<p><strong>ಚಾಮರಾಜನಗರ: </strong>ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ತಾಲ್ಲೂಕಿನ ಹರದನಹಳ್ಳಿ ಗ್ರಾಮಸ್ಥರು ಸೋಂಕು ನಿಯಂತ್ರಣಕ್ಕಾಗಿ ಗ್ರಾಮ ದೇವತೆಗಳ ಮೊರೆ ಹೋಗಿದ್ದಾರೆ.</p>.<p>ಗ್ರಾಮದ 18 ಜಾತಿಗಳ ಜನರು ಸೇರಿಗ್ರಾಮದೇವತೆಗಳಾದ ಮಾರಮ್ಮ, ಕುಂಟಮ್ಮ, ಕಾಳಮ್ಮ, ಸಿದ್ದಪ್ಪಾಜಿ, ಮಂಟೇಸ್ವಾಮಿಗೆ ಕಂಡಾಯ ಪೂಜೆ, ಗದ್ದುಗೆ ಪೂಜೆ ಸಲ್ಲಿಸಿದ್ದಾರೆ. ಗ್ರಾಮಗಳ ಬೀದಿಗಳಲ್ಲಿ ಕಂಡಾಯ ಗದ್ದುಗೆಗಳ ಮೆರವಣಿಗೆ ಮಾಡಿ, ಕೋವಿಡ್ ನಿಯಂತ್ರಣವಾಗಲಿ ಎಂದು ಪ್ರಾರ್ಥಿಸಿದ್ದಾರೆ.</p>.<p>ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಜಾರಿಗೆ ಬಂದ ಕಾರಣ ಹಲವು ಊರುಗಳಲ್ಲಿ ಕೊಂಡೋತ್ಸವ, ಮಾರಿ ಹಬ್ಬಗಳು ರದ್ದಾಗಿದ್ದವು.</p>.<p>ಈ ಹಿಂದೆ, ಹಿಂದೆ ಪ್ಲೇಗು, ಕಾಲರಾ, ಸಿಡುಬು, ಮಲೇರಿಯ ಸೇರಿದಂತೆ ಇತರ ಸಾಂಕ್ರಾಮಿಕ ಕಾಯಿಲೆಗಳು ಬಂದ ಸಂದರ್ಭದಲ್ಲಿ ವೇಳೆ ಗ್ರಾಮದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಗ್ರಾಮದ ದೇವರನ್ನು ಪೂಜಿಸಿದರೆ ಕಾಯಿಲೆ ದೂರವಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.</p>.<p>‘ನಮ್ಮ ಗ್ರಾಮ ಮಾತ್ರವಲ್ಲದೇ, ಇಡೀ ಜಗತ್ತಿನಲ್ಲಿ ಕೋವಿಡ್–19 ಪ್ರಭಾವ ಕಡಿಮೆಯಾಗಲಿ ಎಂದು ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿದ್ದೇವೆ.ನಮ್ಮ ನಂಬಿಕೆ ಯಾವಾಗಲೂ ಹುಸಿಯಾಗುವುದಿಲ್ಲ’ ಎಂದು ಗ್ರಾಮದ ಯಜಮಾನ ರಂಗಸ್ವಾಮಿ ಅವರು ಹೇಳಿದರು.</p>.<p>ಉತ್ಸವದಲ್ಲಿ ಗ್ರಾಮದ ಯಜಮಾನರು, ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ತಾಲ್ಲೂಕಿನ ಹರದನಹಳ್ಳಿ ಗ್ರಾಮಸ್ಥರು ಸೋಂಕು ನಿಯಂತ್ರಣಕ್ಕಾಗಿ ಗ್ರಾಮ ದೇವತೆಗಳ ಮೊರೆ ಹೋಗಿದ್ದಾರೆ.</p>.<p>ಗ್ರಾಮದ 18 ಜಾತಿಗಳ ಜನರು ಸೇರಿಗ್ರಾಮದೇವತೆಗಳಾದ ಮಾರಮ್ಮ, ಕುಂಟಮ್ಮ, ಕಾಳಮ್ಮ, ಸಿದ್ದಪ್ಪಾಜಿ, ಮಂಟೇಸ್ವಾಮಿಗೆ ಕಂಡಾಯ ಪೂಜೆ, ಗದ್ದುಗೆ ಪೂಜೆ ಸಲ್ಲಿಸಿದ್ದಾರೆ. ಗ್ರಾಮಗಳ ಬೀದಿಗಳಲ್ಲಿ ಕಂಡಾಯ ಗದ್ದುಗೆಗಳ ಮೆರವಣಿಗೆ ಮಾಡಿ, ಕೋವಿಡ್ ನಿಯಂತ್ರಣವಾಗಲಿ ಎಂದು ಪ್ರಾರ್ಥಿಸಿದ್ದಾರೆ.</p>.<p>ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಜಾರಿಗೆ ಬಂದ ಕಾರಣ ಹಲವು ಊರುಗಳಲ್ಲಿ ಕೊಂಡೋತ್ಸವ, ಮಾರಿ ಹಬ್ಬಗಳು ರದ್ದಾಗಿದ್ದವು.</p>.<p>ಈ ಹಿಂದೆ, ಹಿಂದೆ ಪ್ಲೇಗು, ಕಾಲರಾ, ಸಿಡುಬು, ಮಲೇರಿಯ ಸೇರಿದಂತೆ ಇತರ ಸಾಂಕ್ರಾಮಿಕ ಕಾಯಿಲೆಗಳು ಬಂದ ಸಂದರ್ಭದಲ್ಲಿ ವೇಳೆ ಗ್ರಾಮದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಗ್ರಾಮದ ದೇವರನ್ನು ಪೂಜಿಸಿದರೆ ಕಾಯಿಲೆ ದೂರವಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.</p>.<p>‘ನಮ್ಮ ಗ್ರಾಮ ಮಾತ್ರವಲ್ಲದೇ, ಇಡೀ ಜಗತ್ತಿನಲ್ಲಿ ಕೋವಿಡ್–19 ಪ್ರಭಾವ ಕಡಿಮೆಯಾಗಲಿ ಎಂದು ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿದ್ದೇವೆ.ನಮ್ಮ ನಂಬಿಕೆ ಯಾವಾಗಲೂ ಹುಸಿಯಾಗುವುದಿಲ್ಲ’ ಎಂದು ಗ್ರಾಮದ ಯಜಮಾನ ರಂಗಸ್ವಾಮಿ ಅವರು ಹೇಳಿದರು.</p>.<p>ಉತ್ಸವದಲ್ಲಿ ಗ್ರಾಮದ ಯಜಮಾನರು, ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>