ಪಿಕ್ಚರೂ ಇಲ್ಲ, ರೀಲೂ ಇಲ್ಲ: ‘ಪಿಕ್ಚರ್ ಅಭಿ ಬಾಕಿ ಹೈ’ ಎಂದು ಆನಂದ್ ಸಿಂಗ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಶೇಖರ್ ಅವರು, ‘ಯಾವ ಪಿಕ್ಚರೂ ಇಲ್ಲ, ಯಾವ ರೀಲೂ ಇಲ್ಲ. ಅವರಿಗೆ ಸಮಸ್ಯೆ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಹೇಳಬಹುದು. ಕೆಲವರಿಗೆ ಖಾತೆ ಹಂಚಿಕೆಯ ವಿಚಾರದಲ್ಲಿ ಮುನಿಸು ಇದ್ದುದು ನಿಜ. ಈಗ ಅದು ಸರಿಯಾಗಿದೆ’ ಎಂದರು.