<p><strong>ಚಾಮರಾಜನಗರ: </strong>ಒಂದೂವರೆ ತಿಂಗಳ ಹಿಂದೆ ತಾಲ್ಲೂಕಿನ ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ಕೋವಿಡ್–19 ಪರೀಕ್ಷಾ ಪ್ರಯೋಗಾಲಯ ತಾತ್ಕಾಲಿಕವಾಗಿ ಮುಚ್ಚಿರುವುದರಿಂದಾಗಿ ಕೋವಿಡ್ ವಿರುದ್ಧ ಜಿಲ್ಲಾಡಳಿತ ನಡೆಸುತ್ತಿರುವ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ.</p>.<p>ಪ್ರಯೋಗಾಲಯದ ತಂತ್ರಜ್ಞೆಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಪ್ರಯೋಗಾಲಯವನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿರುವುದರಿಂದ ಮೂರು ದಿನಗಳಿಂದ ಪರೀಕ್ಷೆ ನಡೆಯುತ್ತಿಲ್ಲ.ಸಂಗ್ರಹಿಸಲಾಗುತ್ತಿರುವ ಗಂಟಲ ದ್ರವ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎರಡು ದಿನಗಳಿಂದ ವರದಿ ಬಂದಿಲ್ಲ.</p>.<p>ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ, ಸೋಮವಾರ ಸಂಜೆಯವರೆಗೆ978 ಮಾದರಿಗಳ ವರದಿ ಬರಬೇಕಿದೆ.</p>.<p class="Subhead"><strong>ಸಿಬ್ಬಂದಿ ಇಲ್ಲ:</strong> ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡರೂ ಒಂದೆರಡು ದಿನಗಳ ಕಾಲ ಪ್ರಯೋಗಾಲಯವನ್ನು ಸೀಲ್ ಡೌನ್ ಮಾಡಿ ನಂತರ ಪರೀಕ್ಷಾ ಕಾರ್ಯ ಆರಂಭಿಸಬಹುದು. ಆದರೆ, ಇಲ್ಲಿ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಉಳಿದ ಆರು ಮಂದಿ ಕೂಡ ಆರು ದಿನಗಳ ಮನೆ ಕ್ವಾರಂಟೈನ್ಗೆ ಒಳಗಾಗಿದ್ದಾರೆ.</p>.<p>ಪರೀಕ್ಷೆ ನಡೆಸುವ ಅನುಭವ ಹೊಂದಿರುವ ಬೇರೆ ಸಿಬ್ಬಂದಿ ವೈದ್ಯಕೀಯ ಕಾಲೇಜಿನಲ್ಲಿ ಇಲ್ಲ. ಇಂತಹ ಪರಿಸ್ಥಿತಿ ನಿರ್ಮಾಣದ ಕಲ್ಪನೆಯೇ ಇಲ್ಲದೇ ಇದ್ದುದರಿಂದ ಪರ್ಯಾಯ ತಂಡವನ್ನು ಸಿದ್ಧಪಡಿಸುವ ಕೆಲಸ ನಡೆದಿಲ್ಲ. ಹಾಗಾಗಿ, ಮತ್ತಷ್ಟು ತೊಂದರೆಯಾಗಿದೆ.</p>.<p class="Subhead"><strong>ಹೆಚ್ಚಿದ್ದ ಪರೀಕ್ಷೆಗಳು:</strong>ಕೋವಿಡ್–19 ನಿಯಂತ್ರಣದಲ್ಲಿ ಪರೀಕ್ಷೆ ಅತ್ಯಂತ ಮಹತ್ವದ ಪಾತ್ರ ವಹಿಸುವುದರಿಂದ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಲು ಜಿಲ್ಲಾಡಳಿತ ಒತ್ತು ನೀಡಿತ್ತು.</p>.<p>ವಾರದಿಂದೀಚೆಗೆ ಜಿಲ್ಲೆಯಲ್ಲಿ ಗಂಟಲ ದ್ರವ ಮಾದರಿಗಳ ಸಂಗ್ರಹ ಹಾಗೂ ಪರೀಕ್ಷೆಗಳ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿತ್ತು. ದಿನಕ್ಕೆ 300ರವರೆಗೆ ಪರೀಕ್ಷೆಗಳು ನಡೆಯುತ್ತಿದ್ದವು. ಒಂದೇ ದಿನದಲ್ಲಿ ವರದಿಯೂ ಬರುತ್ತಿತ್ತು.</p>.<p>ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಪ್ರಯೋಗಾಲಯವನ್ನು ಮುಚ್ಚಬೇಕಾಗಿ ಬಂದಿರುವುದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.</p>.<p>‘ಜಿಲ್ಲೆಯಲ್ಲಿ ಸದ್ಯ 12 ಗಂಟಲ ದ್ರವ ಮಾದರಿ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದ್ದು, ದಿನವೊಂದಕ್ಕೆ 350ರವೆಗೂ ಗಂಟಲ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಬೇರೆ ಪ್ರಯೋಗಾಲಯಗಳ ಮೇಲೆ ಈಗಾಗಲೇ ಒತ್ತಡ ಹೆಚ್ಚಿರುವುದರಿಂದ ನಮ್ಮ ವರದಿಗಳು ಬರುವುದಕ್ಕೆ ವಿಳಂಬವಾಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p class="Subhead"><strong>ವರದಿ ಬೇಗ ಬರಬೇಕು: </strong>ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಪರೀಕ್ಷಾ ವರದಿ ಶೀಘ್ರವಾಗಿ ಲಭ್ಯವಾಗುವುದು ಮುಖ್ಯ. ಬೇಗ ಬಂದಷ್ಟೂ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಅನುಕೂಲವಾಗುತ್ತದೆ. ಜೊತೆಗೆ ರೋಗಿಯ ಸಂಪರ್ಕಿತರನ್ನು ವೇಗವಾಗಿ ಪತ್ತೆ ಹಚ್ಚುವುದಕ್ಕೂ ಸಾಧ್ಯವಾಗುತ್ತದೆ.</p>.<p>ಎರಡು ದಿನಗಳಿಂದ ವರದಿಗಳು ಬರದೇ ಇರುವುದರಿಂದ, ಈಗ ಒಂದೇ ಬಾರಿ ವರದಿ ಬಂದರೆ ದೃಢಪಟ್ಟ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇರುತ್ತದೆ. ಜೊತೆಗೆ, ಅವರ ಸಂಪರ್ಕಿತರನ್ನು ಪತ್ತೆ ಹಚ್ಚುವುದೂ ಕಷ್ಟವಾಗುತ್ತದೆ. ಇದರಿಂದಾಗಿ ಸೋಂಕು ಇನ್ನಷ್ಟು ಹರಡುವ ಸಂಭವವೂ ಇರುತ್ತದೆ.</p>.<p class="Briefhead"><strong>ಇಂದು ಅಥವಾ ನಾಳೆ ಆರಂಭ ಸಾಧ್ಯತೆ</strong></p>.<p>ಈ ಮಧ್ಯೆ, ಜಿಲ್ಲಾಡಳಿತ ಹಾಗೂ ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಪ್ರಯೋಗಾಲಯವನ್ನು ಮತ್ತೆ ತೆರೆಯಲು ಪ್ರಯತ್ನ ಪಡುತ್ತಿದ್ದಾರೆ.</p>.<p>ಕ್ವಾರಂಟೈನ್ನಲ್ಲಿರುವ ಸಿಬ್ಬಂದಿ ಕನಿಷ್ಠ ಆರು ದಿನಗಳ ಕಾಲ ಮನೆಯಲ್ಲಿ ಇರಬೇಕಾಗುತ್ತದೆ. ಮನೆಯಿಂದಲೇ ಅವರ ನೆರವನ್ನು ಪಡೆದು, ಲಭ್ಯವಿರುವ ಸಿಬ್ಬಂದಿ ಮೂಲಕ ಪರೀಕ್ಷೆ ಮಾಡಿಸುವ ಯೋಚನೆಯೂ ಅಧಿಕಾರಿಗಳಲ್ಲಿದೆ.</p>.<p>‘ಪ್ರಯೋಗಾಲಯ ಆದಷ್ಟು ಬೇಗ ಕಾರ್ಯಾರಂಭ ಮಾಡಿದರೆ ನಮಗೆ ಅನುಕೂಲವಾಗುತ್ತದೆ. ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಮಂಗಳವಾರ ಅಥವಾ ಬುಧವಾರ ಆರಂಭವಾಗಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬಹುತೇಕ ಬುಧವಾರ ಮತ್ತೆ ಪರೀಕ್ಷೆ ಆರಂಭವಾಗಲಿದೆ’ ಎಂಬ ಅಭಿಪ್ರಾಯವನ್ನು ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್ ಅವರು ವ್ಯಕ್ತಪಡಿಸಿದರು.</p>.<p>ಬುಧವಾರದ ಹೊತ್ತಿಗೆ, ಪ್ರಯೋಗಾಲಯದ ಸಿಬ್ಬಂದಿ ಐದು ದಿನಗಳ ಕಾಲ ಮನೆ ಕ್ವಾರಂಟೈನ್ನಲ್ಲಿ ಇದ್ದ ಹಾಗೆ ಆಗುತ್ತದೆ. ನಂತರ ಅವರ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಿ, ಅದರಲ್ಲಿ ನೆಗೆಟಿವ್ ಬಂದರೆ ಅವರು ಮತ್ತೆ ಕರ್ತವ್ಯ ಆರಂಭಿಸಬಹುದು ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಒಂದೂವರೆ ತಿಂಗಳ ಹಿಂದೆ ತಾಲ್ಲೂಕಿನ ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ಕೋವಿಡ್–19 ಪರೀಕ್ಷಾ ಪ್ರಯೋಗಾಲಯ ತಾತ್ಕಾಲಿಕವಾಗಿ ಮುಚ್ಚಿರುವುದರಿಂದಾಗಿ ಕೋವಿಡ್ ವಿರುದ್ಧ ಜಿಲ್ಲಾಡಳಿತ ನಡೆಸುತ್ತಿರುವ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ.</p>.<p>ಪ್ರಯೋಗಾಲಯದ ತಂತ್ರಜ್ಞೆಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಕಾರಣಕ್ಕೆ ಪ್ರಯೋಗಾಲಯವನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾಗಿ ಬಂದಿರುವುದರಿಂದ ಮೂರು ದಿನಗಳಿಂದ ಪರೀಕ್ಷೆ ನಡೆಯುತ್ತಿಲ್ಲ.ಸಂಗ್ರಹಿಸಲಾಗುತ್ತಿರುವ ಗಂಟಲ ದ್ರವ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎರಡು ದಿನಗಳಿಂದ ವರದಿ ಬಂದಿಲ್ಲ.</p>.<p>ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ, ಸೋಮವಾರ ಸಂಜೆಯವರೆಗೆ978 ಮಾದರಿಗಳ ವರದಿ ಬರಬೇಕಿದೆ.</p>.<p class="Subhead"><strong>ಸಿಬ್ಬಂದಿ ಇಲ್ಲ:</strong> ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡರೂ ಒಂದೆರಡು ದಿನಗಳ ಕಾಲ ಪ್ರಯೋಗಾಲಯವನ್ನು ಸೀಲ್ ಡೌನ್ ಮಾಡಿ ನಂತರ ಪರೀಕ್ಷಾ ಕಾರ್ಯ ಆರಂಭಿಸಬಹುದು. ಆದರೆ, ಇಲ್ಲಿ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಉಳಿದ ಆರು ಮಂದಿ ಕೂಡ ಆರು ದಿನಗಳ ಮನೆ ಕ್ವಾರಂಟೈನ್ಗೆ ಒಳಗಾಗಿದ್ದಾರೆ.</p>.<p>ಪರೀಕ್ಷೆ ನಡೆಸುವ ಅನುಭವ ಹೊಂದಿರುವ ಬೇರೆ ಸಿಬ್ಬಂದಿ ವೈದ್ಯಕೀಯ ಕಾಲೇಜಿನಲ್ಲಿ ಇಲ್ಲ. ಇಂತಹ ಪರಿಸ್ಥಿತಿ ನಿರ್ಮಾಣದ ಕಲ್ಪನೆಯೇ ಇಲ್ಲದೇ ಇದ್ದುದರಿಂದ ಪರ್ಯಾಯ ತಂಡವನ್ನು ಸಿದ್ಧಪಡಿಸುವ ಕೆಲಸ ನಡೆದಿಲ್ಲ. ಹಾಗಾಗಿ, ಮತ್ತಷ್ಟು ತೊಂದರೆಯಾಗಿದೆ.</p>.<p class="Subhead"><strong>ಹೆಚ್ಚಿದ್ದ ಪರೀಕ್ಷೆಗಳು:</strong>ಕೋವಿಡ್–19 ನಿಯಂತ್ರಣದಲ್ಲಿ ಪರೀಕ್ಷೆ ಅತ್ಯಂತ ಮಹತ್ವದ ಪಾತ್ರ ವಹಿಸುವುದರಿಂದ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಲು ಜಿಲ್ಲಾಡಳಿತ ಒತ್ತು ನೀಡಿತ್ತು.</p>.<p>ವಾರದಿಂದೀಚೆಗೆ ಜಿಲ್ಲೆಯಲ್ಲಿ ಗಂಟಲ ದ್ರವ ಮಾದರಿಗಳ ಸಂಗ್ರಹ ಹಾಗೂ ಪರೀಕ್ಷೆಗಳ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿತ್ತು. ದಿನಕ್ಕೆ 300ರವರೆಗೆ ಪರೀಕ್ಷೆಗಳು ನಡೆಯುತ್ತಿದ್ದವು. ಒಂದೇ ದಿನದಲ್ಲಿ ವರದಿಯೂ ಬರುತ್ತಿತ್ತು.</p>.<p>ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಪ್ರಯೋಗಾಲಯವನ್ನು ಮುಚ್ಚಬೇಕಾಗಿ ಬಂದಿರುವುದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.</p>.<p>‘ಜಿಲ್ಲೆಯಲ್ಲಿ ಸದ್ಯ 12 ಗಂಟಲ ದ್ರವ ಮಾದರಿ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದ್ದು, ದಿನವೊಂದಕ್ಕೆ 350ರವೆಗೂ ಗಂಟಲ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಬೇರೆ ಪ್ರಯೋಗಾಲಯಗಳ ಮೇಲೆ ಈಗಾಗಲೇ ಒತ್ತಡ ಹೆಚ್ಚಿರುವುದರಿಂದ ನಮ್ಮ ವರದಿಗಳು ಬರುವುದಕ್ಕೆ ವಿಳಂಬವಾಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p class="Subhead"><strong>ವರದಿ ಬೇಗ ಬರಬೇಕು: </strong>ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಪರೀಕ್ಷಾ ವರದಿ ಶೀಘ್ರವಾಗಿ ಲಭ್ಯವಾಗುವುದು ಮುಖ್ಯ. ಬೇಗ ಬಂದಷ್ಟೂ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಅನುಕೂಲವಾಗುತ್ತದೆ. ಜೊತೆಗೆ ರೋಗಿಯ ಸಂಪರ್ಕಿತರನ್ನು ವೇಗವಾಗಿ ಪತ್ತೆ ಹಚ್ಚುವುದಕ್ಕೂ ಸಾಧ್ಯವಾಗುತ್ತದೆ.</p>.<p>ಎರಡು ದಿನಗಳಿಂದ ವರದಿಗಳು ಬರದೇ ಇರುವುದರಿಂದ, ಈಗ ಒಂದೇ ಬಾರಿ ವರದಿ ಬಂದರೆ ದೃಢಪಟ್ಟ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇರುತ್ತದೆ. ಜೊತೆಗೆ, ಅವರ ಸಂಪರ್ಕಿತರನ್ನು ಪತ್ತೆ ಹಚ್ಚುವುದೂ ಕಷ್ಟವಾಗುತ್ತದೆ. ಇದರಿಂದಾಗಿ ಸೋಂಕು ಇನ್ನಷ್ಟು ಹರಡುವ ಸಂಭವವೂ ಇರುತ್ತದೆ.</p>.<p class="Briefhead"><strong>ಇಂದು ಅಥವಾ ನಾಳೆ ಆರಂಭ ಸಾಧ್ಯತೆ</strong></p>.<p>ಈ ಮಧ್ಯೆ, ಜಿಲ್ಲಾಡಳಿತ ಹಾಗೂ ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಪ್ರಯೋಗಾಲಯವನ್ನು ಮತ್ತೆ ತೆರೆಯಲು ಪ್ರಯತ್ನ ಪಡುತ್ತಿದ್ದಾರೆ.</p>.<p>ಕ್ವಾರಂಟೈನ್ನಲ್ಲಿರುವ ಸಿಬ್ಬಂದಿ ಕನಿಷ್ಠ ಆರು ದಿನಗಳ ಕಾಲ ಮನೆಯಲ್ಲಿ ಇರಬೇಕಾಗುತ್ತದೆ. ಮನೆಯಿಂದಲೇ ಅವರ ನೆರವನ್ನು ಪಡೆದು, ಲಭ್ಯವಿರುವ ಸಿಬ್ಬಂದಿ ಮೂಲಕ ಪರೀಕ್ಷೆ ಮಾಡಿಸುವ ಯೋಚನೆಯೂ ಅಧಿಕಾರಿಗಳಲ್ಲಿದೆ.</p>.<p>‘ಪ್ರಯೋಗಾಲಯ ಆದಷ್ಟು ಬೇಗ ಕಾರ್ಯಾರಂಭ ಮಾಡಿದರೆ ನಮಗೆ ಅನುಕೂಲವಾಗುತ್ತದೆ. ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಮಂಗಳವಾರ ಅಥವಾ ಬುಧವಾರ ಆರಂಭವಾಗಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬಹುತೇಕ ಬುಧವಾರ ಮತ್ತೆ ಪರೀಕ್ಷೆ ಆರಂಭವಾಗಲಿದೆ’ ಎಂಬ ಅಭಿಪ್ರಾಯವನ್ನು ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್ ಅವರು ವ್ಯಕ್ತಪಡಿಸಿದರು.</p>.<p>ಬುಧವಾರದ ಹೊತ್ತಿಗೆ, ಪ್ರಯೋಗಾಲಯದ ಸಿಬ್ಬಂದಿ ಐದು ದಿನಗಳ ಕಾಲ ಮನೆ ಕ್ವಾರಂಟೈನ್ನಲ್ಲಿ ಇದ್ದ ಹಾಗೆ ಆಗುತ್ತದೆ. ನಂತರ ಅವರ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಿ, ಅದರಲ್ಲಿ ನೆಗೆಟಿವ್ ಬಂದರೆ ಅವರು ಮತ್ತೆ ಕರ್ತವ್ಯ ಆರಂಭಿಸಬಹುದು ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>