<p><strong>ಯಳಂದೂರು:</strong>ಈ ಬೊಂಬೆಗಳು ಮಾತನಾಡುತ್ತವೆ. ಅತ್ತಿತ್ತ ಶರವೇಗದಲ್ಲಿ ಚಲಿಸುತ್ತವೆ. ರಾಜ–ರಾಣಿಬೊಂಬೆಗಳು ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಹೋಗುತ್ತವೆ. ಹಿನ್ನಲೆಯಲ್ಲಿ ರಾಜಪ್ರಮುಖರು, ಒಂಟೆಗಳ ಸವಾರರ ಸದ್ದಿನ, ಜೊತೆಗೆ ರಂಗಗೀತೆ, ಸಂಭಾಷಣೆಯೂ ಕೇಳುತ್ತದೆ.</p>.<p>–ಇದು ತಾಲ್ಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಇಂಡಿಯನ್ಫೌಂಡೇಷನ್ ಆಫ್ ಆರ್ಟ್ಸ್ ಆಯೋಜಿಸಿದ್ದ ಮೂರು ದಿನಗಳ ಗೊಂಬೆ ತಯಾರಿ ಕಾರ್ಯಾಗಾರದಲ್ಲಿ ಕಂಡು ಬಂದಿದ್ದು.</p>.<p>ಕ್ಲಿಷ್ಟ ವಿಷಯಗಳನ್ನು ರಂಜನೀಯವಾಗಿ ಹಾಗೂ ಸೃಜನಶಿಲ ಕಲಿಕೆಯಮೂಲಕ ಮಕ್ಕಳಿಗೆ ತಿಳಿಹೇಳುವಂತೆ ಮಾಡಲು ವಿಶಿಷ್ಟವಾದ ಕಾರ್ಯಾಗಾರವನ್ನು ಸರ್ಕಾರಿ ಆಯೋಜಿಸಲಾಗಿತ್ತು.</p>.<p>ಪಾಠವನ್ನು ಮಕ್ಕಳು ಸರಳವಾಗಿ ಅರ್ಥೈಸಿಕೊಳ್ಳಲು ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯ. ತಮಗೆ ಬೇಕಾದ ಬಣ್ಣಬಣ್ಣದ ಬೊಂಬೆಕಟ್ಟುವ ಕಲೆಯನ್ನು ವಿದ್ಯಾರ್ಥಿಗಳೇ ಕಲಿಯುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಬೊಂಬೆಗಳ ಮೂಲಕ ಇತಿಹಾಸ, ವಿಜ್ಞಾನ,ಭಾಷೆ ಮತ್ತು ಪಠ್ಯೇತರ ವಿಷಯಗಳನ್ನು ಲವಲವಿಕೆಯಿಂದ ಕಲಿಯಬಹುದು ಎಂಬ ಲೆಕ್ಕಾಚಾರವೂ ಕಾರ್ಯಾಗಾರದ ಹಿಂದಿದೆ.</p>.<p>‘ವಿದ್ಯಾರ್ಥಿಗಳೇ ಸೂತ್ರದ ಬೊಂಬೆ, ತೊಗಲು ಗೊಂಬೆ ತಯಾರಿಸುತ್ತಾರೆ. ‘ನೋ ಕಾಸ್ಟ್ ಮತ್ತು ಲೋ ಕಾಸ್ಟ್’ ತತ್ವದಡಿ ಅನುಪಯುಕ್ತ ಚೆಂಡು,ಬಟ್ಟೆ, ಮುರಿದ ಪೈಪ್, ದಾರ, ಕೈಗವಸು ಬಳಸಿ ಅಂದ ಚಂದದ ಬೊಂಬೆಗಳನ್ನು ಪಠ್ಯದಅಗತ್ಯಕ್ಕೆ ಅನುಗುಣವಾಗಿ ಮಾಡಿಕೊಳ್ಳುತ್ತಾರೆ. ಸಿದ್ಧಗೊಂಡ ಬೊಂಬೆಗಳನ್ನು ನಾಟಕ,ಪದ್ಯ, ರಂಗಗೀತೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಕಾರ್ಯಕ್ರಮಗಳಲ್ಲಿಬಳಸಲಾಗುತ್ತದೆ’ ಎಂದು ರಂಗಶಿಕ್ಷಕ ಎಂ.ಎಲ್. ಮಧುಕರ್ ಮಳವಳ್ಳಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘9ನೇ ತರಗತಿಯ ಕನ್ನಡ ಪಠ್ಯದ ಪ್ರಜಾನಿಷ್ಠೆ ವಿಷಯ ಮತ್ತು ಸರ್ವಪಲ್ಲಿ ರಾಧಾಕೃಷ್ಣರಮಾದರಿ ಪಾಠಗಳಿಗೆ ಬೊಂಬೆಗಳನ್ನು ಆರಂಭದಲ್ಲಿ ಬಳಸಿಕೊಳ್ಳಲಾಗಿದೆ. ಬೊಂಬೆಗೆ ಅಲಂಕಾರ ಮಾಡುವುದನ್ನು ಕಲಿತೆವು. ಬೊಂಬೆಗೆ ಧರಿಸುವ ಬಣ್ಣಬಣ್ಣದ ಬಟ್ಟೆಗಳಿಗೆ ಹೊಲಿಗೆ ಹಾಕಿ ಕೈ ಬೆರಳಿಗೆ ತೂರಿಕೊಳ್ಳುವಂತೆ ತಯಾರಿ ಮಾಡಿಕೊಳ್ಳುತ್ತೇವೆ. ಬೆರಳಿಗೆತಗುಲಿಸಿಕೊಂಡು ಪ್ರದರ್ಶಿಸುವ ಬಗೆಯನ್ನು ನಿರ್ದೇಶಕರ ಮಾರ್ಗದರ್ಶನದಲ್ಲಿ ಅಭ್ಯಾಸಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿಗಳಾದ ಕ್ಷಮಾ, ಸತೀಶ್, ಗೀತಾಂಜಲಿ ಮತ್ತು ಕಿರಣ್ಹೇಳಿದರು.</p>.<p>ಬೊಂಬೆಗಳಿಗೆ ವೇಷ ಭೂಷಣ ತೊಡಿಸಿ, ಸಂಗೀತ ಸಂಯೋಜಿಸಿ ಮಕ್ಕಳೇ ಪ್ರಸ್ತುತಪಡಿಸುತ್ತಾರೆ. 35 ಮಕ್ಕಳು ತಿಂಗಳಿಗೆ 3 ದಿನ ಬೊಂಬೆ ರಚನೆ ಕಾರ್ಯಗಾರದಲ್ಲಿ ಭಾಗವಹಿಸುತ್ತಾರೆ. ನಂತರತರಗತಿ ಬೋಧನೆಯ ಅಗತ್ಯ ಪರಿಗಣಿಸಿ ಶಿಕ್ಷಕರು ಅವುಗಳನ್ನು ಬಳಕೆ ಮಾಡುತ್ತಾರೆ’ ಎಂದು ಮುಖ್ಯ ಶಿಕ್ಷಕ ಎಂ.ಸಿ. ಮಹದೇವಸ್ವಾಮಿ ಹೇಳಿದರು.</p>.<p><strong>ಆಸಕ್ತ ಮಕ್ಕಳಿಗೆ ತರಬೇತಿ</strong></p>.<p>‘ಭಾರತೀಯ ಸಂಸ್ಕೃತಿಯಲ್ಲಿ ಬೊಂಬೆಗೆ ಮಹತ್ವ ಇದೆ. ಬೊಂಬೆಗಳ ತಯಾರಿಮತ್ತು ಬಳಕೆ ಅಳಿವಿನಂಚಿನಲ್ಲಿ ಇದೆ. ಹಾಗಾಗಿ, ಬೊಂಬೆ ತಯಾರಿ ಕಲೆ ಉಳಿಯಬೇಕು, ಬೆಳೆಯಬೇಕು. ಹಾಗಾಗಿ ಶಾಲೆಗಳಿಗೆ ತೆರಳಿ ಆಸಕ್ತ ಮಕ್ಕಳಿಗೆ ಕಾರ್ಯಾಗಾರ ನಡೆಸಿ ತರಬೇತಿ ನೀಡುತ್ತೇವೆ. ತೊಗಲು ಮತ್ತುರಂಗಕ್ಕೆ ಬಳಸಲು ವೈವಿಧರ್ಯಮಯ ಬೊಂಬೆಗಳನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸುತ್ತಾರೆ’ ಎಂದುಬೆಂಗಳೂರಿನಿಂದ ಬಂದಿದ್ದ ತರಬೇತುದಾರ ಸಿದ್ದಪ್ಪ ಬಿರದಾರ್ ಮತ್ತು ಗಣೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong>ಈ ಬೊಂಬೆಗಳು ಮಾತನಾಡುತ್ತವೆ. ಅತ್ತಿತ್ತ ಶರವೇಗದಲ್ಲಿ ಚಲಿಸುತ್ತವೆ. ರಾಜ–ರಾಣಿಬೊಂಬೆಗಳು ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಹೋಗುತ್ತವೆ. ಹಿನ್ನಲೆಯಲ್ಲಿ ರಾಜಪ್ರಮುಖರು, ಒಂಟೆಗಳ ಸವಾರರ ಸದ್ದಿನ, ಜೊತೆಗೆ ರಂಗಗೀತೆ, ಸಂಭಾಷಣೆಯೂ ಕೇಳುತ್ತದೆ.</p>.<p>–ಇದು ತಾಲ್ಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಇಂಡಿಯನ್ಫೌಂಡೇಷನ್ ಆಫ್ ಆರ್ಟ್ಸ್ ಆಯೋಜಿಸಿದ್ದ ಮೂರು ದಿನಗಳ ಗೊಂಬೆ ತಯಾರಿ ಕಾರ್ಯಾಗಾರದಲ್ಲಿ ಕಂಡು ಬಂದಿದ್ದು.</p>.<p>ಕ್ಲಿಷ್ಟ ವಿಷಯಗಳನ್ನು ರಂಜನೀಯವಾಗಿ ಹಾಗೂ ಸೃಜನಶಿಲ ಕಲಿಕೆಯಮೂಲಕ ಮಕ್ಕಳಿಗೆ ತಿಳಿಹೇಳುವಂತೆ ಮಾಡಲು ವಿಶಿಷ್ಟವಾದ ಕಾರ್ಯಾಗಾರವನ್ನು ಸರ್ಕಾರಿ ಆಯೋಜಿಸಲಾಗಿತ್ತು.</p>.<p>ಪಾಠವನ್ನು ಮಕ್ಕಳು ಸರಳವಾಗಿ ಅರ್ಥೈಸಿಕೊಳ್ಳಲು ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯ. ತಮಗೆ ಬೇಕಾದ ಬಣ್ಣಬಣ್ಣದ ಬೊಂಬೆಕಟ್ಟುವ ಕಲೆಯನ್ನು ವಿದ್ಯಾರ್ಥಿಗಳೇ ಕಲಿಯುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಬೊಂಬೆಗಳ ಮೂಲಕ ಇತಿಹಾಸ, ವಿಜ್ಞಾನ,ಭಾಷೆ ಮತ್ತು ಪಠ್ಯೇತರ ವಿಷಯಗಳನ್ನು ಲವಲವಿಕೆಯಿಂದ ಕಲಿಯಬಹುದು ಎಂಬ ಲೆಕ್ಕಾಚಾರವೂ ಕಾರ್ಯಾಗಾರದ ಹಿಂದಿದೆ.</p>.<p>‘ವಿದ್ಯಾರ್ಥಿಗಳೇ ಸೂತ್ರದ ಬೊಂಬೆ, ತೊಗಲು ಗೊಂಬೆ ತಯಾರಿಸುತ್ತಾರೆ. ‘ನೋ ಕಾಸ್ಟ್ ಮತ್ತು ಲೋ ಕಾಸ್ಟ್’ ತತ್ವದಡಿ ಅನುಪಯುಕ್ತ ಚೆಂಡು,ಬಟ್ಟೆ, ಮುರಿದ ಪೈಪ್, ದಾರ, ಕೈಗವಸು ಬಳಸಿ ಅಂದ ಚಂದದ ಬೊಂಬೆಗಳನ್ನು ಪಠ್ಯದಅಗತ್ಯಕ್ಕೆ ಅನುಗುಣವಾಗಿ ಮಾಡಿಕೊಳ್ಳುತ್ತಾರೆ. ಸಿದ್ಧಗೊಂಡ ಬೊಂಬೆಗಳನ್ನು ನಾಟಕ,ಪದ್ಯ, ರಂಗಗೀತೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಕಾರ್ಯಕ್ರಮಗಳಲ್ಲಿಬಳಸಲಾಗುತ್ತದೆ’ ಎಂದು ರಂಗಶಿಕ್ಷಕ ಎಂ.ಎಲ್. ಮಧುಕರ್ ಮಳವಳ್ಳಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘9ನೇ ತರಗತಿಯ ಕನ್ನಡ ಪಠ್ಯದ ಪ್ರಜಾನಿಷ್ಠೆ ವಿಷಯ ಮತ್ತು ಸರ್ವಪಲ್ಲಿ ರಾಧಾಕೃಷ್ಣರಮಾದರಿ ಪಾಠಗಳಿಗೆ ಬೊಂಬೆಗಳನ್ನು ಆರಂಭದಲ್ಲಿ ಬಳಸಿಕೊಳ್ಳಲಾಗಿದೆ. ಬೊಂಬೆಗೆ ಅಲಂಕಾರ ಮಾಡುವುದನ್ನು ಕಲಿತೆವು. ಬೊಂಬೆಗೆ ಧರಿಸುವ ಬಣ್ಣಬಣ್ಣದ ಬಟ್ಟೆಗಳಿಗೆ ಹೊಲಿಗೆ ಹಾಕಿ ಕೈ ಬೆರಳಿಗೆ ತೂರಿಕೊಳ್ಳುವಂತೆ ತಯಾರಿ ಮಾಡಿಕೊಳ್ಳುತ್ತೇವೆ. ಬೆರಳಿಗೆತಗುಲಿಸಿಕೊಂಡು ಪ್ರದರ್ಶಿಸುವ ಬಗೆಯನ್ನು ನಿರ್ದೇಶಕರ ಮಾರ್ಗದರ್ಶನದಲ್ಲಿ ಅಭ್ಯಾಸಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿಗಳಾದ ಕ್ಷಮಾ, ಸತೀಶ್, ಗೀತಾಂಜಲಿ ಮತ್ತು ಕಿರಣ್ಹೇಳಿದರು.</p>.<p>ಬೊಂಬೆಗಳಿಗೆ ವೇಷ ಭೂಷಣ ತೊಡಿಸಿ, ಸಂಗೀತ ಸಂಯೋಜಿಸಿ ಮಕ್ಕಳೇ ಪ್ರಸ್ತುತಪಡಿಸುತ್ತಾರೆ. 35 ಮಕ್ಕಳು ತಿಂಗಳಿಗೆ 3 ದಿನ ಬೊಂಬೆ ರಚನೆ ಕಾರ್ಯಗಾರದಲ್ಲಿ ಭಾಗವಹಿಸುತ್ತಾರೆ. ನಂತರತರಗತಿ ಬೋಧನೆಯ ಅಗತ್ಯ ಪರಿಗಣಿಸಿ ಶಿಕ್ಷಕರು ಅವುಗಳನ್ನು ಬಳಕೆ ಮಾಡುತ್ತಾರೆ’ ಎಂದು ಮುಖ್ಯ ಶಿಕ್ಷಕ ಎಂ.ಸಿ. ಮಹದೇವಸ್ವಾಮಿ ಹೇಳಿದರು.</p>.<p><strong>ಆಸಕ್ತ ಮಕ್ಕಳಿಗೆ ತರಬೇತಿ</strong></p>.<p>‘ಭಾರತೀಯ ಸಂಸ್ಕೃತಿಯಲ್ಲಿ ಬೊಂಬೆಗೆ ಮಹತ್ವ ಇದೆ. ಬೊಂಬೆಗಳ ತಯಾರಿಮತ್ತು ಬಳಕೆ ಅಳಿವಿನಂಚಿನಲ್ಲಿ ಇದೆ. ಹಾಗಾಗಿ, ಬೊಂಬೆ ತಯಾರಿ ಕಲೆ ಉಳಿಯಬೇಕು, ಬೆಳೆಯಬೇಕು. ಹಾಗಾಗಿ ಶಾಲೆಗಳಿಗೆ ತೆರಳಿ ಆಸಕ್ತ ಮಕ್ಕಳಿಗೆ ಕಾರ್ಯಾಗಾರ ನಡೆಸಿ ತರಬೇತಿ ನೀಡುತ್ತೇವೆ. ತೊಗಲು ಮತ್ತುರಂಗಕ್ಕೆ ಬಳಸಲು ವೈವಿಧರ್ಯಮಯ ಬೊಂಬೆಗಳನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸುತ್ತಾರೆ’ ಎಂದುಬೆಂಗಳೂರಿನಿಂದ ಬಂದಿದ್ದ ತರಬೇತುದಾರ ಸಿದ್ದಪ್ಪ ಬಿರದಾರ್ ಮತ್ತು ಗಣೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>