ಆರೋಪಿಗಳ ಪರ ಯಾರೊಬ್ಬರೂ ವಕಾಲತ್ತು ವಹಿಸುವುದಿಲ್ಲ ಎಂದು ಜಿಲ್ಲಾ ವಕೀಲರ ಸಂಘ ಈಗಾಗಲೇ ಘೋಷಿಸಿದೆ. ಮೈಸೂರಿನ ವಕೀಲ ಮಹದೇವಸ್ವಾಮಿ ಎಂಬುವವರು ಆರೋಪಿಗಳ ಪರ ವಾದ ಮಂಡಲು ಈ ಮುಂದೆ ಬಂದಿದ್ದರು. ಡಿ.27ರಂದು ನ್ಯಾಯಾಲಯಕ್ಕೂ ಭೇಟಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಕಲೆ ಹಾಕಿದ್ದರು. ಆದರೆ, ಈ ಪ್ರಕರಣದಲ್ಲಿ ವಕಾಲತ್ತು ವಹಿಸುವುದಿಲ್ಲ ಎಂದು ಎರಡು ದಿನಗಳ ಹಿಂದೆ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಆರೋಪಿಗಳ ಪರವಾಗಿ ಬೇರೆ ಯಾರಾದರೂ ಹಾಜರಾಗಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.