪ್ರದೇಶಗಳಿದ್ದು ಇಲ್ಲಿಂದಲೂ ಕೆನ್ನಾಯಿಗಳು ಮಲೆಮಹದೇಶ್ವರ ವನ್ಯದಾಮದ ಪಿ.ಜಿ ಪಾಳ್ಯ ವನ್ಯಜೀವಿ ವಲಯಕ್ಕೆ ಬಂದಿರುವ ಸಾಧ್ಯತೆಗಳು ಹೆಚ್ಚಾಗಿವೆ.</p>.<p>2022ರಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ನಲ್ಲಿ ಕಾಣಿಸಿಕೊಂಡಿದ್ದ ಕೆನ್ನಾಯಿಯೊಂದು ಆವಾಸ ಸ್ಥಾನ ಹುಡುಕಿಕೊಂಡು 2023ರಲ್ಲಿ ಮಲೆಮಹದೇಶ್ವರ ವನ್ಯಧಾಮಕ್ಕೆ ಬಂದಿರುವುದು ನೇಚರ್ ಕನರ್ವೇಷನ್ ಫೌಂಡೇಷನ್ ಅಳವಡಿಸಿದ್ದ ಕ್ಯಾಮರದಲ್ಲಿ ಪತ್ತೆಯಾಗಿದೆ.</p>.<p>ಬಿಳಿಗಿರಿರಂಗಬೆಟ್ಟ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಹೊಂದಿಕೊಂಡಿರುವ ಪಿ.ಜಿ.ಪಾಳ್ಯ ಮತ್ತು ಹನೂರು ವಲಯಗಳು ಸೀಳುನಾಯಿಗಳ ಮುಖ್ಯ ಆವಾಸಸ್ಥಾನಗಳಾಗಿವೆ. ಕೆಲವು ಸೀಳುನಾಯಿಗಳ ಗುಂಪು ಬಿಳಿಗಿರಿರಂಗನಬೆಟ್ಟದಿಂದ ಮಲೆ ಮಹದೇಶ್ವರಧಾಮಕ್ಕೆ ವಲಸೆ ಬಂದಿರುವುದನ್ನು ದಾಖಲಿಸಲಾಗಿದೆ ಎನ್ನುತ್ತಾರೆ ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ.</p>.<div><div class="bigfact-title">ಕೆನ್ನಾಯಿಗಳ ಆವಾಸಸ್ಥಾನ ಮಲೆ ಮಹದೇಶ್ವರ ವನ್ಯಧಾಮ</div><div class="bigfact-description"> ಪಿ.ಜಿ.ಪಾಳ್ಯ ವನ್ಯಜೀವಿ ವಲಯ ಕೆನ್ನಾಯಿಗಳ ಆವಾಸ ಸ್ಥಾನಕ್ಕೆ ಯೋಗ್ಯವಾದ ಸ್ಥಳವಾಗಿದೆ. ಹುಲ್ಲುಗಾವಲು ಪ್ರದೇಶ ನೀರಿನ ಸಾಂದ್ರತೆ ಹಾಗೂ ಬಲಿ ಪ್ರಾಣಿಗಳ ಹೆಚ್ಚಳ ಕೆನ್ನಾಯಿಗಳ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಚಾಮರಾಜನಗರ ಸಿಸಿಎಫ್ ಟಿ.ಹೀರಾಲಾಲ್.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು:</strong> ವಿಶಿಷ್ಟ ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಪತ್ತನ್ನು ಒಡಲೊಳಗೆ ಇರಿಸಿಕೊಂಡಿರುವ ಮಲೆಮಹದೇಶ್ವರ ವನ್ಯಧಾಮದಲ್ಲಿ ಅಪರೂಪದ ಕೆನ್ನಾಯಿಗಳ ಹಿಂಡು ಪ್ರವಾಸಿಗರಿಗೆ ದರ್ಶನ ನೀಡುತ್ತಿದ್ದು ಆಕರ್ಷಿಸುತ್ತಿವೆ.</p>.<p>ಸಫಾರಿಯಲ್ಲಿ ಆನೆ, ಹುಲಿ, ಚಿರತೆ, ಕರಿಡಿ, ಜಿಂಕೆಗಳ ಸಾಮಾನ್ಯವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಇದೀಗ ಕೆನ್ನಾಯಿಗಳು ಸಹ ಹೆಚ್ಚಾಗಿ ನೋಡಲು ಸಿಗುತ್ತಿದ್ದು ಪ್ರವಾಸಿಗರು ಖುಷಿಯಾಗಿದ್ದಾರೆ.</p>.<p>ಎರಡು ಹುಲಿ ಸಂರಕ್ಷಿತ ಪ್ರದೇಶ, ವನ್ಯಧಾಮ ಹಾಗೂ ಮೀಸಲು ಅರಣ್ಯ ಪ್ರದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಮಲೆಮಹದೇಶ್ವರ ವನ್ಯಧಾಮವು ವನ್ಯಪ್ರಾಣಿಗಳ ಪ್ರಮುಖ ಆವಾರಸ್ಥಾನವಾಗಿ ಗುರುತಿಸಿಕೊಂಡಿದೆ. ವನ್ಯಧಾಮದಲ್ಲಿರುವ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ಅರಣ್ಯ ಇಲಾಖೆಯು ಅಜ್ಜೀಪುರ ಹಾಗೂ ಲೊಕ್ಕನಹಳ್ಳಿಯಲ್ಲಿ ಸಫಾರಿ ಕೇಂದ್ರಗಳನ್ನು ತೆರೆದಿದೆ.</p>.<p>ಲೊಕ್ಕನಹಳ್ಳಿ ಸಫಾರಿ ಮಾರ್ಗದಲ್ಲಿ ಹುಲಿ, ಚಿರತೆ, ಆನೆ, ಕರಡಿ, ಜಿಂಕೆ, ಕಡವೆಗಳ ಜೊತೆಗೆ ಕೆನ್ನಾಯಿಗಳು ಹೆಚ್ಚಾಗಿ ಪ್ರವಾಸಿಗರಿಗೆ ಕಾಣಸಿಗುತ್ತಿದ್ದು ಗಮನ ಸೆಳೆಯುತ್ತಿವೆ.</p>.<p>ಆಗಾಗ ಮಳೆ ಬೀಳುತ್ತಿರುವುದರಿಂದ ಕಾಡಿನೊಳಗೆ ಹಸಿರು ಚಿಗುರೊಡೆಯಲು ಆರಂಭವಾಗಿದೆ. ಇತರೆ ವನ್ಯಪ್ರಾಣಿಗಳಂತೆ ಕೆನ್ನಾಯಿಗಳು ಸಹ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿರುವ ಕೆನ್ನಾಯಿಗಳ ಜೀವನ ಶೈಲಿ ನಿಗೂಢವಾದುದು.</p>.<p>ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಇವು ಮನುಷ್ಯರಿಂದ ದೂರವಿರಲು ಇಷ್ಟಪಡುತ್ತವೆ. ಕಾಡಿನೊಳಗೆ ಆಹಾರ ಸಿಗದಿದ್ದರೂ ಇತರೆ ಪ್ರಾಣಿಗಳಂತೆ ಗ್ರಾಮಗಳಿಗೆ ಲಗ್ಗೆ ಇಡುವುದಿಲ್ಲ. ಇಂಥ ವಿಶಿಷ್ಟ ಪ್ರಾಣಿಗಳ ಹಿಂಡು ಮರಿಗಳ ಜತೆ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.</p>.<h2>ಆವಾಸಸ್ಥಾನಕ್ಕಾಗಿ ಹುಡುಕಾಟ:</h2>.<p>ಪಶ್ಚಿಮಕ್ಕೆ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ದಕ್ಷಿಣಕ್ಕೆ ಸತ್ಯಮಂಗಲ ಹುಲಿ ಸಂರಕ್ಷತ ಪ್ರದೇಶಗಳಿದ್ದು ಇಲ್ಲಿಂದಲೂ ಕೆನ್ನಾಯಿಗಳು ಮಲೆಮಹದೇಶ್ವರ ವನ್ಯದಾಮದ ಪಿ.ಜಿ ಪಾಳ್ಯ ವನ್ಯಜೀವಿ ವಲಯಕ್ಕೆ ಬಂದಿರುವ ಸಾಧ್ಯತೆಗಳು ಹೆಚ್ಚಾಗಿವೆ.</p>.<p>2022ರಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ನಲ್ಲಿ ಕಾಣಿಸಿಕೊಂಡಿದ್ದ ಕೆನ್ನಾಯಿಯೊಂದು ಆವಾಸ ಸ್ಥಾನ ಹುಡುಕಿಕೊಂಡು 2023ರಲ್ಲಿ ಮಲೆಮಹದೇಶ್ವರ ವನ್ಯಧಾಮಕ್ಕೆ ಬಂದಿರುವುದು ನೇಚರ್ ಕನರ್ವೇಷನ್ ಫೌಂಡೇಷನ್ ಅಳವಡಿಸಿದ್ದ ಕ್ಯಾಮರದಲ್ಲಿ ಪತ್ತೆಯಾಗಿದೆ.</p>.<p>ಬಿಳಿಗಿರಿರಂಗಬೆಟ್ಟ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಹೊಂದಿಕೊಂಡಿರುವ ಪಿ.ಜಿ.ಪಾಳ್ಯ ಮತ್ತು ಹನೂರು ವಲಯಗಳು ಸೀಳುನಾಯಿಗಳ ಮುಖ್ಯ ಆವಾಸಸ್ಥಾನಗಳಾಗಿವೆ. ಕೆಲವು ಸೀಳುನಾಯಿಗಳ ಗುಂಪು ಬಿಳಿಗಿರಿರಂಗನಬೆಟ್ಟದಿಂದ ಮಲೆ ಮಹದೇಶ್ವರಧಾಮಕ್ಕೆ ವಲಸೆ ಬಂದಿರುವುದನ್ನು ದಾಖಲಿಸಲಾಗಿದೆ ಎನ್ನುತ್ತಾರೆ ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ.</p>.<div><div class="bigfact-title">ಕೆನ್ನಾಯಿಗಳ ಆವಾಸಸ್ಥಾನ ಮಲೆ ಮಹದೇಶ್ವರ ವನ್ಯಧಾಮ</div><div class="bigfact-description"> ಪಿ.ಜಿ.ಪಾಳ್ಯ ವನ್ಯಜೀವಿ ವಲಯ ಕೆನ್ನಾಯಿಗಳ ಆವಾಸ ಸ್ಥಾನಕ್ಕೆ ಯೋಗ್ಯವಾದ ಸ್ಥಳವಾಗಿದೆ. ಹುಲ್ಲುಗಾವಲು ಪ್ರದೇಶ ನೀರಿನ ಸಾಂದ್ರತೆ ಹಾಗೂ ಬಲಿ ಪ್ರಾಣಿಗಳ ಹೆಚ್ಚಳ ಕೆನ್ನಾಯಿಗಳ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಚಾಮರಾಜನಗರ ಸಿಸಿಎಫ್ ಟಿ.ಹೀರಾಲಾಲ್.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>