ಭೀಮನ ಅಮಾವಾಸ್ಯೆ ದಿನವಾದ ಗುರುವಾರ ಈ ಘಟನೆ ನಡೆದಿದೆ.ಮಹದೇಶ್ವರಬೆಟ್ಟದ ರಾಜಗೋಪುರ ಬಳಿ ವಿಶೇಷ ದರ್ಶನದ ₹500 ಟಿಕೆಟ್ ಕೌಂಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಭಕ್ತರಿಗೆ ವಿಶೇಷ ದರ ಟಿಕೆಟ್ ನೀಡಿ ಪ್ರಸಾದ ನೀಡಿದ್ದಾರೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪವೇ ಹಣ ಇದ್ದ ಚೀಲ ಇದ್ದುದರಿಂದ ಹಣ ಸಹಿತ ಬ್ಯಾಗ್ ಅನ್ನು ಭಕ್ತರೊಬ್ಬರಿಗೆ ಸಿಬ್ಬಂದಿ ನೀಡಿದ್ದಾರೆ.