<p><strong>ಗುಂಡ್ಲುಪೇಟೆ: </strong>ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಲಕ್ಷ್ಮಿಕಾಂತ ದೇವಾಲಯ ಆ ಗ್ರಾಮದ ಹೆಗ್ಗುರುತು. ಆದರೆ, ಈಗ ಅದು ಜೀರ್ಣಾವಸ್ಥೆಗೆ ತಲುಪಿದೆ.</p>.<p>ಇದನ್ನು ಒಡೆಯರ ಕಾಲದ ದೇವಾಲಯ ಎಂದು ಕರೆಯಲಾಗುತ್ತದೆ. ಆದರೆ, ಈ ದೇವಸ್ಥಾನವನ್ನು ಯಾರು, ಯಾವಾಗ ಸ್ಥಾಪನೆ ಮಾಡಿದರು ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.</p>.<p>ದುಸ್ಥಿತಿಗೆ ತಲುಪಿರುವ ದೇವಾಲಯ ಈಗ ಬೀಳುವ ಹಂತದಲ್ಲಿದೆ. ಅದರ ಮೂಲ ವಿಗ್ರಹಗಳಾಲಿ, ಶಿಲ್ಪಗಳಾಗಲಿ ಇಲ್ಲ. ಅವುಗಳನ್ನು ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದ ಬಳಿ ಇರುವ ದೇವಾಲಯದಲ್ಲಿ ಇಡಲಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.</p>.<p>ದೇವಾಲಯದ ಮೇಲೆ ಇಟ್ಟಿಗೆ ಗಾರೆಯಿಂದ ನಿರ್ಮಿಸಲಾಗಿರುವ ವಿಮಾನ ಆಕಾರದ ಅವಶೇಷಗಳನ್ನು ಕಾಣಬಹುದಾಗಿದೆ.</p>.<p class="Subhead">ಮಡಕೆ -ಚೂರುಗಳು ಪತ್ತೆ: ಈ ಪರಿಸರದ ಸುತ್ತಮುತ್ತ ಈ ಹಿಂದಿನ ಜೀವನ ಪದ್ಧತಿಗಳನ್ನು ನಿರೂಪಿಸುವಂತಹ ಕುರುಹುಗಳು ಪತ್ತೆಯಾಗಿವೆ.</p>.<p class="Subhead">ಪ್ರಾಚೀನ ಕಾಲದ ಬೂದು, ಮಾಸಲು ಬಣ್ಣದ ಮಡಕೆ ಚೂರುಗಳನ್ನು ಸಂಶೋಧಕರಾದ ಡಾ.ಮಣಿಕಂಠ ಅವರು ಪತ್ತೆ ಹಚ್ಚಿದ್ದಾರೆ.ಗ್ರಾಮದ ಮಾರಿಗುಡಿಯ ಮುಂಭಾಗದಲ್ಲಿ ವೀರಗಲ್ಲು, ಮಾಸ್ತಿಗಲ್ಲುಗಳು ಹಾಗೂ ಅಂದಿನ ಕಾಲದ ಜನರು ಉಪಯೋಗಿಸಿರುವ ಕಲ್ಲು ಚಪ್ಪಡಿಗಳು ಈಗಲೂ ಇವೆ.</p>.<p>ಇವುಗಳನ್ನು ಸಂರಕ್ಷಿಸಿಡಬೇಕು ಮತ್ತು ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರ ಗಮನ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.</p>.<p>ಗ್ರಾಮದಲ್ಲಿರುವ ವೀರಗಲ್ಲಿನಲ್ಲಿ ವಿಶೇಷವಾದ ಚಿತ್ರವೊಂದು ಗಮನ ಸೆಳೆಯುತ್ತದೆ.ಮಹಿಳೆಯೊಬ್ಬರು ಬೇಟೆಯಾಡುತ್ತಿರುವ ಚಿತ್ರ ಇದೆ. ಅದೇ ಕಲ್ಲಿನಲ್ಲಿ ಹಂದಿಯನ್ನು ನಾಯಿ ಓಡಿಸಿಕೊಂಡು ಹೋಗುತ್ತಿರುವ ಚಿತ್ರ ಇದೆ. ಮೇಲ್ಭಾಗದಲ್ಲಿ ಹಂದಿಯನ್ನು ಮತ್ತೊಂದು ಪ್ರಾಣಿ ಬೇಟೆ ಮಾಡುತ್ತಿರುವ ಚಿತ್ರ ಇದೆ.</p>.<p>ಮಹಿಳೆಯೊಬ್ಬರು ಹಂದಿಯನ್ನು ಇತರ ಪ್ರಾಣಿಗಳಿಂದ ರಕ್ಷಿಸಲು ಸಹಾಯಕ್ಕೆ ಬರುತ್ತಿರುವ ಚಿತ್ರ ಇದಾಗಿರಬಹುದು ಎಂಬುದು ಊರ ಹಿರಿಯರ ಅಭಿಪ್ರಾಯ.</p>.<p>‘ಗ್ರಾಮದಲ್ಲಿ ಪುರಾತನ ಮಾದರಿಯ ದೇವಾಲಯ ಇತ್ತು ಎಂಬುದಕ್ಕೆ ಹಲವು ವಸ್ತುಗಳು ದಾಖಲೆ ಸಮೇತ ಸಿಕ್ಕಿವೆ. ಇವುಗಳನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ನಮ್ಮ ಹಿಂದಿನ ಪರಂಪರೆಗಳ ದ್ಯೋತಕವಾಗಿರುವ ಇವುಗಳನ್ನು ರಕ್ಷಿಸುವ ಅಗತ್ಯವಿದೆ’ ಎಂದು ಗ್ರಾಮಸ್ಥ ಕೃಷ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Briefhead">‘ಹಿಂದಿನ ಜೀವನ ಪದ್ಧತಿಯ ದಾಖಲೆಗಳು’</p>.<p>’ದೇವಾಲಯ ಹಾಗೂ ಸುತ್ತಮುತ್ತ ದೊರೆತಿರುವ ಶಿಲ್ಪಗಳು ಹಿಂದಿನ ಇತಿಹಾಸ ಮತ್ತು ಜನರ ಜೀವನ ಪದ್ಧತಿಯನ್ನು ವಿವರಿಸುವ ದಾಖಲೆಗಳಾಗಿವೆ.ಇಂತಹ ದೇವಾಲಯಗಳನ್ನು ಸ್ಥಳೀಯರು, ಜನಪ್ರತಿನಿದಿಗಳು ಮತ್ತು ಸರ್ಕಾರ ಇವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಬೇಕು’ ಎಂದು ಸಂಶೋಧಕ ಡಾ.ಎಸ್.ಮಣಿಕಂಠ ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ: </strong>ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಲಕ್ಷ್ಮಿಕಾಂತ ದೇವಾಲಯ ಆ ಗ್ರಾಮದ ಹೆಗ್ಗುರುತು. ಆದರೆ, ಈಗ ಅದು ಜೀರ್ಣಾವಸ್ಥೆಗೆ ತಲುಪಿದೆ.</p>.<p>ಇದನ್ನು ಒಡೆಯರ ಕಾಲದ ದೇವಾಲಯ ಎಂದು ಕರೆಯಲಾಗುತ್ತದೆ. ಆದರೆ, ಈ ದೇವಸ್ಥಾನವನ್ನು ಯಾರು, ಯಾವಾಗ ಸ್ಥಾಪನೆ ಮಾಡಿದರು ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.</p>.<p>ದುಸ್ಥಿತಿಗೆ ತಲುಪಿರುವ ದೇವಾಲಯ ಈಗ ಬೀಳುವ ಹಂತದಲ್ಲಿದೆ. ಅದರ ಮೂಲ ವಿಗ್ರಹಗಳಾಲಿ, ಶಿಲ್ಪಗಳಾಗಲಿ ಇಲ್ಲ. ಅವುಗಳನ್ನು ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದ ಬಳಿ ಇರುವ ದೇವಾಲಯದಲ್ಲಿ ಇಡಲಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.</p>.<p>ದೇವಾಲಯದ ಮೇಲೆ ಇಟ್ಟಿಗೆ ಗಾರೆಯಿಂದ ನಿರ್ಮಿಸಲಾಗಿರುವ ವಿಮಾನ ಆಕಾರದ ಅವಶೇಷಗಳನ್ನು ಕಾಣಬಹುದಾಗಿದೆ.</p>.<p class="Subhead">ಮಡಕೆ -ಚೂರುಗಳು ಪತ್ತೆ: ಈ ಪರಿಸರದ ಸುತ್ತಮುತ್ತ ಈ ಹಿಂದಿನ ಜೀವನ ಪದ್ಧತಿಗಳನ್ನು ನಿರೂಪಿಸುವಂತಹ ಕುರುಹುಗಳು ಪತ್ತೆಯಾಗಿವೆ.</p>.<p class="Subhead">ಪ್ರಾಚೀನ ಕಾಲದ ಬೂದು, ಮಾಸಲು ಬಣ್ಣದ ಮಡಕೆ ಚೂರುಗಳನ್ನು ಸಂಶೋಧಕರಾದ ಡಾ.ಮಣಿಕಂಠ ಅವರು ಪತ್ತೆ ಹಚ್ಚಿದ್ದಾರೆ.ಗ್ರಾಮದ ಮಾರಿಗುಡಿಯ ಮುಂಭಾಗದಲ್ಲಿ ವೀರಗಲ್ಲು, ಮಾಸ್ತಿಗಲ್ಲುಗಳು ಹಾಗೂ ಅಂದಿನ ಕಾಲದ ಜನರು ಉಪಯೋಗಿಸಿರುವ ಕಲ್ಲು ಚಪ್ಪಡಿಗಳು ಈಗಲೂ ಇವೆ.</p>.<p>ಇವುಗಳನ್ನು ಸಂರಕ್ಷಿಸಿಡಬೇಕು ಮತ್ತು ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರ ಗಮನ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.</p>.<p>ಗ್ರಾಮದಲ್ಲಿರುವ ವೀರಗಲ್ಲಿನಲ್ಲಿ ವಿಶೇಷವಾದ ಚಿತ್ರವೊಂದು ಗಮನ ಸೆಳೆಯುತ್ತದೆ.ಮಹಿಳೆಯೊಬ್ಬರು ಬೇಟೆಯಾಡುತ್ತಿರುವ ಚಿತ್ರ ಇದೆ. ಅದೇ ಕಲ್ಲಿನಲ್ಲಿ ಹಂದಿಯನ್ನು ನಾಯಿ ಓಡಿಸಿಕೊಂಡು ಹೋಗುತ್ತಿರುವ ಚಿತ್ರ ಇದೆ. ಮೇಲ್ಭಾಗದಲ್ಲಿ ಹಂದಿಯನ್ನು ಮತ್ತೊಂದು ಪ್ರಾಣಿ ಬೇಟೆ ಮಾಡುತ್ತಿರುವ ಚಿತ್ರ ಇದೆ.</p>.<p>ಮಹಿಳೆಯೊಬ್ಬರು ಹಂದಿಯನ್ನು ಇತರ ಪ್ರಾಣಿಗಳಿಂದ ರಕ್ಷಿಸಲು ಸಹಾಯಕ್ಕೆ ಬರುತ್ತಿರುವ ಚಿತ್ರ ಇದಾಗಿರಬಹುದು ಎಂಬುದು ಊರ ಹಿರಿಯರ ಅಭಿಪ್ರಾಯ.</p>.<p>‘ಗ್ರಾಮದಲ್ಲಿ ಪುರಾತನ ಮಾದರಿಯ ದೇವಾಲಯ ಇತ್ತು ಎಂಬುದಕ್ಕೆ ಹಲವು ವಸ್ತುಗಳು ದಾಖಲೆ ಸಮೇತ ಸಿಕ್ಕಿವೆ. ಇವುಗಳನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ನಮ್ಮ ಹಿಂದಿನ ಪರಂಪರೆಗಳ ದ್ಯೋತಕವಾಗಿರುವ ಇವುಗಳನ್ನು ರಕ್ಷಿಸುವ ಅಗತ್ಯವಿದೆ’ ಎಂದು ಗ್ರಾಮಸ್ಥ ಕೃಷ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Briefhead">‘ಹಿಂದಿನ ಜೀವನ ಪದ್ಧತಿಯ ದಾಖಲೆಗಳು’</p>.<p>’ದೇವಾಲಯ ಹಾಗೂ ಸುತ್ತಮುತ್ತ ದೊರೆತಿರುವ ಶಿಲ್ಪಗಳು ಹಿಂದಿನ ಇತಿಹಾಸ ಮತ್ತು ಜನರ ಜೀವನ ಪದ್ಧತಿಯನ್ನು ವಿವರಿಸುವ ದಾಖಲೆಗಳಾಗಿವೆ.ಇಂತಹ ದೇವಾಲಯಗಳನ್ನು ಸ್ಥಳೀಯರು, ಜನಪ್ರತಿನಿದಿಗಳು ಮತ್ತು ಸರ್ಕಾರ ಇವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಬೇಕು’ ಎಂದು ಸಂಶೋಧಕ ಡಾ.ಎಸ್.ಮಣಿಕಂಠ ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>