ಹನೂರು ತಾಲ್ಲೂಕು ಬಂಡಹಳ್ಳಿ ಗ್ರಾದ ಸುಂದ್ರಮ್ಮ ಮತ್ತು ಮಹದೇವಪ್ಪನವರ ಮಗ, 30 ವರ್ಷದ ಎಂ.ನಾಗೇಂದ್ರ ಅವರು ಗುರುಸ್ವಾಮಿ ಅವರಿಗೆ ದೂರದ ಸಂಬಂಧಿಯೂ ಹೌದು. ಕಳೆದ ವರ್ಷ ಗುರುಸ್ವಾಮಿ ಅವರು ಮಠದ ಆಸ್ತಿಯನ್ನು ಇವರ ಹೆಸರಿಗೆ ಉಯಿಲು ಬರೆದಿದ್ದು ವಿವಾದ ಸೃಷ್ಟಿಸಿತ್ತು. ನಂತರ ಒತ್ತಡಕ್ಕೆ ಮಣಿದು, ಉಯಿಲು ರದ್ದುಗೊಳಿಸಿದ್ದರು.