ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ | ವಿಶೇಷ ಮಕ್ಕಳಿಗೆ ಥೆರಪಿ: ಸಚಿವ ಸುರೇಶ್‌ಕುಮಾರ್ ಸೂಚನೆ

‘ಪ್ರಜಾವಾಣಿ’ ವರದಿಗೆ ಸ್ಪಂದಿಸಿದ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ಮಕ್ಕಳ ಮನೆಗೆ ಭೇಟಿ
Last Updated 7 ಮೇ 2020, 6:01 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಮಾನಸಿಕ ಮತ್ತು ದೈಹಿಕ ಅಂಗವೈಕಲ್ಯದಿಂದಾಗಿ ಸಮನ್ವಯ ಶಿಕ್ಷಣ ಯೋಜನೆ ಅಡಿಯಲ್ಲಿ ಮನೆಯಲ್ಲೇ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ತಕ್ಷಣದಿಂದಲೇ ಥೆರಪಿ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.

ಎರಡು ತಿಂಗಳುಗಳಿಂದ ಥೆರಪಿಸ್ಟ್‌ಗಳು ಲಭ್ಯ ಇಲ್ಲದಿರುವುದರಿಂದ ಮನೆಯಲ್ಲೇ ಶಿಕ್ಷಣ ಪಡೆಯುತ್ತಿರುವ ‘ವಿಶೇಷ’ ಮಕ್ಕಳಿಗೆ ಚಿಕಿತ್ಸೆ (ಮಸಾಜ್‌) ಸಿಗದೆ ಮಾಂಸ ಖಂಡಗಳು ಬಿಗಿಯಾಗಿ ಮಕ್ಕಳು ಕಷ್ಟಪಡುತ್ತಿರುವ ಬಗ್ಗೆ ‘ಪ್ರಜಾವಾಣಿ’ಯು ಮೇ 3ರ ಸಂಚಿಕೆಯಲ್ಲಿ ವಿಶೇಷ ವರದಿ (ಮಾಂಸಗಳ ಬಿಗಿತ: ಕಂಗೆಟ್ಟ ಎಳೆಯರು) ಮೂಲಕ ಇಲಾಖೆಯ ಗಮನಸೆಳೆದಿತ್ತು.

ಥೆರಪಿಸ್ಟ್‌ಗಳ ಗುತ್ತಿಗೆ ಅವಧಿ ಮಾರ್ಚ್‌ನಲ್ಲೇ ಮುಗಿದಿದ್ದರಿಂದ, ಅವರು ಚಿಕಿತ್ಸೆ ನೀಡಲು ಬಂದಿಲ್ಲ. ಹೊಸದಾಗಿ ನೇಮಕಮಾಡಬೇಕಿದೆ ಎಂಬ ಮಾಹಿತಿಯನ್ನು ಜಿಲ್ಲಾ ಸಾರ್ವಜನಿಕ ಇಲಾಖೆ ನೀಡಿತ್ತು.

ಈ ವರದಿಯನ್ನು ಗಮನಿಸಿರುವ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಬುಧವಾರ ಕೊಳ್ಳೇಗಾಲಮುಡಿಗುಂಡಬಡಾವಣೆಯ ನಾಯಕರಬೀದಿಯಲ್ಲಿ ಇರುವಗೃಹ ಆಧಾರಿತಶಿಕ್ಷಣಕ್ಕೆಒಳಪಟ್ಟಿದ್ದ ವಿದ್ಯಾರ್ಥಿಅಖಿಲಮತ್ತುಸುಶ್ಮಿತಾ ಎಂಬ ಇಬ್ಬರು ವಿಶೇಷ ಮಕ್ಕಳ ಮನೆಗೆ ಭೇಟಿ ನೀಡಿ ಅವರ ಕುಶಲೋಪರಿ ವಿಚಾರಿಸಿದರು. ಎದುರಿಸುತ್ತಿರುವ ಕಷ್ಟದ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿನಿಅಖಿಲಾ ಮಾತನಾಡಿ, ನಾವೂ ಚೆನ್ನಾಗಿ ಓದಿ ಉನ್ನತ ಹುದ್ದೆಗಳಿಗೆ ಹೋಗಬೇಕು ಎಂದು ಆಸೆ ಇದೆ. ಆದರೆ, ಬಡವರಾಗಿರುವುದರಿಂದ ಓದುವುದು ಕಷ್ಟವಾಗುತ್ತದೆ. ಎರಡು ತಿಂಗಳುಗಳಿಂದ ನಮಗೆ ಥೆರಪಿ ಸಿಗುತ್ತಿಲ್ಲ. ಇದರಿಂದ ಕಷ್ಟವಾಗುತ್ತಿದೆ’ ಎಂದಳು.

ಸುಶ್ಮಿತಾ ಮಾತನಾಡಿ, ‘ನನಗೆಕಿವಿಸರಿಯಾಗಿಕೇಳುವುದಿಲ್ಲ. ಕಿವಿಗೆ ಅಳವಡಿಸುವ ಯಂತ್ರಕೆಟ್ಟುಹೋಗಿದೆ’ ಎಂದಳು.

ಇದಕ್ಕೆಉತ್ತರಿಸಿದಸಚಿವರು, ‘ನೀವುವಿದ್ಯಾಭ್ಯಾಸದಕಡೆಗಮನಹರಿಸಿನಿಮ್ಮ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರನೋಡಿಕೊಳ್ಳುತ್ತದೆ. ಮಸಾಜ್(ಥೆರಪಿ) ಮಾಡಲುಕಳೆದಎರಡುತಿಂಗಳಿಂದಬರುತ್ತಿಲ್ಲ ಎಂಬವಿಷಯನನಗೆತಿಳಿದಿದೆ.ಇನ್ನೂಎರಡುಮೂರು ದಿನದೊಳಗೆಮಸಾಜ್(ಥೆರಪಿ)ಮಾಡುವವರುಬರುತ್ತಾರೆ. ಯೋಚಿಸಬೇಡಿ’ ಎಂದು ಭರವಸೆ ನೀಡಿದರು.

ಸ್ಥಳದಲ್ಲೇ ಇದ್ದ ಡಿಡಿಪಿಐ ಎಸ್‌.ಟಿ.ಜವರೇಗೌಡ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಚಂದ್ರಪಾಟೀಲ್ ಅವರಿಗೆ ಈ ಬಗ್ಗೆ ಪ್ರಶ್ನಿಸಿದಾಗ, ಥೆರಪಿಸ್ಟ್‌ಗಳ ನೇಮಕಾತಿಗೆ ಅನುದಾನ ಇನ್ನು ಬಿಡುಗಡೆಯಾಗಬೇಕಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್‌ ಕುಮಾರ್‌ ಅವರು, ‘ಅನುದಾನ ಬಿಡುಗಡೆ ಮಾಡಲಾಗುವುದು. ತಕ್ಷಣವೇ ಥೆರಪಿಗೆ ವ್ಯವಸ್ಥೆ ಮಾಡಿ’ ಎಂದು ಸೂಚಿಸಿದರು.

ಶಾಸಕಎನ್.ಮಹೇಶ್,ನಗರಸಭೆಸದಸ್ಯೆಪುಷ್ಪಲತಾ,ಜಿಲ್ಲಾಪಂಚಾಯಿತಿಮುಖ್ಯಕಾರ್ಯನಿರ್ವಾಹಕಅಧಿಕಾರಿಹರ್ಷಲ್ಭೋಯರ್ನಾರಾಯಣರಾವ್, ತಹಶೀಲ್ದಾರ್ಕುನಾಲ್, ಡಿವೈಎಸ್‌ಪಿ ನವೀನ್ಕುಮಾರ್,ಸಿಪಿಐಶ್ರೀಕಾಂತ್ ಮತ್ತಿತರರು ಇದ್ದರು.

ಪರೀಕ್ಷೆ ಮಾಡಬೇಕಾ, ಬೇಡವಾ?

ನಂತರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಮಕ್ಕಳಾದಶಶಾಂಕ್,ಮಂಟೇಸ್ವಾಮಿ,ಕೀರ್ತನ,ಮೇಘನ,ದಿವ್ಯಮಕ್ಕಳ ಜೊತೆಸಚಿವರು ಸಂವಾದ ನಡೆಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನುನಡೆಸಬಹುದೇ? ನೀವುಹೇಳಿಪರೀಕ್ಷೆಮಾಡೋಣವೇ ಅಥವಾಬೇಡವಾ ಎಂದು ಕೇಳಿದರು. ಇದಕ್ಕೆಉತ್ತರಿಸಿದಮಕ್ಕಳು, ‘ಪರೀಕ್ಷೆ ನಡೆಸಬೇಕು. ನಾವು ಬರೆಯುವುದಕ್ಕೆ ಸಿದ್ಧರಾಗಿದ್ದೇವೆ’ ಎಂದರು.

‘ಪ್ರತಿನಿತ್ಯಮಧ್ಯಾಹ್ನ 3ರಿಂದ4.30ವರೆಗೆಚಂದನಟಿವಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆಸಂಬಂಧಪಟ್ಟ ಮಾಹಿತಿಬರುತ್ತದೆ. ಕಡ್ಡಾಯವಾಗಿಎಲ್ಲರೂ ವೀಕ್ಷಣೆಮಾಡಿ. ಪರೀಕ್ಷೆಗೆಎಲ್ಲರೂ ಸಿದ್ದರಾಗಿ. ಜೂನ್ತಿಂಗಳಲ್ಲಿಪರೀಕ್ಷೆ ನಡೆಸಲು ಯೋಚಿಸಲಾಗುತ್ತಿದೆ. ಕೋವಿಡ್‌–19 ಬಗ್ಗೆ ಬಗ್ಗೆಮಕ್ಕಳುಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.

ಥೆರಪಿಸ್ಟ್‌ಗಳನ್ನು ಕಳುಹಿಸಲು ಶಿಕ್ಷಣ ಸಚಿವರು ಸೂಚಿಸಿದ್ದಾರೆ. ಥೆರಪಿಸ್ಟ್‌ಗಳೊಂದಿಗೂ ಮಾತನಾಡಿದ್ದೇವೆ. ಗುರುವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಡಿಸಿಪಿಐಎಸ್‌.ಟಿ.ಜವರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT