ಗುರುವಾರ , ಮಾರ್ಚ್ 23, 2023
31 °C

37 ಹೊಸ ಪ್ರಕರಣ, ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 37 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 50 ಮಂದಿ ಗುಣಮುಖರಾಗಿದ್ದಾರೆ. 

ಎರಡು ದಿನಗಳಿಂದ ಸಾವಿನ ಪ್ರಕರಣ ಹೆಚ್ಚಾಗಿದ್ದು, ಶನಿವಾರವೂ ಮೂವರು ಮೃತಪಟ್ಟಿದ್ದಾರೆ. 

ಗುಣಮುಖರಾದವರ ಸಂಖ್ಯೆ ಸೋಂಕಿತರಿಗಿಂತ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 440ಕ್ಕೆ ಇಳಿದಿದೆ. 27 ಮಂದಿ ಐಸಿಯುನಲ್ಲಿ ಹಾಗೂ 23 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆ ಹಾಗೂ ಕೇರ್‌ ಕೇಂದ್ರಗಳಲ್ಲಿದ್ದಾರೆ. 

ಜಿಲ್ಲೆಯಲ್ಲಿ ಇದುವರೆಗೆ 31,313 ಮಂದಿಗೆ ಕೋವಿಡ್‌ ಬಂದಿದೆ. 30,358 ಮಂದಿ ಗುಣಮುಖರಾಗಿದ್ದಾರೆ.  

ಶನಿವಾರ 1,508 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,467 ಮಂದಿಗೆ ನೆಗೆಟಿವ್‌ ಆಗಿದೆ. 41 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಜಿಲ್ಲಾಡಳಿತ 37 ಪ್ರಕರಣಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

37 ಮಂದಿ ಸೋಂಕಿತರಲ್ಲಿ ಚಾಮರಾಜನಗರ ತಾಲ್ಲೂಕಿನ 16 ಮಂದಿ ಇದ್ದಾರೆ. ಗುಂಡ್ಲುಪೇಟೆಯ ಮೂವರು, ಕೊಳ್ಳೇಗಾಲದ ಆರು ಮಂದಿ, ಹನೂರಿನ ಒಂಬತ್ತು ಹಾಗೂ ಯಳಂದೂರು ತಾಲ್ಲೂಕಿನ ಮೂವರು ಸೇರಿದ್ದಾರೆ.

ಗುಣಮುಖರಾದ 50 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 24, ಗುಂಡ್ಲುಪೇಟೆಯ ಐವರು, ಕೊಳ್ಳೇಗಾಲದ ಆರು, ಹನೂರಿನ ಎಂಟು ಹಾಗೂ ಯಳಂದೂರು ತಾಲ್ಲೂಕಿನ ನಾಲ್ವರು ಮತ್ತು ಹೊರಜಿಲ್ಲೆಯ ಮೂವರು ಸೇರಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.