<p>ಚಾಮರಾಜನಗರ: ಸೋಲಿಗರಿಗೂ ಕಾಡಿನ ಪಾರಂಪರಿಕ ಜ್ಞಾನ ಇದ್ದು ನಾಡಿನ ಕಡೆ ಕಾಡು ಕೂಡ ನಡೆದು ಬರುವಂತಾಗಲಿ ಎಂದು ದೀನಬಂಧು ಸಂಸ್ಥೆಯ ಗೌವರ ಕಾರ್ಯದರ್ಶಿ ಜಿ.ಎಸ್.ಜಯದೇವ ಸೋಮವಾರ ತಿಳಿಸಿದರು.</p>.<p>ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಜಡೇರುದ್ರಸ್ವಾಮಿ ನರ್ಸರಿಯಲ್ಲಿ ಅರಣ್ಯ ವೃಕ್ಷಗಳ ಬೀಜ ಸಂಗ್ರಹಿಸಿ ಅವುಗಳನ್ನು ಬೆಳೆಸುವ ವಿಶಿಷ್ಟ ವಿಧಾನವನ್ನು ಕರಗತ ಮಾಡಿಕೊಂಡಿರುವ ಬಂಗ್ಲೆಪೋಡಿನ ರಾಮೇಗೌಡರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.</p>.<p>‘ರಾಮೇಗೌಡರು ಇದುವರೆವಗೂ ₹2 ಲಕ್ಷ ಸಸಿ ಮಾಡಿದ್ದಾರೆ. ಅವರ ನರ್ಸರಿಯಲ್ಲಿ ಅಪಾಯದ ಅಂಚಿನಲ್ಲಿರುವಂತಹ ಅಪರೂಪದ ಸಸ್ಯ ನಶಿಸಿಹೋಗದಂತೆ ಅವುಗಳ ಬೀಜಗಳಿಂದ ಸಸಿಗಳನ್ನು ಬೆಳೆಸಿ ನಾಡಿನ ವಿವಿಧ ಸಂಸ್ಥೆಗಳಿಗೆ ವಿತರಿಸಿದ್ದಾರೆ’ ಎಂದರು.</p>.<p>‘ರಾಮೇಗೌಡ ಅವರು ಅಪರೂಪದ 350ಕ್ಕೂ ಹೆಚ್ಚು ಗಿಡಗಳನ್ನು ಬೆಳಸಿದ್ದಾರೆ. ಇಂತಹವರನ್ನು ಗುರುತಿಸುವ, ಸನ್ಮಾನಿಸುವ ಕೆಲಸ ನಡೆಯಬೇಕು’ ಎಂದು ಹೇಳಿದರು.</p>.<p>ಬೆಂಗಳೂರಿನ ಭುವನೇಶ್ವರಿ ಚಾರಿಟಬಲ್ ಟ್ರಸ್ಟ್ನ ಎಚ್.ಆರ್.ರಾಜಶೇಖರ ರೆಡ್ಡಿ ಮಾತನಾಡಿ ‘ಬೆಂಗಳೂರಿನಲ್ಲಿ ನಾವು ಕೂಡ 2000 ಗಿಡಗಳನ್ನು ನೆಟ್ಟಿದ್ದೇವೆ. ನಗರ, ಪಟ್ಟಣ ಪ್ರದೇಶಗಳು ಕಾಂಕ್ರೀಟ್ ಮಯವಾಗಿದ್ದು, ಇಂದು ಸಮರ್ಪಕ ಗಾಳಿ, ನೀರು ಸಿಗದಂತಹ ವಾತಾವರಣ ಇಲ್ಲ’ ಎಂದು ತಿಳಿಸಿದರು.</p>.<p>ವೈಲ್ಡ್ ಲೈಫ್ ವಾರ್ಡನ್ ಮಲ್ಲೇಶಪ್ಪ ಮಾತನಾಡಿ, ‘ಅಳಿವಂಚಿನಲ್ಲಿರುವಂತಹ ಸಸ್ಯಗಳನ್ನು ಬೆಳೆಸುವಂತಹ ಕೆಲಸ ಮಾಡಬೇಕಾಗಿದೆ. ರಾಮೇಗೌಡರು ಇಂತಹ ನೂರಾರು ತರಹದ ವಿವಿಧ ಜಾತಿಯ ಗಿಡಗಳನ್ನು ಬೆಳೆಸುತ್ತಿದ್ದಾರೆ’ ಎಂದು ತಿಳಿಸಿದರು.</p>.<p>ಸನ್ಮಾನದ ಸಂದರ್ಭದಲ್ಲಿ ರಾಮೇಗೌಡರಿಗೆ ₹1 ಲಕ್ಷ ನಗದು ಬಹುಮಾನ ನೀಡಿ ಅವರ ಕಾರ್ಯವನ್ನು ಪ್ರೋತ್ಸಾಹಿಸಲಾಯಿತು. </p>.<p>ದೀನಬಂಧು ಸಂಸ್ಥೆಯ ಪ್ರಭು, ಕೇತನ್ ಬಿಳಿಗಿರಿರಂಗನ ಬೆಟ್ಟದ ಸಣ್ಣರಂಗೇಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ಸೋಲಿಗರಿಗೂ ಕಾಡಿನ ಪಾರಂಪರಿಕ ಜ್ಞಾನ ಇದ್ದು ನಾಡಿನ ಕಡೆ ಕಾಡು ಕೂಡ ನಡೆದು ಬರುವಂತಾಗಲಿ ಎಂದು ದೀನಬಂಧು ಸಂಸ್ಥೆಯ ಗೌವರ ಕಾರ್ಯದರ್ಶಿ ಜಿ.ಎಸ್.ಜಯದೇವ ಸೋಮವಾರ ತಿಳಿಸಿದರು.</p>.<p>ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಜಡೇರುದ್ರಸ್ವಾಮಿ ನರ್ಸರಿಯಲ್ಲಿ ಅರಣ್ಯ ವೃಕ್ಷಗಳ ಬೀಜ ಸಂಗ್ರಹಿಸಿ ಅವುಗಳನ್ನು ಬೆಳೆಸುವ ವಿಶಿಷ್ಟ ವಿಧಾನವನ್ನು ಕರಗತ ಮಾಡಿಕೊಂಡಿರುವ ಬಂಗ್ಲೆಪೋಡಿನ ರಾಮೇಗೌಡರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.</p>.<p>‘ರಾಮೇಗೌಡರು ಇದುವರೆವಗೂ ₹2 ಲಕ್ಷ ಸಸಿ ಮಾಡಿದ್ದಾರೆ. ಅವರ ನರ್ಸರಿಯಲ್ಲಿ ಅಪಾಯದ ಅಂಚಿನಲ್ಲಿರುವಂತಹ ಅಪರೂಪದ ಸಸ್ಯ ನಶಿಸಿಹೋಗದಂತೆ ಅವುಗಳ ಬೀಜಗಳಿಂದ ಸಸಿಗಳನ್ನು ಬೆಳೆಸಿ ನಾಡಿನ ವಿವಿಧ ಸಂಸ್ಥೆಗಳಿಗೆ ವಿತರಿಸಿದ್ದಾರೆ’ ಎಂದರು.</p>.<p>‘ರಾಮೇಗೌಡ ಅವರು ಅಪರೂಪದ 350ಕ್ಕೂ ಹೆಚ್ಚು ಗಿಡಗಳನ್ನು ಬೆಳಸಿದ್ದಾರೆ. ಇಂತಹವರನ್ನು ಗುರುತಿಸುವ, ಸನ್ಮಾನಿಸುವ ಕೆಲಸ ನಡೆಯಬೇಕು’ ಎಂದು ಹೇಳಿದರು.</p>.<p>ಬೆಂಗಳೂರಿನ ಭುವನೇಶ್ವರಿ ಚಾರಿಟಬಲ್ ಟ್ರಸ್ಟ್ನ ಎಚ್.ಆರ್.ರಾಜಶೇಖರ ರೆಡ್ಡಿ ಮಾತನಾಡಿ ‘ಬೆಂಗಳೂರಿನಲ್ಲಿ ನಾವು ಕೂಡ 2000 ಗಿಡಗಳನ್ನು ನೆಟ್ಟಿದ್ದೇವೆ. ನಗರ, ಪಟ್ಟಣ ಪ್ರದೇಶಗಳು ಕಾಂಕ್ರೀಟ್ ಮಯವಾಗಿದ್ದು, ಇಂದು ಸಮರ್ಪಕ ಗಾಳಿ, ನೀರು ಸಿಗದಂತಹ ವಾತಾವರಣ ಇಲ್ಲ’ ಎಂದು ತಿಳಿಸಿದರು.</p>.<p>ವೈಲ್ಡ್ ಲೈಫ್ ವಾರ್ಡನ್ ಮಲ್ಲೇಶಪ್ಪ ಮಾತನಾಡಿ, ‘ಅಳಿವಂಚಿನಲ್ಲಿರುವಂತಹ ಸಸ್ಯಗಳನ್ನು ಬೆಳೆಸುವಂತಹ ಕೆಲಸ ಮಾಡಬೇಕಾಗಿದೆ. ರಾಮೇಗೌಡರು ಇಂತಹ ನೂರಾರು ತರಹದ ವಿವಿಧ ಜಾತಿಯ ಗಿಡಗಳನ್ನು ಬೆಳೆಸುತ್ತಿದ್ದಾರೆ’ ಎಂದು ತಿಳಿಸಿದರು.</p>.<p>ಸನ್ಮಾನದ ಸಂದರ್ಭದಲ್ಲಿ ರಾಮೇಗೌಡರಿಗೆ ₹1 ಲಕ್ಷ ನಗದು ಬಹುಮಾನ ನೀಡಿ ಅವರ ಕಾರ್ಯವನ್ನು ಪ್ರೋತ್ಸಾಹಿಸಲಾಯಿತು. </p>.<p>ದೀನಬಂಧು ಸಂಸ್ಥೆಯ ಪ್ರಭು, ಕೇತನ್ ಬಿಳಿಗಿರಿರಂಗನ ಬೆಟ್ಟದ ಸಣ್ಣರಂಗೇಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>